ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಖ್ಯಾತ ಮನೋವೈದ್ಯ ಡಾ. ಅಶೋಕ್ ಪೈ ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ, ರೋಟರಿ ರಕ್ತನಿಧಿಯ ಸಾರ್ವಜನಿಕ ಸಂಪ್ರಕಾಧಿಕಾರಿ ಸತೀಶ್ “ನಗರದಲ್ಲಿ ಅಶೋಕ್ ಪೈ ಒಬ್ಬ ವೈದ್ಯರು ಎಂದು ಪ್ರಸಿದ್ಧಿ ಪಡೆದಿರುವಷ್ಟೇ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಕ್ಷೇತ್ರದಲ್ಲಿ ಹೆಸರುವಾಸಿ. ಇವರ ಜನ್ಮದಿನವನ್ನು ರಕ್ತದಾನ ಶಿಬಿರದಂಥ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸುವುದು ಅತ್ಯಂತ ಸೂಕ್ತ” ಎಂದರು.
ಮುಂದುವರಿದು ಈ ಕಾಲೇಜಿನಲ್ಲಿ ಇದುವರೆಗೆ 347 ಯೂನಿಟ್ ರಕ್ತ ಸಂಗ್ರಹಿಸಲಾಗಿತ್ತು ಹಾಗೂ ಇದರಿಂದ 1388 ಜನರು ಇದರ ಉಪಯೋಗ ಪಡೆದುಕೊಂಡರು ಎಂದು ಕಾಲೇಜಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಪ್ರಾಚಾರ್ಯೆ ಡಾ ಸಂಧ್ಯಾ ಕಾವೇರಿ ಮಾತನಾಡಿ “ಡಾ ಅಶೋಕ್ ಪೈ ತಮ್ಮ ಜೀವನದುದ್ದಕ್ಕೂ ರೋಟರಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು. ರೋಟರಿಯೊಂದಿಗೆ ಹಲವು ಯೋಜನೆಗಳನ್ನ ಅವರು ರೂಪಿಸಿದ್ದರು. ಈ ಕಾರಣದಿಂದ ಈ ಜನ್ಮದಿನಾಚರಣೆ ರೋಟರಿಯೊಂದಿಗೆ ಆಚರಿಸುತ್ತಿರುವುದು ಹೆಚ್ಚು ಅರ್ಥಪೂರ್ಣ”. ಈ ದಿನ ಕಾಲೇಜಿನ ವಿದ್ಯಾರ್ಥಿಗಳು ಮಾನಸ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಹಲವಾರು ಸಾರ್ವಜನಿಕರು ರಕ್ತದಾನವನ್ನು ಮಾಡಲಿದ್ದಾರೆ.
ಅವರೆಲ್ಲರಿಗೂ ಮಾನಸ ಸಂಸ್ಥೆಯ ವತಿಯಿಂದ ಕೃತಜ್ಞತೆಗಳು ಎಂದರು.
ಕಾರ್ಯಕ್ರಮದಲ್ಲಿ ಮಾನಸ ಸಮೂಹ ಸಂಸ್ಥೆಯ ನಿರ್ದೇಶಕಿ ಡಾ. ರಜನಿ ಪೈ., ರೋಟರಿ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ ರಜತ್, ಕಾಲೇಜಿನ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ. ಸುಕೀರ್ತಿ ಇದ್ದರು. ಈ ಶಿಬಿರದ ನೇತೃತ್ವವನ್ನು ರೋಟರಿ ಬ್ಲಡ್ ಬ್ಯಾಂಕ್ನ ನಿರ್ದೇಶಕರಾದ ಡಾ. ಸಂಜಯ್, ಕಾಲೇಜಿನ ರೆಡ್ಕ್ರಾಸ್ ಸಂಯೋಜಕರಾದ ಶ್ರೀ ಮಂಜುನಾಥಸ್ವಾಮಿ ನಿರ್ದೇಶಿಸಿದರು.