Wednesday, February 4, 2026
Wednesday, February 4, 2026

ರಕ್ತದಾನ ಜಾತಿ ಮತ ಧರ್ಮ ಒಗ್ಗೂಡಿಸುವ ಸಂಕೇತವೂ ಆಗಿದೆ- ಡಾ.ಅರುಣ್

Date:

ರಕ್ತದಾನ ಜಾತಿ, ಮತ, ಧರ್ಮ ಮತ್ತು ಹೆಚ್ಚಿನದನ್ನು ಲೆಕ್ಕಿಸದೆ ಜನರನ್ನು ಒಂದುಗೂಡಿಸುವ ಮಾನವೀಯತೆಯ ಸಂಕೇತವೂ ಆಗಿದೆ ಎಂದು ಐಎಂಎ ಅಧ್ಯಕ್ಷ ಡಾ . ಅರುಣ್ ಎಂ ಎಸ್ ಹೇಳಿದರು .

ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದ್ದು ಬಹಳ ಖುಷಿಕೊಟ್ಟಿದೆ ಎಂದರು.

ದಿನಾಂಕ 8.1.2023 ರಂದು
ಭಾರತೀಯ ವ್ಯದ್ಯಕೀಯ ಸಂಘವು ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು. ಭಾನುವಾರ ಬೆಳಿಗ್ಗೆ 9-00 ಘಂಟೆಯಿಂದ ಮಧ್ಯಾಹ್ನ 1.30ರ ವರೆಗೆ ನಗರದ ಐಎಂಎ ಹಾಲ್ ನಲ್ಲಿ ಅಭಿರುಚಿ ಶಿವಮೊಗ್ಗ, ರೋಟರಿ ರಕ್ತನಿಧಿ ಕೇಂದ್ರ ಇವುಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2 ಸಂಘದ ಸದಸ್ಯರು , ಅವರ ಕುಟುಂಬದವರು , ಆಸ್ಪತ್ರೆ ಸಿಬ್ಬಂಧಿಗಳು , ವೈದ್ಯಕೀಯ ವಿದ್ಯಾರ್ಥಿಗಳು ಹಾಗು ಸಮಾಜದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸುಮಾರು 52 ರಷ್ಟು ರಕ್ತದ ಯುನಿಟ್ ಸಂಗ್ರಹಕ್ಕೆ ಕಾರಣೀಭೂತರಾಗಿದ್ದಾರೆ. ಜೀವ ಉಳಿಸುವ ಈ ಒಂದು ಶ್ರೇಷ್ಠ ವಾದ ಕಾರ್ಯವನ್ನು ಆಯೋಜಿಸಿ ಭಾರತೀಯ
ವೈದ್ಯಕೀಯ ಸಂಘ ಸಾಮಾಜಿಕ ಒಳಿತಿಗೆ ಕಾರಣವಾಗಿದೆ . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾರ್ಡ್ ನಂ .21 ರ ಕಾರ್ಪೋರೇಟೋರ್ ಶ್ರೀಮತಿ ಮೀನಾ ಗೋವಿಂದರಾಜು ಆಗಮಿಸಿದ್ದರು .

ಒಬ್ಬ ವ್ಯಕ್ತಿಯು ಸಮಾಜಕ್ಕೆ ನೀಡಬಹುದಾದ ಮಹತ್ವದ ಕೊಡುಗೆಗಳಲ್ಲಿ ರಕ್ತದಾನವು ಒಂದು. ವಯಸ್ಕ ವ್ಯಕ್ತಿಗೆ ರಕ್ತದಾನ ಮಾಡುವುದು ಹಾನಿಕಾರಕವಲ್ಲ. ದಾನಿಯ ದೇಹವು ಕೆಲವೇ ದಿನಗಳಲ್ಲಿ ರಕ್ತವನ್ನು ಪುನರುತ್ಪಾದಿಸುತ್ತದೆ. ಇದು ದೇಹದ ಚಯಾಪಚಯ ಕ್ರಿಯೆಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲವೆಂದು ಅಭಿರುಚಿ ಅಧ್ಯಕ್ಷರಾದ ಡಾ . ಶಿವರಾಮಕೃಷ್ಣ ಅವರು ಹೇಳಿದರು.

ರಕ್ತದಾನ ಮಾಡಲು ಅರ್ಹರಾಗಿರುವ ವ್ಯಕ್ತಿಯು 19-55 ವರ್ಷ ವಯಸ್ಸಿನವರಾಗಿರಬೇಕು. ಅವರು 50 ಕೆಜಿಗಿಂತ ಹೆಚ್ಚು ತೂಕವಿರಬೇಕು ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಬೇಕು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡುವಂತಿಲ್ಲ ಎಂದು ರೋಟರಿ ಬ್ಲಡ್ ಬ್ಯಾಂಕ್ ವತಿಯಿಂದ ಆಗಮಿಸಿದ ಡಾ . ಸಂಜಯ್ ಅವರು ತಿಳಿಸಿದರು.

ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್ , ಖಜಾಂಚಿ ಡಾ . ಶಶಿಧರ್ , ಜಂಟಿ ಕಾರ್ಯದರ್ಶಿ ಡಾ . ಅನೂಪ್ ರಾವ್ , ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ ಕೌಸ್ತುಭಾ ಅರುಣ್ , ಅಭಿರುಚಿ ಕಾರ್ಯದರ್ಶಿ ಶ್ರೀ ಕುಮಾರ ಶಾಸ್ತ್ರೀ , ಶ್ರೀ ಬಾಪಟ್ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...