Thursday, December 11, 2025
Thursday, December 11, 2025

ಫೋಟೋಗ್ರಫಿಯಲ್ಲಿ ಸಮಕಾಲೀನ ತಂತ್ರಜ್ಞಾನ ಅಳವಡಿಕೆ ಅತ್ಯಗತ್ಯ-ಡಿ.ಎಸ್.ಅರುಣ್

Date:

ಫೋಟೋಗ್ರಾಫಿ ವೃತ್ತಿಯಲ್ಲಿ ಕಾಲ ಕಾಲಕ್ಕೆ ಬದಲಾಗುವ ಹೊಸ ತಂತ್ರಜ್ಞಾನದ ಅಳವಡಿಕೆ ಅತ್ಯಂತ ಅವಶ್ಯಕ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು ಹೇಳಿದರು.

ಶಿವಮೊಗ್ಗ ನಗರದ ಎನ್‌ಆರ್‌ಬಿ ಸ್ಟುಡಿಯೋದಲ್ಲಿ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿ, 25 ವರ್ಷಗಳಿಂದ ಎನ್‌ಆರ್‌ಬಿ ಸ್ಟುಡಿಯೋ ಶಿವಮೊಗ್ಗ ನಗರದಜನತೆಗೆಸೇವೆ ನೀಡುತ್ತಿದ್ದು, ಹೊಸ ವಿನ್ಯಾಸದಆಧುನಿಕತಂತ್ರಜ್ಞಾನದಕ್ಯಾನನ್ ಫೈನ್‌ಆರ್ಟ್ ಪ್ರಿಂಟಿಂಗ್ ಅಳವಡಿಸಲಾಗಿದೆ.
ಅತ್ಯಾಧುನಿಕ ಸೇವೆಗಳನ್ನು ಶಿವಮೊಗ್ಗ ಜನರಿಗೆಒದಗಿಸುವಂತಾಗಲಿ ಎಂದು ಆಶಿಸಿದರು.

ಪತ್ರಕರ್ತಚಂದ್ರಕಾಂತ್ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಫೋಟೋ ತೆಗೆಸಿಕೊಂಡು ಮರ‍್ನಾಲ್ಕು ದಿನದ ನಂತರ ಫೋಟೋಗಳು ಸಿಗುತ್ತಿದ್ದವು.ಆದರೆ ಇಂದಿನ ಕಾಲದಲ್ಲಿಆಧುನಿಕತಂತ್ರಜ್ಞಾನದ ನೆರವಿನಿಂದ ಕೆಲವೇ ನಿಮಿಷಗಳಲ್ಲಿ ಫೋಟೊ ಲಭ್ಯವಾಗುತ್ತವೆ.

ಬೆಂಗಳೂರಿನಲ್ಲಿ ಮಾತ್ರ ಸಿಗುತ್ತಿದ್ದ ಸೇವೆಗಳನ್ನು ಶಿವಮೊಗ್ಗದಲ್ಲಿಯೂ ಎನ್‌ಆರ್‌ಬಿ ಸ್ಟುಡಿಯೋ ಆರಂಭಿಸಿರುವುದು ಅಭಿನಂದನೀಯ ಎಂದರು.

ರೋಟರಿಯ ಮಾಜಿ ಸಹಾಯಕಗವರ್ನರ್ ಜಿ.ವಿಜಯ್‌ಕುಮಾರ್, ಹೊಸ ತಂತ್ರಜ್ಞಾನದ ಅಳವಡಿಕೆ ಜತೆಯಲ್ಲಿ ಹೆಚ್ಚಿನ ಸೇವೆಗಳನ್ನು ಎನ್‌ಆರ್‌ಬಿ ಸ್ಟುಡಿಯೋಒದಗಿಸುತ್ತದೆ. ತಂತ್ರಜ್ಞಾನದಿಂದ ಪರಿಣಾಮಕಾರಿ ಹಾಗೂ ಉತ್ತಮಗುಣಮಟ್ಟದ ಫೋಟೋತೆಗೆಯಲು ಸಾಧ್ಯವಿದೆಎಂದು ಹೇಳಿದರು.

ಭಾರತದಎಲ್ಲೆಡೆಯು ಮನೆ ಮನೆಯಿಂದಎನ್‌ಆರ್‌ಬಿ ಆನ್‌ಲೈನ್ ಸ್ಟುಡಿಯೋ ಹೊಸ ತಾಂತ್ರಿಕತೆ ಲಭ್ಯಇರುವುದುಖುಷಿಯ ಸಂಗತಿಯಾಗಿದೆ. ಹೊಸ ಟೆಕ್ನಾಲಜಿಯ ಫೊಟೋಸ್, ಫ್ರೇಮ್, ಎಲ್‌ಇಡಿ ಲೈಟ್ ಫ್ರೇಮ್, ಅಲೂಮಿನಿಯಂ ಫ್ರೇಮ್, ಮಗ್ ಪ್ರಿಂಟಿAಗ್ ಸೇವೆಗಳು ಲಭ್ಯವಿದೆಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಓಂ ಗಣೇಶ್ ಶೇಟ್, ಮಾಲೀಕ ಸತೀಶ್‌ಚಂದ್ರ, ನೇತ್ರಾವತಿ, ಅಮೋಘ, ಅಪೂರ್ವ, ಚೇತನ್, ಸುರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sahyadri Narayana Multispeciality Hospital ವಿಐಎಸ್‌ಎಲ್‌ವತಿಯಿಂದ ಸಾಮಾಜಿಕ ಕಳಕಳಿಯ ಅಂಗವಾಗಿ ಉಚಿತ ವೈಧ್ಯಕೀಯ ಆರೋಗ್ಯ ಶಿಬಿರ

Sahyadri Narayana Multispeciality Hospital ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ಸಹ್ಯಾದ್ರಿ ನಾರಾಯಣ...

ಪ.ಜಾ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಅಪ್ರೆಂಟಿಸ್‌ಶಿಪ್ ತರಬೇತಿಗೆ ಅರ್ಜಿ ಆಹ್ವಾನ

Information and Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ...

District Chamber of Commerce and Industry ಡಿಸೆಂಬರ್ 15ಕ್ಕೆ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವ

District Chamber of Commerce and Industry ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ...

ರಾಜಹಂಸ ಬಸ್‌ ಡಿಕ್ಕಿಯಾಗಿ ಯುವಕನ ಸಾವು

ಡೆವಿಲ್‌ ಸಿನಿಮಾದ ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ರಾಜಹಂಸ ಬಸ್‌ ಡಿಕ್ಕಿಯಾಗಿ...