Thursday, March 19, 2026
Thursday, March 19, 2026

ಜ್ಞಾನವಿಲ್ಲದೇ ಬದುಕಲು ಸಾಧ್ಯವಿಲ್ಲ- ಹೆಚ್.ಬಿ.ಮಂಜುನಾಥ್

Date:

ಸಮಾಜದಲ್ಲಿ ಬದುಕು ಸಾಗಿಸಲು ಪದವಿ ಪರೀಕ್ಷೆಗಳಿಗಿಂತ ವ್ಯವಹಾರ ಜ್ಞಾನ ಹಾಗೂ ಲೋಕಜ್ಞಾನ ಮುಖ್ಯ, ಇವು ಪಠ್ಯದಿಂದ ಸಿಗುವುದಲ್ಲ, ಭಾಗವಹಿಸುವಿಕೆಯಿಂದ ಸಿಗುವುದು ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್ ಹೇಳಿದರು.

ದಾವಣಗೆರೆಯ ರಿಷಿ ಸಮೂಹ ಸಂಸ್ಥೆಗಳ ಲಿಟಲ್ ಚಾಂಪ್ ಗುರುಕುಲಮ್ ನ ಆವರಣದಲ್ಲಿ ಏರ್ಪಾಡಾಗಿದ್ದ ಪುಟ್ಟ ಮಕ್ಕಳೇ ನಿರ್ವಹಿಸುವ ಚಿಣ್ಣರ ಸಂತೆ ಸಂಭ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ, ದಶಕಗಳ ಹಿಂದೆ ಪೋಷಕರು ಮಾರುಕಟ್ಟೆ, ಸಂತೆ, ಅಂಗಡಿಗಳಿಗೆ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಿದ್ದರು, ಆದರೆ ಈಗ ಮಕ್ಕಳನ್ನು ಕರೆದುಕೊಂಡು ಹೋಗುವುದಿರಲಿ, ಪೋಷಕರೇ ಮಾರುಕಟ್ಟೆಗೆ, ಅಂಗಡಿಗೆ ಹೋಗುವ ಪ್ರಮೇಯವಿಲ್ಲ, ಫೋನ್ ಮಾಡಿ ಹೇಳಿದರೆ ಸಾಕು ಮನೆ ಬಾಗಿಲಿಗೇ ವಸ್ತುಗಳು ಬರುವಂತಾಗಿದ್ದು ಮಕ್ಕಳಿಗಂತೂ ಮಾರುಕಟ್ಟೆಯ ಜ್ಞಾನವೇ ದೊರೆಯುತ್ತಿಲ್ಲ, ಹಣ್ಣು, ತರಕಾರಿ, ಸೊಪ್ಪು, ದವಸ ಧಾನ್ಯಗಳು, ಕಿರಾಣಿ ವಸ್ತುಗಳು ಯಾವುದರ ಪರಿಚಯವಾಗಲಿ,ಹೆಸರುಗಳಾಗಲೀ, ಬೆಲೆ ಮತ್ತು ಮೌಲ್ಯವಾಗಲೀ ಈಗಿನ ಮಕ್ಕಳ ಅರಿವಿಗೆ ಬರುತ್ತಲೇ ಇಲ್ಲ, ಶಾಲೆಗಳಲ್ಲಿ ಏರ್ಪಾಡಾಗುವ ಇಂತಹ ಚಿಣ್ಣರಸಂತೆ ಸಂಭ್ರಮದಲ್ಲಿ ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳು ಭಾಗವಹಿಸುವುದರಿಂದ ವಸ್ತುಗಳ ಪರಿಚಯ, ಪರೀಕ್ಷೆ, ದರ ನಿರ್ಧರಣೆ ಹಾಗೂ ಕೊಡುಕೊಳ್ಳುವ ವ್ಯವಹಾರಗಳ ಮೂಲ ಪಾಠಗಳು ಸಹ ಪ್ರಾಯೋಗಿಕವಾಗಿ ಮಕ್ಕಳಿಗೆ ಸಿಗುತ್ತದೆ ಎಂದರು.

ದುಡ್ಡಿನ ಆವಿಷ್ಕಾರ ವಾಗುವ ಮೊದಲು ಮಾರುಕಟ್ಟೆಯು ವಸ್ತುಗಳ ವಿನಿಮಯದಿಂದಲೇ ನಡೆಯುತ್ತಿತ್ತು, ಈಗಲೂ ಸಹ ವಿದೇಶಗಳೊಂದಿಗೆ ಆಮದು ರಫ್ತು ವ್ಯವಹಾರ ನಡೆಯುವಲ್ಲಿ ದುಡ್ಡಿಗಿಂತ ವಸ್ತು ವಿನಿಮಯ ರೂಪವೇ ಪ್ರಧಾನವಾಗಿದೆ, ವಸ್ತು ವಸ್ತುಗಳ ನಡುವಿನ ಮೌಲ್ಯ ವ್ಯತ್ಯಾಸಗಳ ಜ್ಞಾನ ಇದಕ್ಕೆ ಅವಶ್ಯ,ಈ ನಿಟ್ಟಿನಲ್ಲಿ ಸಹ ಇಂತಹ ಚಿಣ್ಣರ ಸಂತೆಯಿಂದ ಪುಟ್ಟ ಮಕ್ಕಳಿಗೂ ಪ್ರಾಯೋಗಿಕ ಜ್ಞಾನ ಬರುತ್ತದೆ ಎಂದು ತಿಳಿಸಿದರು.

ಪೋಷಕರ ಮಾರ್ಗದರ್ಶನದಲ್ಲಿ ಪುಟ್ಟ ಮಕ್ಕಳು ಶಾಲೆಯ ಆವರಣದಲ್ಲಿ ಹಣ್ಣು, ಹೂವು, ಸೊಪ್ಪು, ತರಕಾರಿ, ತಿಂಡಿ ತಿನಿಸುಗಳು, ಪಾನೀಯಗಳು ಹೀಗೆ ಬಹುವಿಧ ಮಾರುಕಟ್ಟೆ ಸಂತೆಯನ್ನು ಸಂಭ್ರಮದಿಂದ ಮಾಡಿದರು.

ಶಿಕ್ಷಣ ಸಂಸ್ಥೆಯ ಶ್ರೀಮತಿ ಜ್ಯೋತಿ ದರ್ಶನ್ ಮಾರ್ಗದರ್ಶನದಲ್ಲಿ ಕಿಶನ್, ಲಕ್ಷ್ಮೀ, ವಿಕ್ರಮ್ ಜೋಶಿ ಮುಂತಾದವರ ಸಹಯೋಗದಲ್ಲಿ ಈ ಚಿಣ್ಣರ ಸಂತೆ ಸಂಭ್ರಮ ನೆರವೇರಿತು. ಅರ್ಚನಾ, ದೀಪಾ, ಮಧುರಾ, ಕಲಾಭಿಮಾನಿ, ರುಚಿತಾ, ಪ್ರಾಪ್ತಿ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...