Saturday, September 28, 2024
Saturday, September 28, 2024

Araga Jnanendra ಕಣ್ಮರೆಯಾದ ಅ.ಪ.ರಾಮಭಟ್ಟರಿಗೆ ಸಚಿವ ಜ್ಞಾನೇಂದ್ರ ಅವರಿಂದ ಬರಹ ನಮನ

Date:

ನನ್ನ ಜೀವನಕ್ಕೆ ಮಾರ್ಗದರ್ಶನ ಮಾಡಿದ ಮಹನೀಯರ ಮತ್ತೊಂದು ಕೊಂಡಿ ಕಳಚಿತು.

Araga Jnanendra ಶಬ್ದಗಳು ಸಿಗುತ್ತಿಲ್ಲ ಏನು ಹೇಳುವುದೋ ಗೊತ್ತಾಗುತ್ತಿಲ್ಲ, ಕಳೆದ ಹತ್ತಾರು ವರ್ಷಗಳಿಂದ ಶಿವಮೊಗ್ಗದಲ್ಲಿ ನನಗೆ ಎಲ್ಲಿ ಊಟ ಸಿಗದೇ ಇದ್ದರೂ ಅ. ಪ. ರಾಮಭಟ್ಟರ ಮನೆಯಲ್ಲಿ ಊಟ ಯಾವತ್ತೂ ಎಷ್ಟೊತ್ತಿಗೆ ಹೋದರು ಇರುತ್ತಿತ್ತು.

ಅವರು ಅದೆಷ್ಟೇ ಕಾರ್ಯದ ಒತ್ತಡದಲ್ಲಿ ಇದ್ದರೂ ಅವರ ಮನೆಯ ತಾಯಂದಿರು ಪ್ರತಿ ಸಾರಿಯೂ ಪ್ರೀತಿಯಿಂದ ಊಟ ಬಡಿಸುತ್ತಿದ್ದರು. ರಾಮಭಟ್ಟರಂತೂ ಪಕ್ಕದಲ್ಲಿ ಕುಳಿತು ಊಟವಾಗುವ ತನಕ ಮಾತನಾಡುತ್ತಾ ಇರುತ್ತಿದ್ದರು.ಅದೆಷ್ಟು ಪ್ರೀತಿ ಅವರಿಗೆ,ದೇವರು ಅವರನ್ನು ಇಷ್ಟು ಬೇಗ ಕರೆದುಕೊಂಡನಲ್ಲಾ ಎನ್ನುವ ಆಘಾತ ನೋವು ತುಂಬಾ ಆಗುತ್ತಿದೆ.

Araga Jnanendra ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಜನಪ್ರತಿನಿಧಿಯ ಕರ್ತವ್ಯದ ವಿವಿಧ ಸಭೆಗಳಿಗೆ ಹೋಗಬೇಕಾದಾಗ ಹೋಟೆಲ್ ತೆರೆದಿರುತ್ತಿರಲಿಲ್ಲ.
ಕುಡಿಯಲು ನೀರು ಕೂಡ ಸಿಗದೇ ಇದ್ದ ಕೊರೋನಾ ಕಾಲಘಟ್ಟದಲ್ಲಿ ಶಿವಮೊಗ್ಗದಲ್ಲಿ ನಮಗೆ ಒಳ್ಳೇ ಊಟ ರಾಮ ಭಟ್ಟರ ಮನೆಯಲ್ಲಿ ತಯಾರಿರುತ್ತಿತ್ತು, ನಾವು ಶಿವಮೊಗ್ಗ ಬರುವ ವರ್ತಮಾನ ಮೊದಲೇ ತಿಳಿದುಕೊಂಡು ಮಧ್ಯಾಹ್ನ ಊಟಕ್ಕೆ ಮನೆಗೆ ಬರಬೇಕು ಅಂತ ಕರೆ ಮಾಡುತ್ತಿದ್ದರು. ನನಗೆ ಮಾತ್ರವಲ್ಲದೇ ಜೊತೆಗಿದ್ದ ನನ್ನ ಸಿಬ್ಬಂದಿ ಮತ್ತು ಪಕ್ಷದ ಸ್ನೇಹಿತರಿಗೂ ಅದು ಒಮ್ಮೊಮ್ಮೆ 20 ಅಂಕಿ ದಾಟಿದ ಸಂಖ್ಯೆಗೂ ಅವರ ಮನೆಯಲ್ಲಿ ಊಟ ಇರುತ್ತಿತ್ತು. ಊಟದ ರುಚಿ ಮತ್ತು ಜೊತೆಗಿದ್ದ ಪ್ರೀತಿ ಬಗ್ಗೆ ನೆನಪು ಮಾಡಿಕೊಂಡಾಗ ರಾಮ ಭಟ್ಟರಿಗೆ ರಾಮ ಭಟ್ಟರು ಮಾತ್ರ ಹೋಲಿಕೆಯಾಗಬಲ್ಲರು ಎಂದೆನಿಸುತ್ತದೆ.

