ರಾಜ್ಯದ ಮಹಿಳೆಯರಿಗೆ ಸ್ವಾಭಿಮಾನದ, ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ, ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಯೋಜನೆಗಳನ್ನು ಘೋಷಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳು ತಮ್ನ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ತಾವು ಮಂಡಿಸಲಿರುವ ಬಜೆಟ್ ನಲ್ಲಿ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಬಗ್ಗೆ ಅನುಕೂಲವಾಗಲು
ಮಾಸಿಕ 1000ರೂ. ದಿಂದ 3000ರೂ. ವರೆಗೆ ನೆರವು ನೀಡುವ ಯೋಜನೆ ಘೋಷಿಸುವ ಚಿಂತನೆಯಿದೆ ಎಂದೂ
ಮಾಧ್ಯಮಗಳಲ್ಲಿ ವರದಿಯಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು
ಈ ಬಾರಿಯ ಬಜೆಟ್ ಚುನಾವಣಾ ಬಜೆಟ್ ಆಗಲಿದೆ.ಜನಪರವಾಗಿರುತ್ತದೆ.
ಕೋವಿಡ್ ನಿಂದ ನರಳಿದವರಿಗೆ ಉಪಚಾರ,ಆರೋಗ್ಯ ಕುಟುಂಬ ನಿರ್ವಹಣೆಗೆ ವಿಶೇಷ ಒತ್ತು ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಚುನಾವಣಾ ಪೂರ್ವ ಬಜೆಟ್ ಸಾಮಾನ್ಯವಾಗಿ ತೆರಿಗೆ ಭಾರವಿರುವುದಿಲ್ಲ.
ಮತದಾರರನ್ನ ಸೆಳೆಯುವ ಗಿಮಿಕ್ ಪಾಲಿಸುವುದು ಎಲ್ಲಾ ಆಡಳಿತ ಪಕ್ಷದವರ ಕಸರತ್ತು.
ಬಜೆಟ್ ಮಂಡನೆಯನ್ನ ನಾವೆಲ್ಲರೂ
ಕಾದು ನೋಡ ಬೇಕಿದೆ.