Saturday, December 6, 2025
Saturday, December 6, 2025

Photography ಛಾಯಾಗ್ರಹಣ ಒಂದು ಅದ್ಭುತವಾದ ಕಲೆ-ಪುಷ್ಪಾ ರಾಜೇಗೌಡ

Date:

Photography  ಬಾಳೆಹೊನ್ನೂರು : ಸಾವಿರಾರು ಪದಗಳ ಒಂದು ಸಮೂಹನವನ್ನು ಒಂದು ಛಾಯಾಚಿತ್ರ ದಿಂದ ಅರ್ಥೈಸಿಕೊಳ್ಳಬಹುದು ಎಂದು ಶ್ರೀಮತಿ ಪುಷ್ಪ ಟಿ.ಡಿ.ರಾಜೇಗೌಡ ಹೇಳಿದರು.

ತಾಲ್ಲೂಕಿನ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಜಿಲ್ಲಾ ಛಾಯಾಗ್ರಾಹಕರ ಹಾಗೂ ತಾಲ್ಲೂಕು ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶೃಂಚಿಕೊನಕ ಛಾಯಾ ಸಮ್ಮಿಲನ- 2023 ತರಬೇತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಛಾಯಾಗ್ರಹಣ ಒಂದು ಅದ್ಬುತ ಕಲೆಯಾಗಿದೆ. ಕೆಲವೊಂದು ಸನ್ನಿವೇಶಗಳನ್ನು ತಾಳ್ಮೆಯಿಂದ ಸೆರೆ ಹಿಡಿಯಬೇಕಾಗಿದೆ. ಛಾಯಾಗ್ರಹಣವನ್ನು ನಂಬಿ ಸಾವಿರಾರು ಕುಟುಂಬಗಳೂ ಜೀವನವನ್ನು ಕಂಡುಕೊಂಡಿದೆ. ಕೊರೋನಾ ಸಂದರ್ಭದಲ್ಲಿ ಛಾಯಾಗ್ರಾಹಕರ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಬಳಲಿ ಇತ್ತೀಚಿನ ದಿನಗಳಲ್ಲಿ ಚೇತರಿಕೆ ಕಂಡುಕೊಳ್ಳುತ್ತಿದ್ದಾರೆ ಎಂದರು.

ಛಾಯಾಗ್ರಾಹಕ ಸಂಘದ ರಾಜ್ಯಾಧ್ಯಕ್ಷ ಪರಮೇಶ್ವರ್ ಮಾತನಾಡಿ ಗ್ರಾಹಕರೇ ನಮ್ಮ ಅನ್ನದಾತರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರದ ಕ್ಯಾಮರಾಗಳು ಮಾರುಕಟ್ಟೆಯಲ್ಲಿ ಬಂದಿವೆ. ಗ್ರಾಮೀಣ ಪ್ರದೇಶದ ಛಾಯಾಗ್ರಾಹಕರಿಗೆ ಕ್ಯಾಮರಾ ತಂತ್ರಜ್ಞಾನವನ್ನು ತಿಳಿಸುವ ಉದ್ದೇಶದಿಂದ ಈ ಶಿಬಿರವನ್ನು ಏರ್ಪಡಿಸ ಲಾಗಿದೆ ಎಂದರು.

Photography  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಯಚಂದ್ರ ಶಿಬಿರದಲ್ಲಿ ಅಲ್ಪಮ್ ಡಿಸೈನ್, ಪೋಟೋ ಪ್ರೇಮ್, ಮೀಡಿಯಾ ಸ್ಟಾಫ್ಟವೇರ್ ಹಾಗೂ ಛಾಯಾಗ್ರಾಹಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದ್ದು ಎಲ್ಲರ ಈ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಎ.ಮುರುಳಿ, ನಿರ್ದೇಶಕರಾದ ವಸಂತ್‌ಕುಮಾರ್, ಚಂದ್ರಶೇಖರ್, ಜಿಲ್ಲಾ ಗೌರವಾಧ್ಯಕ್ಷ ಎಂ.ಓ. ಜೋಯಿ, ಉಪಾಧ್ಯಕ್ಷರಾದ ಹೇಮಂತ್‌ಕುಮಾರ್, ಕಾರ್ಯದರ್ಶಿ ವಿನಯ್, ದುರ್ಗೇಶ್, ಖಜಾಂಚಿ ಬಾಲಚಂದ್ರ, ಸಹ ಕಾರ್ಯದರ್ಶಿ ಭವಾನಿ ಶಂಕರ್, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಗೋಪಿನಾಥ್, ಕೊಪ್ಪ ಅಧ್ಯಕ್ಷ ಸಂದೀಪ್, ಎನ್.ಆರ್.ಪುರ ಅಧ್ಯಕ್ಷ ಸಾಜು, ಶೃಂಗೇರಿ ಅಧ್ಯಕ್ಷ ಅರುಣ್‌ಕುಮಾರ್, ಕಳಸ ಜಯಂತ್ ತೆಂಡ್ಕೂಲರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...