Sunday, December 7, 2025
Sunday, December 7, 2025

ಮನಸ್ಸಿನಿಂದ ಮನಸ್ಸಿಗೆ ಭಾಗ-14

Date:

ಆಹಾರ – ಆರೋಗ್ಯ – ಅನುಭವ…

ದಿನನಿತ್ಯದ ಬದುಕಿನಲ್ಲಿ ಒಂದಷ್ಟು ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವು ಆಹಾರದ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ.

ಈಗಾಗಲೇ ಇದರಲ್ಲಿ ‌ಸಾಕಷ್ಟು ಪ್ರಯೋಗಗಳು ಆಗಿವೆ. ಮಾಹಿತಿಯೂ ಲಭ್ಯವಿದೆ.

ಆದರೂ, ವೈಯಕ್ತಿಕವಾಗಿ ನನ್ನ ಕೆಲವು ಅನುಭವದ ಸಲಹೆಗಳು…

ನಿಮ್ಮ ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗೆ ಉತ್ತಮವಾಗಿದ್ದರೆ ದಯವಿಟ್ಟು ಸಾಧ್ಯವಾದಷ್ಟು ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ದಿನನಿತ್ಯ ಅಳವಡಿಸಿಕೊಳ್ಳಿ.

1) ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದು ಲೋಟ Green/Red/ White/Block Tea ಯಾವುದಾದರೂ ಒಂದನ್ನು Alternative day ಕುಡಿಯಿರಿ. ( ನಿಮ್ಮ ಹತ್ತಿರದ Organic shop ಗಳಲ್ಲಿ ಅಥವಾ ದೊಡ್ಡ ಅಂಗಡಿಗಳಲ್ಲಿ ದೊರೆಯುತ್ತದೆ.) ಅಥವಾ ಇದಕ್ಕೆ ಪರ್ಯಾಯವಾಗಿ ರಾಗಿ ಗಂಜಿ – ಸಿರಿ ಧಾನ್ಯಗಳ ಗಂಜಿ ಆದರೂ ಸೇವಿಸಬಹುದು.

2) ದಿನದ ಯಾವುದಾದರೂ ಸಮಯದಲ್ಲಿ ಹಸಿಯಾಗಿ ತಿನ್ನಬಹುದಾದ ಕ್ಯಾರೆಟ್ ಸೌತೆಕಾಯಿ ಈರುಳ್ಳಿ ಬೆಳ್ಳುಳ್ಳಿ ನವಿಲುಕೋಸು ಎಲೆ ಕೋಸು ಬೀನ್ಸ್ ಟೊಮ್ಯಾಟೊ ಬೀಟ್ ರೋಟ್ ಮೂಲಂಗಿ ಮುಂತಾದ ತರಕಾರಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ ಅಥವಾ ಇತರೇ ತರಕಾರಿಗಳನ್ನು ಅರ್ಧ ಬೇಯಿಸಿ ಸಹ ತಿನ್ನಬಹುದು.

3) ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಮರೆಯದೆ ಸೇವಿಸಿ. ಕನಿಷ್ಠ ದಿನಕ್ಕೆ ಯಾವುದಾದರೂ ಒಂದು ಹಣ್ಣನ್ನಾದರೂ ಸೇವಿಸುವುದು ಕಡ್ಡಾಯ ಎಂದು ಭಾವಿಸಿ ಸಂಕಲ್ಪ ಮಾಡಿಕೊಳ್ಳಿ.

4) ಎಷ್ಟೇ ಕಷ್ಟವಾದರೂ ಹೆಸರು ಕಾಳು ಕಡಲೆ ಕಾಳು ಮುಂತಾದ ಸೇವಿಸಬಹುದಾದ ಸರಳ ಮೊಳಕೆ ಕಾಳುಗಳನ್ನು ವಾರಕ್ಕೆ ಕನಿಷ್ಠ ಐದು ದಿನ ಸ್ವಲ್ಪವಾದರೂ ಸೇವಿಸಲು ರೂಡಿಸಿಕೊಳ್ಳಿ.

5) ಬಾದಾಮಿ ಗೋಡಂಬಿ ಒಣ ದ್ರಾಕ್ಷಿ ಒಣ ಖರ್ಜೂರ ಅಂಜೂರ ವಾಲ್ ನಟ್ ಪಿಸ್ತಾ ಮುಂತಾದ ಡ್ರೈ ಪ್ರೂಟ್ ಗಳನ್ನು ನಿಮ್ಮ ಜೊತೆಯಲ್ಲೇ ಕೊಂಡೊಯ್ದು ಅಲ್ಪ ಪ್ರಮಾಣದಲ್ಲಿ ಆಗಾಗ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

