Monday, December 15, 2025
Monday, December 15, 2025

ಚಿತ್ರ “ವೈಶಂಪಾಯನ ತೀರ” ಜನವರಿ 6 ರಂದು ಬಿಡುಗಡೆ

Date:

ಸ್ವರಸಂಗಮ ಎಂಟರ್ಟೈನ್ ಮೆಂಟ್ ಬ್ಯಾನರ್ ನಲ್ಲಿ ಆರ್. ಸುರೇಶ್ ಬಾಬು ನಿರ್ಮಿಸಿ , ಮಲೆನಾಡ ಪ್ರಸಿದ್ಧ ರಂಗಕರ್ಮಿ ರಮೇಶ್ ಬೇಗಾರ್ ನಿರ್ದೇಶಿಸಿರುವ ವೈಶಂಪಾಯನ ತೀರ ಸಿನಿಮಾ ಹೊಸವರ್ಷದ ಆರಂಭದ ಜನವರಿ 6 ರಂದು ತೆರೆಕಾಣಲಿದೆ.

ಪ್ರಸಿದ್ಧ ಕಥಾಲೇಖಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಇವರ ಜನಪ್ರಿಯ ಸಣ್ಣಕಥೆಯನ್ನು ಆಧರಿಸಿದ ಈ ಚಿತ್ರ ಯಕ್ಷಗಾನ ಕಲೆಯ ಹಿನ್ನೆಲೆಯಲ್ಲಿ ಸಾಗುವ , ವೈಯಕ್ತಿಕ ಬದುಕಿನ ಸಂಬಂಧಗಳ ನಿಗೂಢತೆಯನ್ನು ಬಿಂಬಿಸುವ , ಪ್ರಕೃತಿ – ಪುರುಷನ ಸಂಘರ್ಷವನ್ನು ಹೇಳುವ ಕಥೆಯಾಗಿದೆ.
ಮಲೆನಾಡಿನ ಶೃಂಗೇರಿ ಭಾಗದ ಜನಜೀವನ , ಭಾಷೆ , ಸಂಸ್ಕೃತಿಯನ್ನು ಚಿತ್ರದಲ್ಲಿ ಬಳಸಲಾಗಿದ್ದು ಮತ್ತೊಂದು ಮಣ್ಣಿನ ಮೂಲಸೊಗಡಿನ ಚಿತ್ರವಾಗಿ ಮೂಡಿಬಂದಿದೆ.
30 ವರ್ಷಗಳ ಹಿಂದೆ ರಚಿತವಾದ ಕಥೆಗೆ ಇಂದು ಟ್ರೆಂಡ್ ಆಗಿರುವ ಶೈಲಿಯ ಚಿತ್ರಕಥೆ ಅಳವಡಿಸಿದ್ದು ಎಲ್ಲರಿಗೂ ಇಷ್ಟವಾಗುವಂತೆ ಕಥನ ಶೈಲಿ ಇರಲಿದೆ.
ಚಿತ್ರದ ಪ್ರಮುಖ ಪಾತ್ರಗಳು ಕೃಷ್ಣ ಭಟ್ಟ , ವೆಂಕಪ್ಪ ಹೆಗ್ಡೆ ಮತ್ತು ಕಲ್ಯಾಣಿ. ಇವುಗಳನ್ನು ಕ್ರಮವಾಗಿ ರವೀಶ್ ಹೆಗ್ಡೆ ಐನ್ ಬೈಲು , ಪ್ರಸನ್ನ ಶೆಟ್ಟಿಗಾರ್ ಮತ್ತು ವೈಜಯಂತಿ ಅಡಿಗ ನಿರ್ವಹಿಸಿದ್ದಾರೆ. ಕಥೆಯಲ್ಲಿ ಪೂರಕವಾದ ಮತ್ತೊಂದು ಟ್ರ್ಯಾಕ್ ಅಳವಡಿಸಿದ್ದು ಇದರಲ್ಲಿ ಪ್ರಮೋದ್ ಶೆಟ್ಟಿ , ಬಾಬು ಹಿರಣ್ಣಯ್ಯ ,ರಮೇಶ್ ಪಂಡಿತ್, ಬಿ. ಎಲ್. ರವಿಕುಮಾರ್ ಮತ್ತು ನಾಗಶ್ರೀ ಬೇಗಾರ್ ಕಾಣಿಸಿಕೊಂಡಿದ್ದಾರೆ.
ವಿಶ್ವ ವಿಖ್ಯಾತ ರಂಗಭೂಮಿ ಹಾಸ್ಯ ಕಲಾವಿದರಾದ ಕುಂದಾಪುರದ ಕುಳ್ಳಪ್ಪು ಸಹೋದರರಾದ ಸತೀಶ್ ಪೈ , ಸಂತೋಷ್ ಪೈ ಮತ್ತು ಖ್ಯಾತ ಟಿ. ವಿ. ವಾರ್ತಾವಾಚಕ ಸುಬ್ರಹ್ಮಣ್ಯ ಹಂಡಿಗೆ ಮೊದಲಬಾರಿ ಸಿನಿಮಾಕ್ಕಾಗಿ ಬಣ್ಣ ಹಚ್ಚಿರುವುದು ಚಿತ್ರದ ವಿಶೇಷ
ರಮೇಶ್ ಭಟ್ , ಗುರುರಾಜ ಹೊಸಕೋಟಿ , ಶೃಂಗೇರಿ ರಾಮಣ್ಣ ರಂಥ ಹಿರಿಯ ಕಲಾವಿದರೂ ನಟಿಸಿರುವ ಚಿತ್ರವಿದು.

