Tuesday, October 1, 2024
Tuesday, October 1, 2024

ಪಾತರಗಿತ್ತಿಯ ಪಕ್ಕ ತೋರಿಸಿದ ಬೇಂದ್ರೆಯಜ್ಜನ ಜನ್ಮದಿನ

Date:

ಇಂದು ದ.ರಾ. ಬೇಂದ್ರೆ ಅವರ 127ನೇ ಜನ್ಮದಿನ. ಬೇಂದ್ರೆಯವರು ಆಧುನಿಕ ಕನ್ನಡ ಕಾವ್ಯ ಕ್ಷೇತ್ರದ ಆರಂಭಿಕ ಕವಿಗಳಲ್ಲಿ ಒಬ್ಬರಾಗಿದ್ದರು. ಅವರ ಕಾವ್ಯವು ಜಾನಪದ ಕಥೆಗಳನ್ನು ಹೇಳುತ್ತಿದ್ದವು.

ಬೇಂದ್ರೆ ಅವರು ಜನವರಿ 31,1896ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ಕುಟುಂಬವು ವಿಶೇಷವಾಗಿ ಸಂಸ್ಕೃತ ಭಾಷೆಯ ಅನೇಕ ವಿದ್ವಾಂಸರನ್ನು ಹೊಂದಿತ್ತು. ಬೇಂದ್ರೆ ಅವರು ತಮ್ಮ ಸ್ನಾತಕ ಪದವಿಯನ್ನು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಪಡೆದರು. ನಂತರ ಅವರು ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಅವರು ಕವಿತೆಗಳನ್ನು ಬರೆಯುವಾಗ ಅನೇಕ ದೃಷ್ಟಿಕೋನಗಳು ಹಾಗೂ ಚಿಂತನೆಯ ಸಾಲುಗಳನ್ನು ಬಳಸುತ್ತಿದ್ದರು. ಅವರ ಪ್ರಸಿದ್ಧ ಕಾವ್ಯ ಕೃತಿಗಳಲ್ಲಿ ಒಂದಾದ ನಾಡಲೀಲಾ. ಈ ಕವನ ಸಂಕಲನದಲ್ಲಿ ಅವರು ದೇಶಭಕ್ತಿ, ಸಂಪ್ರದಾಯಗಳು, ಭಾರತೀಯ ಸಂಸ್ಕೃತಿಗಳು ಹೀಗೆ ಅನೇಕ ಅಂಶಗಳನ್ನು ಒಳಗೊಂಡಿದೆ.

1968ರಲ್ಲಿ ಪದ್ಮಶ್ರೀ ಕೇಳ್ಕರ್ ಪ್ರಶಸ್ತಿ ಲಭಿಸಿತು. 1974ರಲ್ಲಿ ಬೇಂದ್ರೆ ಅವರ ನಾಕು ತಂತಿ ಎಂಬ ಕಾವ್ಯ ಸಂಗ್ರಹಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದರು. ಬೇಂದ್ರೆ ಅವರು ಏಳು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಲೇಖಕರಲ್ಲಿ ಎರಡನೆಯವರು.

ನವೋದಯ ಕಾಲದ ಪ್ರತಿಭಾನ್ವಿತ ಕವಿ ಎಂಬ ಬಿರುದನ್ನು ಬೇಂದ್ರೆ ಅವರಿಗೆ ನೀಡಲಾಯಿತು. ಬೇಂದ್ರೆ ಅವರು ನರಬಲಿ ಪುಸ್ತಕವನ್ನು ಬರೆದ ನಂತರ ಅವರಿಗೆ ಜೈಲು ಶಿಕ್ಷೆ ವಿಧಿಸಲಾಯಿತು.

ಈ ಪುಸ್ತಕ ಬರೆದ ನಂತರ ಅವರನ್ನು ದೇಶದ್ರೋಹದ ಗಂಭೀರ ಆರೋಪದ ಮೇಲೆ ಬಂಧಿಸಲಾಗಿತ್ತು.

ಅಕ್ಟೋಬರ್ 21, 1981ರಲ್ಲಿ ದೈವಾಧೀನರಾದರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬೇಂದ್ರೆಯವರ ಕವಿತೆಗಳಲ್ಲಿ ಬಳಸಿದ ವಸ್ತುವಿಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಅವರ ಕವಿತೆಗಳಲ್ಲಿ ಛಲ, ಬದುಕು, ಸಾವು ನೋವು ಈ ವಿಷಯಗಳ ಕುರಿತ ಹೆಚ್ಚು ಕವಿತೆಗಳು ರಚಿಸಿದ್ದಾರೆ. ಇವರು ಬರೆದ ಪಾತ್ತರಗಿತ್ತಿ ಪಕ್ಕ ನೋಡಿದ್ದೇನ ಅಕ್ಕ ಕವನ ಸಂಕಲನ ಇಂದಿಗೂ ಕೂಡ ಚಿನ್ನರ ಅಚ್ಚುಮೆಚ್ಚಿನ ಕವನವಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...