6) ಅಕ್ಕಿ ರಾಗಿ ಗೋದಿ ಜೋಳ ನವಣೆ ಸಜ್ಜೆ ಮುಂತಾದವುಗಳಿಂದ ತಯಾರಾದ ದಿನನಿತ್ಯದ ಊಟದ ಪದಾರ್ಥಗಳನ್ನು ಹಸಿವು ನೀಗಿಸಲು ಮಾತ್ರ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಈ ಎಲ್ಲವೂ ಊಟದಲ್ಲಿ ಸೇರಿರುವಂತೆ ವಾರದ ಮೇನು ಸಿದ್ದಪಡಿಸಿಕೊಳ್ಳಿ.
( ಒಂದು ದಿನ ಒಂದೊಂದರಂತೆ)

7) ಹಾಲಿಗೆ ಹೆಚ್ಚು ನೀರು ಬೆರೆಸಿ ದಿನಕ್ಕೆ ಕೇವಲ ಒಂದು ಗ್ಲಾಸ್ ಕುಡಿಯಿರಿ.

8) ಮಾಂಸಾಹಾರಿಗಳು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಪ್ರಮಾಣದಲ್ಲಿ ಅದನ್ನು ಸೇವಿಸಿ. ಹೋಟೆಲ್‌ ಮಾಂಸಹಾರಕ್ಕಿಂತ ಮನೆಗಳಲ್ಲಿ ಮಾಡಿದ ಮಾಂಸಹಾರ ಉತ್ತಮ. ಮೀನು ಮೊಟ್ಟೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಪ್ರಯತ್ನಿಸಿ.

ಇದರ ಜೊತೆಗೆ,

  • ಪ್ರತಿನಿತ್ಯ ಕನಿಷ್ಠ ೩ ಕಿಲೋಮೀಟರ್ ಸಾಧಾರಣ ಓಟ ಮತ್ತು ೩ ಕಿಲೋಮೀಟರ್ ನಡಿಗೆ ಮಾಡಲೇ ಬೇಕೆಂಬ ದೃಡ ನಿರ್ಧಾರ ಮಾಡಿ.
    ನೀವು ಎಲ್ಲೇ ಇದ್ದರೂ ಇದಕ್ಕಾಗಿ ಯೋಜನೆ ರೂಪಿಸಿಕೊಳ್ಳಿ.
  • ಅನುಕೂಲ ಇದ್ದವರು ಯೋಗ Gym Aerobic Dance ಓಟ ಧ್ಯಾನ ಮುಂತಾದ ಯಾವುದಾದರೂ ಒಂದರಲ್ಲಿ ತೊಡಗಿಸಿಕೊಳ್ಳಿ.
    ಯೋಗ ನಿಮ್ಮ ಮೊದಲ ಆಯ್ಕೆಯಾಗಿರಲಿ.
  • ದೈಹಿಕ ಚಟುವಟಿಕೆಗಳ ಯಾವುದೇ ಅವಕಾಶವನ್ನು ಕಳೆದುಕೊಳ್ಳ ಬೇಡಿ. ಮುಖ್ಯವಾಗಿ ಪರಿಸರದೊಂದಿಗಿನ ಪ್ರವಾಸವನ್ನು ಸದಾ ಆಯ್ಕೆ ಮಾಡಿಕೊಳ್ಳಿ ಮತ್ತು ಅನುಭವಿಸಿ.
  • ಗೆಳೆಯರು ಮತ್ತು ಕುಟುಂಬದವರೊಂದಿಗೆ ಸ್ನೇಹ ಸಂಬಂಧ ಉತ್ತಮವಾಗಿದ್ದರೆ ಅದನ್ನು ಜತನವಾಗಿ ಕಾಪಾಡಿಕೊಳ್ಳಿ ಮತ್ತು ಸಾಧ್ಯವಾದಷ್ಟು ಹೆಚ್ಚು ಸಮಯ ಅವರೊಂದಿಗೆ ಕಳೆಯಿರಿ.
  • ಹೊಟ್ಟೆ ಪಾಡಿನ ಉದ್ಯೋಗದ ಜೊತೆಗೆ ಯಾವುದಾದರೂ ಒಂದು ಆಸಕ್ತಿಯ ವಿಷಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸಮಾಜ ಸೇವೆ ಇವುಗಳಲ್ಲಿ ಉತ್ತಮ.

ಈ ಎಲ್ಲವನ್ನೂ ಒಂದು ಅನಿವಾರ್ಯ ಮತ್ತು ಅವಶ್ಯಕ ಉದ್ಯೋಗ ಎಂದು ಮಾಡಿಕೊಳ್ಳಿ.

ನಿಮ್ಮ ಎಲ್ಲಾ ವಿಲ್ ಪವರ್ ಅನ್ನು ಉಪಯೋಗಿಸಿ ಎಷ್ಟೇ ಬಾರಿ ವಿಫಲರಾದರೂ, ಎಷ್ಟೇ ಕಷ್ಟ ನಷ್ಟ ನೋವು ಅಸಹಾಯಕತೆ ಇದ್ದರೂ ಬಿಡದೆ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರಿ.

