Sunday, October 6, 2024
Sunday, October 6, 2024

Dwadasha Jyotirlinga ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ-09 ಮಹಾಕಾಲೇಶ್ವರ ಲಿಂಗ

Date:

Dwadasha jyotirlinga  ಮಹಾಕಾಲೇಶ್ವರ ಲಿಂಗ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿದೆ. ದೇವಾಲಯವು ಕ್ಷಿಪ್ರಾ ನದಿಯ ದಂಡೆಯ ಮೇಲಿದೆ. ಉಜ್ಜಯಿನಿ ಅಂದಾಕ್ಷಣ ನಮಗೆ
ಬೇತಾಳ ಕತೆಯ ವಿಕ್ರಮಾದಿತ್ಯ.ಮಹಾಕವಿ ಕಾಳಿದಾಸ ನೆನಪಿಗೆ ಬರುತ್ತಾರೆ.
ಆರನೇ ಶತಮಾನದಲ್ಲಿ ನಿರ್ಮಿಸಿದ ದೇವಾಲಯವಿದೆ. ವೈಶಿಷ್ಟ್ಯ ವೆಂದರೆ ಲಿಂಗವು ದಕ್ಷಿಣಾಭಿಮುಖವಾಗಿದೆ.
ಹಿಂದೆ ಅವಂತಿಪುರವೆಂಬ ನಗರದಲ್ಲಿ ವೇದಪ್ರಿಯನೆಂವ ವಿಪ್ರನಿದ್ದ.ಆತನಿಗೆ ದೇವಪ್ರಿಯ,ಮೇಧನ್,ಸುವಿರತನ್,ಧರ್ಮವಾದಿ
ಎಂಬ ಸುಪುತ್ರರಿದ್ದರು.

ಮಹಾಶಿವಭಕ್ತ ಕುಟುಂಬ. ಅವರನ್ನಾಳುತ್ತಿದ್ದ ದೂಷಣನೆಂಬ ರಾಜನಿದ್ದ. ಅವನದು ರಾಕ್ಷಸೀ ಪ್ರವೃತ್ತಿ. ಶಿವದ್ವೇಷಿಯಾಗಿದ್ದ. ಅಲ್ಲಿ
ಸುತ್ತಮುತ್ತಲಿದ್ದ ಋಷಿ ಸಮೂಹ ಕೂಡ ಯಜ್ಞಯಾಗಾದಿ ಮಾಡಿ ಶಿವನನ್ನೊಲಿಸಿಕೊಳ್ಳುವ ಪಯತ್ನ ನೋಡಿದ.ಕೋಪದಿಂದ ಬಂದು
ಶಿವಪೂಜೆಯಿಂದ ವಿಮುಖರಾಗಿರಿ. ಇಲ್ಲಿ ಯಾವುದೇ ಪೂಜಾದಿ ಕಾರ್ಯಗಳು ನೆರವೇರಕೂಡದು ಎಂದು
ಆಜ್ಞಾಪಿಸಿದ.

Dwadasha Jyotirlinga  ಪೀಡಿಸಲು ಆರಂಭಿಸಿದ.
ಋಷಿ ಸಮೂಹ ತಕ್ಷಣ ಹತ್ತಿರದಲ್ಲಿದ್ದ ವೇದಪ್ರಿಯನ ಮಕ್ಕಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರು.ಈ ಸಮಸ್ಯೆಗೆ ಪ್ರತಿಯಾಗಿ
ಪ್ರತಿಭಟಿಸುವುದಕ್ಕಿಂತ
ಶಿವಪೂಜೆಯಲ್ಲಿ ನಿರತರಾಗೋಣ.ಶಿವನೇ ಪರಿಹಾರಿಸುತ್ತಾನೆ ಎಂದು ಮಕ್ಕಳೆಲ್ಲ ಅಭಿಪ್ರಾಯಪಟ್ಟರು.

ಎಲ್ಲರೂ ರುದ್ರಾಕ್ಷಿ
ಧರಿಸಿದರು. ಇಪ್ಪತ್ತೊಂದು ವ್ರತಗಳು, ಹದಿನೆಂಟು ಪುರಾಣಗಳ ಪಠಣ,ಶ್ರವಣದಲ್ಲಿ ತೊಡಗಿಕೊಂಡರು.
ಅಲ್ಲಿನ ಮಣ್ಣಿನಲ್ಲಿ ಶಿವಲಿಂಗ ನಿರ್ಮಿಸಿ ಫೂಜಿಸತೊಡಗಿದರು.ಈ ಸಂಗತಿ ತಿಳಿದ ದೂಷಣ ಅಲ್ಲಿಗೆ ಅವರ ವ್ರತ,ಪೂಜೆಯನ್ನ ಧ್ವಂಸ
ಮಾಡಲು ಸೇವಕರಿಗೆ ಆಜ್ಞಾಪಿಸಿದ. ಅವರೆಲ್ಲರೂ ಗುಂಪಾಗಿ ಬರುತ್ತಿದ್ದಂತೆಯೇ ಚಮತ್ಕಾರವೇ ನಡೆದುಹೋಯಿತು. ಮಣ್ಣನ
ಕುಳಿಯಿಂದ ಬೃಹತ್ ಜ್ವಾಲೆ ಹೊಮ್ಮಿತು . ಲಿಂಗವೊಂದು ಮೇಲೆ ಬಂದು ಎರಡು ಭಾಗವಾಯಿತು.ನಡುವಿನಿಂದ
ಹುಲಿಚರ್ಮಧರಿಸಿದ ಶಿವನು ಶೂಲಾಯುಧಪಾಣಿಯಾಗಿ ಬಂದ.ಕಣ್ಣುಗಳಲ್ಲಿ ಕ್ರೋಧಾಗ್ನಿ.!.ಒಂದು ಹ್ಞುಂಕಾರ ಹಾಕಿದ.ಕ್ಷಣಾರ್ಧದಲ್ಲೇ
ದೂಷಣ ಮತ್ತು ಸೇವಕರು ಬೂದಿಯಾದರು.