ಗುತ್ತಳಿಕೆ ಕೇಶವ , ನಯನ ಎ. ಎಸ್. ಸಸಿಮನೆ ವಿಶ್ವನಾಥ್ , ಕೃಷ್ಣಮೂರ್ತಿ , ರಾಧಾಕೃಷ್ಣ , ಸ್ಪೂರ್ತಿ , ದೀಪ್ತಿ ಆರ್ ಭಟ್ , ಅರೇಹಳ್ಳ , ವೈಶಾಲಿ , ಸ್ವಾತಿ , ಜ್ಯೋತಿ ಕಾಮತ್ , ವೈಷ್ಣವಿ ರಾವ್ , ಪೃಥ್ವಿರಾಜ್ , ಶಂಕರ್ , ವಿವೇಕ್ ಸುಂಕುರ್ಡಿ , ವಿಶ್ವನಾಥ ಶೆಟ್ಟಿ ,ಮೊದಲಾದ ಮಲೆನಾಡ ಪ್ರತಿಭಾವಂತ ರಂಗಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಶ್ರೀನಿಧಿ ಕೊಪ್ಪ ಸಂಯೋಜಿಸಿದ ಮೂರುಹಾಡುಗಳನ್ನು ಸಾದ್ವಿನಿಕೊಪ್ಪ ಮತ್ತು ವಿನಯ್ ಶೃಂಗೇರಿ ಹಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ವಿನುಮನಸು ಅವರು ಒದಗಿಸಿದ್ದಾರೆ. ಶಶೀರ ಶೃಂಗೇರಿ ಛಾಯಾಗ್ರಹಣ , ಅವಿನಾಶ್ ಶೃಂಗೇರಿ ಸಂಕಲನ , ಅಭಿಷೇಕ್ ಹೆಬ್ಬಾರ್ ಕಲಾನಿರ್ದೇಶನ , ರಾಮಚಂದ್ರ ಅವರ ಸಹನಿರ್ದೇಶನ , ಕಾರ್ತಿಕ್ ನಿರ್ವಣೆಯನ್ನು ಸಿನಿಮಾ ಹೊಂದಿದೆ.

ತಂತ್ರಜ್ಞರೆಲ್ಲರೂ ಈಗಲೂ ಮಲೆನಾಡ ನಿವಾಸಿಗಳೆಂಬುದು ವಿಶೇಷ.

