Wednesday, October 2, 2024
Wednesday, October 2, 2024

ಮಾಗಿದ ಸಾಧಕನ ಮುಡಿಗೆ ಪದ್ಮ ಪ್ರಶಸ್ತಿಯ ಗರಿ

Date:

ಪದ್ಮ ವಿಭೂಷಣ ಪುರಸ್ಕೃತ  ಶ್ರೀ ಎಸ್ ಎಂ ಕೃಷ್ಣ .;
ಸೋಮನಹಳ್ಳಿ ಮಲ್ಲಯ್ಯ ಕೃಷ್ನ, ರಾಜಕೀಯ ಮುತ್ಸದ್ಧಿ. ಬೆಂಗಳೂರು ಅಭಿವೃದ್ಧಿಯ ಹರಿಕಾರ. ಕರ್ಣಾಟಕ ರಾಜ್ಯದ ಪುರೊಭಿವೃದ್ಧಿಗೆ ಅಸ್ತಿಭಾರ ಹಾಕಿದ ಅಪರೂಪದ ದೂರದೃಷ್ಟಿಯ ಸುಶಿಕ್ಷಿತ ನಾಯಕ.
ರಾಜ್ಯ ,ರಾಷ್ಟ್ರ ರಾಜಕಾರಣ ದಲ್ಲಿ 1962 ರಿಂದ ವಿವಿಧ ರಾಜಕೀಯ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿರುವ ಕೃಷ್ಣ , ಸೂಕ್ಷ್ಮಮನಸ್ಸಿನ ದಕ್ಷ ಆಡಳಿತಗಾರ.
ಹುಟ್ಟಿದ್ದು ಮಂಡ್ಯ ಜಿಲ್ಲೆಯ ಸೋಮನಹಳ್ಳಿ, ಓದಿದ್ದು ಮೈಸೂರು ಬೆಂಗಳೂರು, ಅಮೆರಿಕಾದ Texas ನಲ್ಲಿ Southern Methadist University & George Washington University Washington . ಪ್ರತಿಷ್ಟಿತ ಫುಲ್ ಬ್ರೈಟ್ ವಿದ್ಯಾರ್ಥಿ ವೇತನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಸಹ.
ವಿದ್ಯಾರ್ಥಿ ಜೀವನದ ನಂತರ ಸ್ವಲ್ಪ ಕಾಲ ಉಪನ್ಯಾಸಕ ವೃತ್ತಿ ಮಾಡಿದ ಕೃಷ್ಣ ನಂತರ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡರು .
1962 ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶ .
1968 ರಲ್ಲಿ ಸಂಸದರಾಗಿ ಲೋಕಸಭೆ ಪ್ರವೇಶ .
1972 ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ.
ವಾಣಿಜ್ಯ, ಉದ್ಯಮ ಮತ್ತು ಸಂಸದೀ ಯ ವ್ಯವಹಾರಗಳ ಸಚಿವರಾಗಿ ಸೇವೆ.
1983 , 1984 ರಲ್ಲಿ ಕ್ರಮವಾಗಿ ಪುನಹ ಉದ್ಯಮ ಹಾಗೂ ವಿತ್ತ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಣೆ.
1989 ರಿಂದ 1992 ರವರೆಗೆ ವಿಧಾನಸಭಾ ಸ್ಪೀಕರ್ .
1992 ರಿಂದ 1994 ರಲ್ಲಿ ಉಪ ಮುಖ್ಯಮಂತ್ರಿ.
1996 ರಲ್ಲಿ ರಾಜ್ಯಸಭಾ ಸದಸ್ಯರಾಗಿ ರಾಜ್ಯಸಭೆ ಪ್ರವೇಶ.
ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಪಾಂಚಜನ್ಯ ಮೊಳಗಿಸಿ ರಾಜ್ಯದ ಚುಕ್ಕಾಣಿ ಹಿಡಿದು
1999ರಿಂದ 2004 ರವರೆಗೆ – ಕರ್ಣಾಟಕ ಮುಖಮಂತ್ರಿ ಯಾಗಿ ಅಧಿಕಾರ ನಡೆಸಿದ ಕೃಷ್ಣ ಬೆಂಗಳೂರನ್ನು ಸಿಂಗಪುರ ಮಾದರಿಯಲ್ಲಿ ಅಭಿವೃದ್ಧಿ ಗೊಳಿಸಿದರಲ್ಲದೆ ಅನೇಕ ಪ್ರಗತಿಪರ ಯೋಜನೆ ಗಳನ್ನು ಹಮ್ಮಿಕೊಂಡು ರಾಜ್ಯದ ಶ್ರೆಯೋಭಿವೃದ್ಧಿಗೆ ಶ್ರಮಿಸಿದರು. ಅವರ ಅವಧಿಯಲ್ಲಿ ಡಾ ರಾಜ್ ಕುಮಾರ್ ಅಪಹರಣ ಮತ್ತು ಬಿಡುಗಡೆಯ ಪ್ರಕರಣದ ಕ್ಲಿಷ್ಟ ಪರಿಸ್ಥಿತಿ ಯನ್ನು ದೃತಿಗೆಡದೆ, ತಾಳ್ಮೆ ಯಿಂದ ನಿರ್ವಹಿಸಿದ್ದು ಅವರ ಪಕ್ವ ಮತ್ತು ದಕ್ಷ ಆಡಳಿತಕ್ಕೆ ಒಂದು ನಿದರ್ಶನ.
ಮಹಾರಾಷ್ಟ್ರ ರಾಜ್ಯಪಾಲರಾಗಿ , ವಿಶ್ವಸಂಸ್ಥೆ ಮತ್ತು ಕಾಮನವೆಲ್ತ್ ಒಕ್ಕೂಟದಲ್ಲಿಯೂ ಭಾರತ ಪ್ರತಿನಿಧಿಯಾಗಿ ಭಾಗವಹಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಪರಿಪಕ್ವ ಅನುಭವ ಕೃಷ್ಣರದು.ಇಂಥಹ ಅಪೂರ್ವ ಮೆದುಭಾಷಿ,ನಿಶ್ಚಲ ಮನಸ್ಸಿನ ಸಜ್ಜನ ಸುಶಿಕ್ಷಿತ ದಕ್ಷ ರಾಜಕೀಯ ಭೀಷ್ಮ ನಿಗೆ ಪದ್ಮವಿಭೂಷಣ ಪ್ರಶಸ್ತಿ ಗೌರವ – ಅವರ ಹಿರಿಮೆ ಗರಿಮೆಯನ್ನು ಹೆಚ್ಚಿಸಿದೆ .
ಶ್ರೀ ಎಸ್ ಎಂ ಕೃಷ್ಣ – ಮೈಸೂರಿನ ಸಂಸ್ಕಾರಯುಕ್ತ ಪ್ರತಿಷ್ಟಿತ
ಶ್ರೀ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿ ಎಂಬುದು ಹೆಮ್ಮೆಯ ಸಂಗತಿ.
ಪ್ರಸ್ತುತ ಸಕ್ರಿಯ ರಾಜಕಾರಣದಿಂದ ನಿವೃತ್ತರು.

.Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...