ಹೀಗೆ ಅವರನ್ನ ಸುಟ್ಟ ಬೆಂಕಿಗೆ ನಾಶಾಗ್ನಿ ಆಯಿತು. ನಾಶಮಾಡುವ ಬೆಂಕಿಗೆ
ಮಹಾಕಾಲನೆಂದೂ ಕೆರಯುತ್ತಾರೆ.,
ಮಹಾಕಾಲನೆಂದು ಅಲ್ಲಿನ ಶಿವಲಿಂಗ ಪ್ರಖ್ಯಾತವಾಗಿದೆ. ಇಪ್ಪತ್ತನಾಲ್ಕು ಗಂಟೆಗ ಇಲ್ಲಿ ಎರಡು ತುಪ್ಪದದೀಪಗಳು
ಉರಿಯುತ್ತಿವೆ.ಬೆಳಗಿನ ವೇಳೆಯಲ್ಲಿ ಸ್ಮಶಾನದ ಬೂದಿಯಿಂದ ಅಭಿಷೇಕವಾಗುತ್ತದೆ.
ಅಷ್ಟಭೈರವರಲ್ಲೊಬ್ಬನಾದ ಕಾಲಭೈರವನ ಗುಡಿಯಿದೆ.ಇಲ್ಲಿರುವ ಕಾಲಭೈರವನಿಗೆ ಮದ್ಯದ ಅಭಿಷೇಕಮಾಡುತ್ತಾರೆ.ಮತ್ತು
ಮದ್ಯವನ್ನು ಪ್ರಸಾದ ರೂಪವಾಗಿಯೂ ನೀಡುತ್ತಾರೆ.

ಇಲ್ಲಿನ ಪ್ರದೇಶದಲ್ಲಿ ತಂತ್ರ ವಿದ್ಯೆ ಪಡೆದಂತಹವರು ವಾಮಾಚಾರಗಳನ್ನೂ ನಡೆಸುವುದೂ ಇದೆ..ಯೋಗಿನಿ ದೇವತೆಗಳ
ಆಲಯವೂ ಇದೆ.‌.
ಹನ್ನೆರಡು ವರ್ಷಗಳಿಗೊಮ್ಮೆ ಇಲ್ಲಿ ಕುಂಭಮೇಳ ವಿಜೃಂಭಣೆಯಿಂದ ನಡೆಯುತ್ತದೆ.ಮಹಾಶಿವರಾತ್ರಿಯ ಆಚರಣೆ ಇಲ್ಲಿ ವಿಶೇಷ.
ಮಹಾಕಾಲನ ಕೃಪೆಹೊಂದಿದವರಿಗೆ ಅಕಾಲಮರಣವಾಗದೆಂಬ ನಂಬಿಕೆಯಿದೆ
ಶ್ರೀ ಶಂಕರಾಚಾರ್ಯರ ಸ್ತುತಿ
ಆವಂತೀಕಾಯಂ ವಿಹಿತಾವತಾರಂ
ಮುಕ್ತಿಪ್ರದಾನಾಯ ಚ ಸಜ್ಜನಾನಾಮ್ |
ಅಕಾಲಮೃತ್ಯೋಃ ಪರಿರಕ್ಷಣಾರ್ಥಂ
ವಂದೇ ಮಹಾಕಾಲಮಹಂ ಸುರೇಶಂ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಅಕ್ಟೋಬರ್ 7 ರಂದು ಆಲ್ಕೊಳ‌ ಸುತ್ತಮುತ್ತ ವಿದ್ಯುತ್ ಸರಬರಾಜು ಇರುವುದಿಲ್ಲ

MESCOM ಶಿವಮೊಗ್ಗ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಶಿವಮೊಗ್ಗ...

Nehru Stadium Shimoga ಪ್ರಾಥಮಿಕ ಶಾಲಾಮಕ್ಕಳ ಕ್ರೀಡಾಕೂಟ ಉದ್ಘಾಟನೆ

Nehru Stadium Shimoga ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ...

Shimoga Dasara 2024 ಶಿವಮೊಗ್ಗ ರಂಗದಸರಾದಲ್ಲಿ ಅ.5 ರಿಂದ ನಾಟಕ ಪ್ರದರ್ಶನಗಳ ಸುಗ್ಗಿ

Shimoga Dasara 2024 ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯು ಆಯೋಜನೆ...

Shivamogga News ಕೆರೆ,ಕಟ್ಟೆ,ಹಳ್ಳ ಜಮೀನು ಇತರೆ ಸರ್ಕಾರದ ಸ್ವತ್ತು ಒತ್ತುವರಿ ಗಮನಕ್ಕೆ ಬಂದಾಕ್ಷಣ ಕ್ರಮ ಕೈಗೊಳ್ಳಿ-ನ್ಯಾ.ಬಿ.ಎ.ಪಾಟೀಲ್

Shivamogga News ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು...