ಹಿಂದೂ ಜಾಗರಣ ವೇದಿಕೆಯ ಮೂರನೇ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನವು ಇದೇ ತಿಂಗಳ ಡಿಸೆಂಬರ್ 25ರಂದು ಶಿವಮೊಗ್ಗದ ಎನ್ ಈ ಎಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಈ ಸಮ್ಮೇಳನಕ್ಕೆ ಕರ್ನಾಟಕ ದಕ್ಷಿಣ ಪ್ರಾಂತದ 16 ಸರ್ಕಾರಿ ಜಿಲ್ಲೆಗಳಿಂದ ಹಿಂದೂ ಜಾಗರಣ ಘಟಕದ ಸುಮಾರು 4000 ಪ್ರತಿ ನಿಧಿಗಳು ಭಾಗವಹಿಸಲಿದ್ದಾರೆ.
ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರ ವಿಷಯವಾಗಿ ಗೋಷ್ಠಿ ನಡೆಯಲಿದೆ.
ನಂತರ ಶಿವಮೊಗ್ಗ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿನಿಧಿಗಳ ಶೋಭಾ ಯಾತ್ರೆ ನಡೆಯಲಿದೆ.
ಶೋಭಾಯಾತ್ರೆಯ ನಂತರ, ಶಿವಮೊಗ್ಗದ ಎನ್ ಇ ಎಸ್ ಮೈದಾನದಲ್ಲಿ ಸಾರ್ವಜನಿಕ ನಡೆಯಲಿದೆ.
ಈ ಸಭೆಯ ಮುಖ್ಯ ಅತಿಥಿಗಳಾಗಿ ಶಾಂತವೇರಿ ಶ್ರೀ ರಾಮಮೋಹನ್ ಅವರು ಭಾಗವಹಿಸಲಿದ್ದಾರೆ.
ಹಿಂದೂ ಜಾಗರಣದ ಪ್ರಮುಖರಾದ ಶ್ರೀ ಜಗದೀಶ ಕಾರಂತರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ದಿಕ್ಸೂಚಿ
ಭಾಷಣವನ್ನು ಮಧ್ಯಪ್ರದೇಶದ ಭೂಪಾಲ್ ಸಂಸದರಾದ ಸ್ವಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಾಂತ ಸಂಚಾಲಕರಾದ, ದೊ. ಕೇಶವ ಮೂರ್ತಿ, ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ತೇಜಸ್ವಿ ಅವರು ತಿಳಿಸಿದರು.