Tuesday, February 3, 2026
Tuesday, February 3, 2026

ಭಾರತದ ಎದುರು ಬಾಲ ಮುದುರಿದ ಸಿಂಹಗಳು

Date:

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಣ ಟಿ20 ಪಂದ್ಯತಿರುವನಂತುರದಲ್ಲಿ ನಡೆಯಿತು. ಕುತೂಹಕವಿಲ್ಲದಿದ್ದರೂ ದಾಖಲೆ ಉತ್ತಮಿಸಲು ಭಾರತಕ್ಕೆ ಇಲ್ಲಿ ಪಡೆದ ವಿಜಯ ಸಹಾಯಕವಾಯಿತು.
317 ರನ್ ಗಳ ಅಂತರದ ಜಯ ದಾಖಲೆಯೇ ಆಯಿತು.

ಭಾರತಕ್ಕೆ ಅತ್ಯಂತ ಹೆಚ್ಚು ರನ್ ಅಂತರದ ವಿಜಯದ ದಾಖಲೆ.ಹಾಗೆಯೇ ಈ ಪಂದ್ಯದಲ್ಲಿ ಮತ್ತೊಂದು ದಾಖಲೆ ಮಾಡಿದವರೆಂದರೆ ವಿರಾಟ್ ಕೊಹ್ಲಿ.
ಏಕದಿನ ಕ್ರಿಕೆಟ್ ನಲ್ಲಿ ಸಚಿನ್ 20 ಶತಕ ಬಾರಿಸಿ ದಾಖಲೆಮಾಡಿದ್ದರು.ವಿರಾಟ್ 21 ನೇ ಶತಕ ಪಡೆದು ಆ ದಾಖಲೆಯನ್ನ ತಮ್ಮ ಹೆಸರಿಗೆ ವರ್ಗಾಯಿಸಿದರು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಲ್ಲಿ
ರೋಹಿತ್ 42 ರನ್ ಗೆ ಔಟಾದರು. ನಂತರ ಸೇರಿದ ಕೊಹ್ಲಿ ಶುಭಮನ್ ಗಿಲ್ ಜೊತೆ ಅತ್ಯಂತ ಬಿರುಸಿನ ಆಟವಾಡಿದರು.ಇಬ್ರ ಜೋಡಿ ಆಟ ಹಾಗೆಯೇ ಆಕರ್ಷಕವಾಗಿತ್ತು.
ಗಿಲ್ 116 ರನ್ ಗಳಿಸಿದರು.ಅದು ಏಕದಿನ ಪಂದ್ಯದಲ್ಲಿ ಎರಡನೇ ಶತಕವಾಗಿದೆ.
ಗಿಲ್ ನಿರ್ಗಮನದ ನಂತರ ಕೊಹ್ಲಿ ತಮ್ಮದೇ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ರನ್ ಮಳೆ ಸುರಿಸಿ ಶತಕಗಳಿಸಿದರು.( 166). ಅವರದ್ದು ಏಕದಿನ ಪಂದ್ಯದಲ್ಲಿ ಗಳಿಸಿದ46 ನೇ ಶತಕ.
ರೋಹಿತ್ 42, ಶ್ರೇಯಸ್ 38,.ರಾಹುಲ್7, ಸೂರ್ಯಕುಮಾರ್ 4
ಅಕ್ಸರ್ 4 ಹೀಗೆ 50 ಓವರ್ ಗಳಲ್ಲಿ ಭಾರತ 390 ಕಲೆಹಾಕಿತು.

ದೊಡ್ಡ ಮೊತ್ತವನ್ನ ಎದುರಿಸಿ ಬ್ಯಾಟ್ ಮಾಡಿದ ಲಂಕನ್ನರು ಸಿರಾಜ್ ವೇಗದ ಬೌಲಿಂಗ್ ಗೆ ತತ್ತರಿಸಿದರು. ಸಿರಾಜ್ 32 ರನ್ ನೀಡಿ 4 ವಿಕೆಟ್ ಪಡೆದರು. ಲಂಕನ್ನರಲ್ಲಿ ಮೂವರು ಮಾತ್ರ ಎರಡಂಕಿ ಮುಟ್ಟಿದರು.
ಸಿರಾಜ್ ಗೆ ಸಾಥ್ ನೀಡಿದ ಕುಲದೀಪ್ ಮತ್ತು ಶಮಿ ತಲಾ ಎರಡು ವಿಕೆಟ್ ಪಡೆದರು.
ಕೊನೆಯಲ್ಲಿ 73 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡ ಶ್ರೀಲಂಕಾ ದಯನೀಯ ಸ್ಥಿತಿ ತಲುಪಿತು. ಕೊನೆಯ ಬ್ಯಾಟರ್ ಬಂಡಾರ ಗಾಯಾಳುವಾದ ಕಾರಣ ಕ್ರೀಸ್ ಗೆ ಬರಲಿಲ್ಲ. ಹೀಗೆ ಭಾರತ 317 ರನ್ ಗಳ ಅತ್ಯಧಿಕ ರನ್ ಅಂತರದಲ್ಲಿ ಗೆಲುವು ಸಾಧಿಸಿತು. ಸರಣಿಯಲ್ಲಿ ಆಡಿದ ಮೂರೂ ಪಂದ್ಯಗಳನ್ನ ಭಾರತ ಗೆದ್ದು ಬೀಗಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...