Wednesday, October 2, 2024
Wednesday, October 2, 2024

ಆಹಾರ ಸೇವಿಸಿ ಅಸ್ವಸ್ಥರಾದ 108 ವಿದ್ಯಾರ್ಥಿಗಳು ಮೆಗಾನ್ ಆಸ್ಪತ್ರೆಗೆ ದಾಖಲು

Date:

ಶಿವಮೊಗ್ಗ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣ ಇಂದು ಕೂಡ ಮುಂದುವರೆದಿದೆ.

ತಡರಾತ್ರಿ ಮೇಲಿನ ಹನಸವಾಡಿ ಮೊರಾರ್ಜಿ ಶಾಲೆಯ 108 ಮಕ್ಕಳು ಅಸ್ವಸ್ಥತರಾಗಿದ್ದರು. ಈಗ ಮಲವಗೊಪ್ಪ, ಗಾಜನೂರು ಮೊರಾರ್ಜಿ ಶಾಲೆ, ಹೊಳಲೂರು, ಮಕ್ಕಳು ಅಸ್ವಸ್ಥಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗ್ಗೆಯಿಂದ ಮಲವಗೊಪ್ಪ ಮೊರಾರ್ಜಿ ಶಾಲೆಯ 30 ಮಕ್ಕಳು, ಗಾಜನೂರು ಮೊರಾರ್ಜಿ ಶಾಲೆಯ 20 ಮಕ್ಕಳು ಹಾಗೂ ಹೊಳಲೂರು ಮೊರಾರ್ಜಿ ಶಾಲೆಯ 10 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಅನಾರೋಗ್ಯದ ಪ್ರಕರಣಗಳಿಂದ ಒಟ್ಟು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಅದರ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು ಯಾವುದೇ ತೊಂದರೆ ಇಲ್ಲ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣನವರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳ ಆರೋಗ್ಯವನ್ನು ವಿಚಾರಿಸಿದರು.

ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿರುವುದು ಯಾಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಣುತ್ತಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾದ ವಿದ್ಯಾರ್ಥಿನಿಯರಲ್ಲಿ ಶೇಕಡಾ 100 ರಷ್ಟು ವಿದ್ಯಾರ್ಥಿಗಳು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಜನವರಿ 15 ರಂದು ಆಯೋಜಿಸಿದ್ದ ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೇ ಆಗಿದ್ದಾರೆ.

15 ರ ಬೆಳಿಗ್ಗೆ ಯೋಗಥಾನ್ ನಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಅಂದು ಸಂಜೆ ವಾಂತಿ ಹೊಟ್ಟೆನೋವು ತಲೆನೋವು ಬೆನ್ನುನೋವು ಕಾಣಿಸಿಕೊಂಡಿದೆ.

ಮೇಲಿನ ಹನಸವಾಡಿ, ಹೊಳಲೂರು,ಕುಂಸಿ, ಮಲವಗೊಪ್ಪ ಗಾಜನೂರು ವಿದ್ಯಾನಗರದ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಯೋಗಥಾನ್ ನಲ್ಲಿ ಭಾಗವಹಿಸದೇ ಇರುವ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಯಾರೊಬ್ಬರಿಗೂ ವಾಂತಿ ಹೊಟ್ಟೆನೋವು ಕಾಣಿಸಿಕೊಂಡಿಲ್ಲ.

ಯೋಗಥಾನ್ ನಲ್ಲಿ ಭಾಗವಹಿಸಿದ ಮಕ್ಕಳಿಗೆ ಅಂದು ಸಂಕ್ರಾಂತಿಯ ಎಳ್ಳುಬೆಲ್ಲದ ಪ್ಯಾಕೇಟ್ ನೀಡಲಾಗಿತ್ತು. ಅಲ್ಲದೆ ಮಜ್ಜಿಗೆಯನ್ನು ವಿತರಿಸಲಾಗಿತ್ತು. ಎಲ್ಲಾ ಮಕ್ಕಳು ಖುಷಿಯಾಗಿಯೇ ಹಾಸ್ಟೆಲ್ ಸೇರಿದ್ದಾರೆ. ಇದಾದ ನಂತರ ವಸತಿ ಶಾಲೆಯ ಊಟ ನೀರು ಸೇವಿಸಿದ್ದಾರೆ. ತದನಂತರದಲ್ಲಿ ಕಾಣಿಸಿಕೊಂಡ ವಾಂತಿ ಮತ್ತು ಹೊಟ್ಟೆ ನೋವು ವಿದ್ಯಾರ್ಥಿಗಳಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ‌.

ಆಸ್ಪತ್ರೆಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳು ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೇ ಆಗಿದ್ದು, ಅಲ್ಲೇ ಎಲ್ಲೋ ವ್ಯತ್ಯಾಸವಾದಂತೆ ಕಾಣುತ್ತಿದೆ. ವೈದ್ಯರು ವಾಂತಿ ಹೊಟ್ಟೆ ನೋವಿಗೆ ಸಂಬಂಧಿಸಿದಂತೆ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
.ಹಾಸ್ಟೆಲ್ ಊಟ ನೀರಿನಲ್ಲಿ, ಆಹಾರದಲ್ಲಿ ವ್ಯತ್ಯಾಸವಾಗಿದೆಯೋ, ಎಳ್ಳುಬೆಲ್ಲದಿಂದ ತೊಂದರೆಯಾಗಿದೆಯೋ ಅಥವಾ ಮಜ್ಜಿಗೆಯಿಂದ ಆರೋಗ್ಯ ಹದಗೆಟ್ಟಿತೋ ಎನ್ನುವುದನ್ನು ವೈದ್ಯಕೀಯ ವರದಿ ಬಂದ ನಂತರವಷ್ಟೆ ಗೊತ್ತಾಗಬೇಕಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...