ಅಂಬುತೀರ್ಥ ಅಭಿವೃದ್ಧಿ ಆಗಬೇಕು ಎಂದು ಅದೇಕೋ ಅವರಾಗೆ ಮನಸ್ಸಿಗೆ ತಂದುಕೊಂಡು ನಮ್ಮೆಲ್ಲರಲ್ಲಿ ಅಭಿಪ್ರಾಯ ಹಂಚಿಕೊಂಡರು.
ಅವರ ಪ್ರಭಾವ ಎಷ್ಟಿತ್ತೆಂದರೆ ಅವರ ಅಪೇಕ್ಷೆ ತಿಳಿದ ಶಿವಮೊಗ್ಗ ಜಿಲ್ಲೆಯ ಪ್ರಮುಖರ ಸಹಯೋಗದೊಂದಿಗೆ ಸೇರಿ 6 ಕೋಟಿ ರೂಪಾಯಿಗಳನ್ನು ವಿವಿಧ ಇಲಾಖೆಗಳಿಂದ ಮಂಜೂರು ಮಾಡಿಸಿದೆವು.
ಇವತ್ತು ಶರಾವತಿ ಉಗಮ ಸ್ಥಾನ ಹೊಸ ರೂಪ ಪಡೆದುಕೊಂಡಿದೆಯೆಂದರೆ
ಇದರ ಹಿಂದೆ ಇದ್ದಿದ್ದು ರಾಮ ಭಟ್ಟರ ಅಪೇಕ್ಷೆಯೇ ಹೊರತು ಜನಪ್ರತಿನಿಧಿಗಳ ಹೆಚ್ಚುಗಾರಿಕೆ ಅಂತ ನನಗೇನೂ ಅನಿಸುವುದಿಲ್ಲ.

ಸಂಘದ ಸ್ವಯಂ ಸೇವಕರಾಗಿ, ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಜನರ ಪ್ರೀತಿಯ ಅರ್ಚಕರಾಗಿ, ಶಿವಮೊಗ್ಗ ನಗರದ ಜನಸಾಮಾನ್ಯರ ಜೊತೆಗೆ ಪ್ರಭಾವಿ ವ್ಯಕ್ತಿಗಳಿಗೂ ಅಚ್ಚುಮೆಚ್ಚಿನ ಗುರುಗಳಾಗಿ ಸಾವಿರಾರು ಜನರ ಅದರಲ್ಲೂ ಬಡವರ ಪುರೋಹಿತರಾಗಿ ಬದುಕಿ ಬಾಳಿದ ಅ.ಪ. ರಾಮಭಟ್ಟರ ಅಗಲಿಕೆಯ ಈ ದಿನ ನನಗಂತೂ ಹೆಚ್ಚು ದುಃಖದ ದಿನ ಎಂದರೆ ಅತಿಶಯೋಕ್ತಿಯಲ್ಲ.

ಕಳೆದವಾರದ ಅಧಿವೇಶನ ಮುಗಿಸಿದವನೇ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಟರನ್ನು ನೋಡಲು ಕಳೆದ ಶುಕ್ರವಾರ ಸಂಜೆ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಮೂಲಕ ಹೋಗಿ ರಾತ್ರಿ 8 ಘಂಟೆ ಸುಮಾರಿಗೆ ನೋಡಿ ಮಾತನಾಡಿಸಿ ಬಂದಿದ್ದೆ ಇಂದು ಅವರಿಲ್ಲಾ ಎನ್ನುವುದು ನಂಬಲಾಗುತ್ತಿಲ್ಲ.

ಒಳ್ಳೆಯವರನ್ನು ಭಗವಂತ ಬೇಗ ತನ್ನ ಬಳಿ ಕರೆದುಕೊಳ್ಳುತ್ತಾನೆ, ಎನ್ನುವ ಮಾತು ಮತ್ತೊಮ್ಮೆ ಸತ್ಯವಾಯಿತು ಎಂದಷ್ಟೆ ಹೇಳಬಹುದು.
ಅವರ ಆತ್ಮಕ್ಕೆ ಶಾಂತಿ ದೊರಕಲಿ
ಅವರ ಕುಟುಂಬಕ್ಕೆ ಭಕ್ತರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ.

ಓಂ ಶಾಂತಿಃ..

ಶ್ರೀಆರಗ ಜ್ಞಾನೇಂದ್ರ
ಗೃಹಸಚಿವರು, ಕರ್ನಾಟಕ ಸರ್ಕಾರ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...