Sunday, December 14, 2025
Sunday, December 14, 2025

JDS ಚಿಕ್ಕಮಗಳೂರು ಜಿಲ್ಲೆ ಕುನ್ನಾಳು ಗ್ರಾಮದಲ್ಲಿ ಜೆಡಿಎಸ್ ನಿಂದ ಬಿಜೆಪಿಗೆ ಪಕ್ಷಾಂತರ

Date:

JDS  ಚಿಕ್ಕಮಗಳೂರು, ತಾಲ್ಲೂಕಿನ ಕುನ್ನಾಳು ಗ್ರಾಮದ ಎಸ್.ಟಿ. ಸಮುದಾಯದ ಅನೇಕ ಮಂದಿ ಮುಖಂಡರು ಹಾಗೂ ಗ್ರಾಮಸ್ಥರು ಜೆಡಿಎಸ್ ಪಕ್ಷವನ್ನು ತೊರೆದು ಭಾರತೀಯ ಜನತಾಪಾರ್ಟಿಯ ಸಿದ್ದಾಂತಗಳನ್ನು ಒಪ್ಪಿ ಶಾಸಕರ ಸ್ವಗೃಹದಲ್ಲಿ ಬಿಜೆಪಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಟಿ.ರವಿ ಸರ್ಕಾರದ ಯೋಜನೆಗಳನ್ನು ಯಾವುದೇ ಜಾತಿ, ಬೇಧವಿಲ್ಲದೇ ಸರ್ವಸಮಾನರಿಗೂ ನೀಡಿರುವ ಏಕೈಕ ಪಕ್ಷ ಬಿಜೆಪಿ. ಇಂತಹ ಅನೇಕ ಕಾರ್ಯಕ್ರಮಗಳನ್ನು ನೀಡಿ ಹೆಮ್ಮೆಗಳಿ ಸಿರುವ ಕಾರಣವೇ ಅನೇಕ ಮುಖಂಡರುಗಳು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜನಪರ ಯೋಜನೆಗಳನ್ನು ಎಸ್.ಟಿ. ಸಮುದಾಯಕ್ಕೆ ನೀಡುತ್ತಾ ಬಂದಿದೆ. ಇದರಿಂದ ಜನಾಂಗದ ಅಭಿವೃಧ್ದಿಯಾಗಿದೆ. ಇತರರು ಹೇಳುವ ಬೇಡದ ವಿಷಯಗಳಿಗೆ ಕಿವಿಗೊಡದೇ ಸೂಕ್ಷ್ಮವಾಗಿ ಗಮನಿಸಿ ಬಿಜೆಪಿ ಅಭಿವೃದ್ದಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಬಿಜೆಪಿ ಗ್ರಾಮಾಂತರ ಎಸ್ಟಿ ಮೋರ್ಚ ಅಧ್ಯಕ್ಷ ಹೆಚ್.ಎಂ.ಮಧುಕುಮಾರ್ ಮಾತನಾಡಿ ರಾಜ್ಯ ಸರ್ಕಾರವು ಎಸ್.ಟಿ. ಜನಾಂಗಕ್ಕೆ ನೀಡಿರುವ ಮೀಸಲಾತಿ ಹಾಗೂ ಜನಪರ ಯೋಜನೆಗಳ ಕಾರಣವೇ ಇಂದು ಅನೇಕ ಮಂದಿ ಅನೇಕ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದರು.

JDS  ಇದೇ ವೇಳೆ ಕುನ್ನಾಳು ಗ್ರಾಮದ ಸುಮಾರು ಇಪ್ಪತ್ತು ಹೆಚ್ಚು ಮಂದಿ ಜೆಡಿಎಸ್ ತೊರೆದು ಬಿಜೆಪಿಯನ್ನು ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್.ಟಿ.ಮೋರ್ಚಾ ಲಕ್ಯಾ ಹೋಬಳಿ ಪ್ರಧಾನ ಕಾರ್ಯದರ್ಶಿ ತಮ್ಮೇಗೌಡ ನಗರ ಅಧ್ಯಕ್ಷ ಪ್ರದೀಪ್, ಕುನ್ನಾಳು ಗ್ರಾಮದವರಾದ ರಜಿನೇಶ್ ರವಿ, ಬಸವರಾಜು, ಮಲ್ಲಿಕಾರ್ಜುನ್, ನೇತ್ರಾ, ಲೀಲಾವತಿ ಅಮೈಯಮ್ಮ, ಮಂಜುಳಾ, ಆರತಿ ಸಣ್ಣಮ್ಮ, ಭಾಗ್ಯ, ನೀಲಮ್ಮ, ನೇತ್ರಾವತಿ, ಶೋಭಾ, ಲತಾ ಮತ್ತಿತ ರರಿದ್ದರು.

Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...