Monday, December 15, 2025
Monday, December 15, 2025

ರಕ್ತದಾನ ಜಾತಿ ಮತ ಧರ್ಮ ಒಗ್ಗೂಡಿಸುವ ಸಂಕೇತವೂ ಆಗಿದೆ- ಡಾ.ಅರುಣ್

Date:

ರಕ್ತದಾನ ಜಾತಿ, ಮತ, ಧರ್ಮ ಮತ್ತು ಹೆಚ್ಚಿನದನ್ನು ಲೆಕ್ಕಿಸದೆ ಜನರನ್ನು ಒಂದುಗೂಡಿಸುವ ಮಾನವೀಯತೆಯ ಸಂಕೇತವೂ ಆಗಿದೆ ಎಂದು ಐಎಂಎ ಅಧ್ಯಕ್ಷ ಡಾ . ಅರುಣ್ ಎಂ ಎಸ್ ಹೇಳಿದರು .

ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದ್ದು ಬಹಳ ಖುಷಿಕೊಟ್ಟಿದೆ ಎಂದರು.

ದಿನಾಂಕ 8.1.2023 ರಂದು
ಭಾರತೀಯ ವ್ಯದ್ಯಕೀಯ ಸಂಘವು ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು. ಭಾನುವಾರ ಬೆಳಿಗ್ಗೆ 9-00 ಘಂಟೆಯಿಂದ ಮಧ್ಯಾಹ್ನ 1.30ರ ವರೆಗೆ ನಗರದ ಐಎಂಎ ಹಾಲ್ ನಲ್ಲಿ ಅಭಿರುಚಿ ಶಿವಮೊಗ್ಗ, ರೋಟರಿ ರಕ್ತನಿಧಿ ಕೇಂದ್ರ ಇವುಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2 ಸಂಘದ ಸದಸ್ಯರು , ಅವರ ಕುಟುಂಬದವರು , ಆಸ್ಪತ್ರೆ ಸಿಬ್ಬಂಧಿಗಳು , ವೈದ್ಯಕೀಯ ವಿದ್ಯಾರ್ಥಿಗಳು ಹಾಗು ಸಮಾಜದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸುಮಾರು 52 ರಷ್ಟು ರಕ್ತದ ಯುನಿಟ್ ಸಂಗ್ರಹಕ್ಕೆ ಕಾರಣೀಭೂತರಾಗಿದ್ದಾರೆ. ಜೀವ ಉಳಿಸುವ ಈ ಒಂದು ಶ್ರೇಷ್ಠ ವಾದ ಕಾರ್ಯವನ್ನು ಆಯೋಜಿಸಿ ಭಾರತೀಯ
ವೈದ್ಯಕೀಯ ಸಂಘ ಸಾಮಾಜಿಕ ಒಳಿತಿಗೆ ಕಾರಣವಾಗಿದೆ . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾರ್ಡ್ ನಂ .21 ರ ಕಾರ್ಪೋರೇಟೋರ್ ಶ್ರೀಮತಿ ಮೀನಾ ಗೋವಿಂದರಾಜು ಆಗಮಿಸಿದ್ದರು .

ಒಬ್ಬ ವ್ಯಕ್ತಿಯು ಸಮಾಜಕ್ಕೆ ನೀಡಬಹುದಾದ ಮಹತ್ವದ ಕೊಡುಗೆಗಳಲ್ಲಿ ರಕ್ತದಾನವು ಒಂದು. ವಯಸ್ಕ ವ್ಯಕ್ತಿಗೆ ರಕ್ತದಾನ ಮಾಡುವುದು ಹಾನಿಕಾರಕವಲ್ಲ. ದಾನಿಯ ದೇಹವು ಕೆಲವೇ ದಿನಗಳಲ್ಲಿ ರಕ್ತವನ್ನು ಪುನರುತ್ಪಾದಿಸುತ್ತದೆ. ಇದು ದೇಹದ ಚಯಾಪಚಯ ಕ್ರಿಯೆಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲವೆಂದು ಅಭಿರುಚಿ ಅಧ್ಯಕ್ಷರಾದ ಡಾ . ಶಿವರಾಮಕೃಷ್ಣ ಅವರು ಹೇಳಿದರು.

ರಕ್ತದಾನ ಮಾಡಲು ಅರ್ಹರಾಗಿರುವ ವ್ಯಕ್ತಿಯು 19-55 ವರ್ಷ ವಯಸ್ಸಿನವರಾಗಿರಬೇಕು. ಅವರು 50 ಕೆಜಿಗಿಂತ ಹೆಚ್ಚು ತೂಕವಿರಬೇಕು ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಬೇಕು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡುವಂತಿಲ್ಲ ಎಂದು ರೋಟರಿ ಬ್ಲಡ್ ಬ್ಯಾಂಕ್ ವತಿಯಿಂದ ಆಗಮಿಸಿದ ಡಾ . ಸಂಜಯ್ ಅವರು ತಿಳಿಸಿದರು.

ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್ , ಖಜಾಂಚಿ ಡಾ . ಶಶಿಧರ್ , ಜಂಟಿ ಕಾರ್ಯದರ್ಶಿ ಡಾ . ಅನೂಪ್ ರಾವ್ , ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ ಕೌಸ್ತುಭಾ ಅರುಣ್ , ಅಭಿರುಚಿ ಕಾರ್ಯದರ್ಶಿ ಶ್ರೀ ಕುಮಾರ ಶಾಸ್ತ್ರೀ , ಶ್ರೀ ಬಾಪಟ್ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...