Bommayi ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್ ರಾಜ್ಯದ ಜನತೆಗೆ ಹಸಿಸುಳ್ಳು, ರೈತ ವಿರೋಧಿ ಹಾಗೂ ಚುನಾವಣಾ ಗಿಮಿಕ್ಗೆ ಒತ್ತು ನೀಡಿರುವ ಜನವಿರೋಧಿ ಬಜೆಟ್ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಹೆಚ್.ಹೆಚ್.ದೇವರಾಜ್ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಬಸವರಾಜ್ ಬೊಮ್ಮಾಯಿಯವರ ಅಧಿಕಾರದ ಕೊನೆಯ ಬಜೆಟ್ನಲ್ಲಿ ಶ್ರೀಸಾಮಾನ್ಯರಿಗೆ, ಮಹಿಳೆಯರಿಗೆ, ರೈತರಿಗೆ ಹಾಗೂ ಬೆಳೆಗಾರರಿಗೆ ನ್ಯಾಯಪೈಸೆ ಲಾಭವಿ ಲ್ಲದ ಬಜೆಟ್ ಎಂದ ಅವರು ಇದರಿಂದ ರಾಜ್ಯದ ಜನತೆಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದ್ದಾರೆ.
Bommayi ರಾಜ್ಯದಲ್ಲಿ ನೀರಾವರಿ ಯೋಜನೆಗಾಗಲೀ, ರೈತರು, ಕಾಫಿ ಬೆಳೆಗಾರರು ಹಾಗೂ ಅಡಿಕೆ ಬೆಳೆಗಾರರ ಸಾಲಮನ್ನಾಗೊಳಿಸಿದೇ ಹಸಿಸುಳ್ಳನ್ನು ಹೇಳಿಕೊಂಡು ಜನರಿಗೆ ಮಂಕುಬೂದಿ ಎರಚುವ ಬಜೆಟ್ ಆಗಿದೆ. ರಾಜ್ಯದ ಜನತೆಯು ಕೊನೆಯ ಬಜೆಟ್ನಲ್ಲಿ ಬಹಳಷ್ಟು ನಿರೀಕ್ಷೆ ಹೊಂದಿದ್ದರೂ ಸಹ ಎಲ್ಲವನ್ನೂ ಹುಸಿಗೊಳಿಸಲಾಗಿದೆ ಎಂದು ದೂರಿದ್ದಾರೆ.
ಪ್ರಸ್ತುತ ದಿನಗಳಲ್ಲಿ ರೈತಾಪಿ ಸಮುದಾಯವು ಬಹಳ ಸಂಕಷ್ಟವನ್ನು ಎದುರಿಸುತ್ತಿದೆ. ಅಡಿಕೆ ಬೆಳೆಗಾರರು ಹಳದಿ ಎಲೆ ರೋಗ ಬಾಧೆಯಿಂದ ಬಳಲುತ್ತಿದೆ. ಅದೇ ರೀತಿ ಕಾಫಿ ಬೆಳೆಗಾರರು ಸೇರಿದಂತೆ ಎಲ್ಲಾ ರೈತಾಪಿ ವರ್ಗದವರಿಗೂ ಸ್ಪಂದಿಸಲು ಬಜೆಟ್ನಲ್ಲಿ ಯಾವುದೇ ಕಾರ್ಯವಾಗಿಲ್ಲ ಎಂದಿದ್ದಾರೆ.
ವಿದ್ಯಾರ್ಥಿಗಳು ಹಾಗೂ ದಲಿತರ ನೈಜ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ವಿಫಲವಾಗಿದೆ. ಎರಡು ತಿಂಗಳ ನಂತರ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಚಿಸಲಾಗಿರುವ ಬೂಟಾಟಿಕೆಯ ಬಜೆಟ್ ಆಗಿದ್ದು ಸಿದ್ದರಾಮ್ಮಯ್ಯ ನೀಡಿದ ಇಂದಿರಾ ಕ್ಯಾಂಟೀನ್, ಅಕ್ಕಿ ವಿತರಣೆಯಂತಹ ಜನಪರ ಬಜೆಟ್ ಈ ಬಾರಿ ಕಾಣ ಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಬೊಮ್ಮಾಯಿ ಅವರ ಈ ಬಾರಿಯ ಬಜೆಟ್ನಲ್ಲಿ ಕೇವಲ ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರುಗಳಿಗೆ ಲಾಭದ ಬಜೆಟ್ ಆಗಿದೆಯೇ ಹೊರತು ಜನಸಾಮಾನ್ಯರಿಗೆ ಸಂಪೂರ್ಣ ವಿರೋಧಿಯಾಗಿದ್ದು ಮುಖ್ಯಮಂತ್ರಿಯ ಈ ಬಾರಿ ಬಜೆಟ್ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಎಡವಿ ರಾಜ್ಯದ ಜನತೆಗೆ ದ್ರೋಹವೆಸಗಿದ್ದಾರೆ ಎಂದಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.