ಶಿವಮೊಗ್ಗ: ಫೆಬ್ರವರಿ 1ಮತ್ತು 2 ಶಿವಮೊಗ್ಗ ಜಿಲ್ಲಾ 17 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ದತೆ ಮಾಡುತ್ತಿದ್ದೇವೆ.
ಸಮ್ಮೇಳನ ಅಧ್ಯಕ್ಷರಾಗಿ ಪತ್ರಕರ್ತರು, ಸಾಹಿತಿಗಳು ಆದ ಶ್ರೀ ಲಕ್ಷ್ಮಣ ಕೊಡಸೆ ಅವರನ್ನು ಆಯ್ಕೆ ಮಾಡಲಾಗಿದೆ.
ಸಮ್ಮೇಳನ ಅರ್ಥಪೂರ್ಣವಾಗಿಸಲು ಉತ್ತಮ ಚಿಂತನೆಗಳಿಗೆ ಒತ್ತು ನೀಡಲಾಗಿದೆ. ಮಲೆನಾಡಿನ ಬೇಗುದಿಗಳು, ಸಾಹಿತ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳು, ಜಾನಪದ ಮರು ಓದು – ಆಧುನಿಕತೆ, ಪ್ರಚಲಿತ ಸಮಸ್ಯೆಗಳು, ಕಾವ್ಯ ಸಂಭ್ರಮ ಸೇರಿದಂತೆ ಹಲವು ಗೋಷ್ಠಿ ಗಳನ್ನು ಏರ್ಪಡಿಸಲಾಗಿದೆ.
ಸಮ್ಮೇಳನ ಫೆಬ್ರವರಿ 1,2 ಬುಧವಾರ, ಗುರುವಾರ ಶಿವಮೊಗ್ಗ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ನಡೆಯಲಿದೆ. ಉಪನ್ಯಾಸಕರು, ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಲು, ಸಾಹಿತ್ಯ ಆಸಕ್ತಿ ವಿಸ್ತಾರವಾಗಲು ಅನುಕೂಲ ಆಗುವಂತೆ ವಿಶೇಷ ರಜೆ ಸೌಲಭ್ಯ ನೀಡಲಾಗಿದೆ.
ಸಮ್ಮೇಳನ ಎಂದಾಕ್ಷಣ ಪುಸ್ತಕ ಪ್ರದರ್ಶನ, ಮಾರಾಟ ಇರಲೇಬೇಕು. ಸಾಹಿತ್ಯ ಆಸಕ್ತರ ಮನತಣಿಸಲು ಪುಸ್ತಕ ಪ್ರದರ್ಶನ, ಮಾರಾಟ ಮಾಡಲು ಆಸಕ್ತಿಯಿರುವವರು ಒಂದು ಸಾವಿರ ರೂ ಶುಲ್ಕ ಪಾವತಿ ಮಾಡಿ ಹೆಸರು ನೋಂದಣಿ ಮಾಡಲು ಕೋರುತ್ತೇವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀ ಡಿ. ಮಂಜುನಾಥ ಕೋರಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