ನೂರು ಬಾರಿ ನಿಮ್ಮ ಸಂಕಲ್ಪ ನಾನಾ ಕಾರಣಗಳಿಂದ ಸಾಧ್ಯವಾಗದಿದ್ದರೂ ನೂರೊಂದನೇ ಸಾರಿ ಪ್ರಯತ್ನಿಸುವುದನ್ನು ಬಿಡಬೇಡಿ‌.
ಈ ಪ್ರಯತ್ನದಲ್ಲಿ ಬರುವ ಸಣ್ಣಪುಟ್ಟ ದೈಹಿಕ – ಮಾನಸಿಕ ನೋವುಗಳನ್ನು ಪ್ರಜ್ಞಾ ಪೂರ್ವಕವಾಗಿ ಮೆಟ್ಟಿನಿಲ್ಲಿ.

ಈ ಅಭ್ಯಾಸಗಳನ್ನು ತಪ್ಪಿಸಿಕೊಳ್ಳಲು ಬಹಳಷ್ಟು ನೆಪಗಳು ನಿಮಗೆ ದಿನವೂ ಸಿಗುತ್ತಲೇ ಇರುತ್ತದೆ.

ನಿಮ್ಮ ಮನಸ್ಸಿನಲ್ಲಿ ಎರಡು ರೀತಿಯ ತೊಯ್ದಾಟಗಳು ಸದಾ ಜಾಗೃತವಾಗಿರುತ್ತದೆ.

ಒಂದು,
ಅಯ್ಯೊ ಎಷ್ಟು ಮಾಡಿದರೂ ಅಷ್ಟೆ. ಹಣೆಯಲ್ಲಿ ಬರೆದಿದ್ದು ಆಗುತ್ತದೆ. ಅದಕ್ಕಾಗಿ ಇಷ್ಟೊಂದು ಕಷ್ಟ ಏಕೆ. ಏನೂ ಅಭ್ಯಾಸವಿಲ್ಲದವರು ಸದಾ ವಾಕಿಂಗ್ ಮಾಡುತ್ತಿದ್ದವರು ಮೊನ್ನೆ ತಾನೆ ದಿಡೀರ್ ಸತ್ತರು ಎಂಬ ಆಲೋಚನೆ ನಿಮಗೆ ನೆಪವಾಗಿ ಬರುತ್ತದೆ. ಸೋಮಾರಿಗಳು ಇದನ್ನೇ ಪ್ರಮುಖವಾಗಿ ಹೇಳುತ್ತಿರುತ್ತಾರೆ.

ಎರಡು,
ಹೌದು ಕನಿಷ್ಠ ಮಟ್ಟದ ವ್ಯಾಯಾಮ ಮತ್ತು ಆಹಾರ ಪದ್ದತಿ ನನ್ನ ಜೀವನಮಟ್ಟವನ್ನು ಖಂಡಿತ ಉತ್ತಮ ಸ್ಥಿತಿಯಲ್ಲಿ ಇಟ್ಟಿರುತ್ತದೆ.ಅದಕ್ಕಾಗಿ ನಾನು ಈಗ ಸ್ವಲ್ಪ ಶ್ರಮ ಪಡಲೇಬೇಕು. ಇದು ಜೀವ ಇರುವವರೆಗೂ ಪಾಲಿಸ ಬೇಕಾದ ಕರ್ತವ್ಯ.

ನೀವು ಸಾಧ್ಯವಾದಷ್ಟು ಎರಡನೇ ಮನಸ್ಸಿನ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ.

ಇದರಿಂದ ಫಲಿತಾಂಶಗಳನ್ನು ಬೇಗ ನಿರೀಕ್ಷೆ ಮಾಡಬೇಡಿ. ಇದು ದೀರ್ಘಾವಧಿಯ ನಿರಂತರ ಕ್ರಿಯೆ.
ಆದರೆ ಖಂಡಿತ ನಿಮ್ಮ ಜೀವನಶೈಲಿ ಆರೋಗ್ಯಕರ ವಾಗಿರುವುದಲ್ಲದೆ ಕನಿಷ್ಠ ಸಣ್ಣಪುಟ್ಟ ಖಾಯಿಲೆಗಳು ನಿಮ್ಮನ್ನು ಕಾಡುವುದು ಕಡಿಮೆಯಾಗುತ್ತದೆ ಎಂದು ಖಚಿತವಾಗಿ ಭರವಸೆ ನೀಡಬಲ್ಲೆ.

( ನಾನು ಡಾಕ್ಟರ್ ಅಥವಾ ಆಯುರ್ವೇದ ಪಂಡಿತ ಅಥವಾ Fitness ಗುರು ಅಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ. ಇದು ಇಲ್ಲಿಯವರೆಗಿನ ಬದುಕಿನ ಅನುಭವದ ಅನಿಸಿಕೆಗಳು ಮಾತ್ರ. ಆಯ್ಕೆಗಳು ನಿಮ್ಮ ವಿವೇಚನೆಗೆ ಸೇರಿದ್ದು…)

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ಬರಹ: ವಿವೇಕಾನಂದ ಎಚ್. ಕೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...