ನಿರ್ದೇಶಕ ರಮೇಶ್ ಬೇಗಾರ್ ಬಗ್ಗೆ

 - ಮಲೆನಾಡ ಭಾಗದಲ್ಲಿ ತಾರಾಮೌಲ್ಯ ಇರುವ ಬಹುಮುಖ ಸೃಜನಶೀಲ ರಮೇಶ್ ಬೇಗಾರ್.   ನಾಟಕ ಮತ್ತು ಕಿರುತೆರೆ ಧಾರಾವಾಹಿಗಳ ನಿರ್ದೇಶಕ  , ಯಕ್ಷಗಾನ ಪ್ರಸಂಗ ಕರ್ತ , ಮೆಗಾ ಈವೆಂಟ್ ಗಳ ಸಾಂಸ್ಕೃತಿಕ ಸಂಘಟಕ  ಮಾತ್ರವಲ್ಲದೇ 2 ಅವಧಿಗೆ ಯಕ್ಷಗಾನ ಅಕಾಡೆಮಿಯ  ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 35 ವರ್ಷಗಳ  ಸುದೀರ್ಘ ಸಾಂಸ್ಕೃತಿಕ ಕೃಷಿಯ ರಮೇಶ್ ಮಲೆನಾಡ ಜಿಲ್ಲೆಗಳಲ್ಲಿ ಮನೆಮಗನಂಥ ಖ್ಯಾತಿಪಡೆದ ಅವಿರತ ಸೃಜನಶೀಲ ಕಲಾವಿದ. ಇವರ ಸಾಂಸ್ಕೃತಿಕ ಹಿನ್ನೆಲೆ ಈ ಸಿನಿಮಾಕ್ಕೆ ಹೊಸ ಹೊಳಹು ನೀಡಿದೆ ಮಾತ್ರವಲ್ಲ ಕುತೂಹಲವನ್ನೂ ಹುಟ್ಟು ಹಾಕಿದೆ.

ನಿರ್ಮಾಪಕ ಆರ್. ಸುರೇಶ್ ಬಾಬು ಬಗ್ಗೆ
3 ದಶಕಗಳ ಹಿಂದೆ ಸ್ವರಸಂಗಮ ಎಂಬ ಆಡಿಯೋ ಕ್ಯಾಸೆಟ್ ಉದ್ಯಮ ಸ್ಥಾಪಿಸಿ ಅಪಾರ ಯಶಸ್ಸು ಕಂಡವರು ಆರ್. ಸುರೇಶ್ ಬಾಬು.
ಗುರುರಾಜುಲು ನಾಯ್ಡು ಅವರ ಗಜಗೌರಿವ್ರತ , ಕಾಳಿಂಗ ನಾವಡರ ನಾಗಶ್ರೀ , ರಾಜು ತಾಳಿಕೋಟಿ ಅವರ ಕಲಿಯುಗ ಕುಡುಕ ದಂಥ ಬಿಗ್ ಹಿಟ್ ಗಳನ್ನು ನೀಡಿದ ಖ್ಯಾತಿ ಸುರೇಶ್ ಬಾಬು ಅವರದ್ದು. ಡಾ ರಾಜ್ , ಎಸ್. ಪಿ. ಬಿ. ಸೇರಿದಂತೆ ದಿಗ್ಗಜರೆಲ್ಲರೂ ಇವರ ಕಂಪೆನಿಗಾಗಿ ಹಾಡಿದ್ದಾರೆ.

ನಂತರ ಟಿ. ವಿ. ಧಾರಾವಾಹಿ , ವೀಡಿಯೋ ವಾರ್ತೆ , ಆಡಿಯೋ – ವೀಡಿಯೋ ಸ್ಟುಡಿಯೋ ವ್ಯವಹಾರವನ್ನು ಮಾಡಿದವರು.
ಎ. ಎಸ್. ಮೂರ್ತಿ ಸಂಪಾದಕತ್ವದಲ್ಲಿ ವೀಡಿಯೋ ವಾರ್ತೆಗಳ ವಿ. ಹೆಚ್. ಎಸ್. ಕ್ಯಾಸೆಟ್ ಹೊರತಂದಿದ್ದ ಪ್ರಯೋಗ ಶೀಲರು ಈ ಸುರೇಶ್ ಬಾಬು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...