Monday, December 15, 2025
Monday, December 15, 2025

ಫೋಟೋಗ್ರಫಿಯಲ್ಲಿ ಸಮಕಾಲೀನ ತಂತ್ರಜ್ಞಾನ ಅಳವಡಿಕೆ ಅತ್ಯಗತ್ಯ-ಡಿ.ಎಸ್.ಅರುಣ್

Date:

ಫೋಟೋಗ್ರಾಫಿ ವೃತ್ತಿಯಲ್ಲಿ ಕಾಲ ಕಾಲಕ್ಕೆ ಬದಲಾಗುವ ಹೊಸ ತಂತ್ರಜ್ಞಾನದ ಅಳವಡಿಕೆ ಅತ್ಯಂತ ಅವಶ್ಯಕ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು ಹೇಳಿದರು.

ಶಿವಮೊಗ್ಗ ನಗರದ ಎನ್‌ಆರ್‌ಬಿ ಸ್ಟುಡಿಯೋದಲ್ಲಿ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿ, 25 ವರ್ಷಗಳಿಂದ ಎನ್‌ಆರ್‌ಬಿ ಸ್ಟುಡಿಯೋ ಶಿವಮೊಗ್ಗ ನಗರದಜನತೆಗೆಸೇವೆ ನೀಡುತ್ತಿದ್ದು, ಹೊಸ ವಿನ್ಯಾಸದಆಧುನಿಕತಂತ್ರಜ್ಞಾನದಕ್ಯಾನನ್ ಫೈನ್‌ಆರ್ಟ್ ಪ್ರಿಂಟಿಂಗ್ ಅಳವಡಿಸಲಾಗಿದೆ.
ಅತ್ಯಾಧುನಿಕ ಸೇವೆಗಳನ್ನು ಶಿವಮೊಗ್ಗ ಜನರಿಗೆಒದಗಿಸುವಂತಾಗಲಿ ಎಂದು ಆಶಿಸಿದರು.

ಪತ್ರಕರ್ತಚಂದ್ರಕಾಂತ್ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಫೋಟೋ ತೆಗೆಸಿಕೊಂಡು ಮರ‍್ನಾಲ್ಕು ದಿನದ ನಂತರ ಫೋಟೋಗಳು ಸಿಗುತ್ತಿದ್ದವು.ಆದರೆ ಇಂದಿನ ಕಾಲದಲ್ಲಿಆಧುನಿಕತಂತ್ರಜ್ಞಾನದ ನೆರವಿನಿಂದ ಕೆಲವೇ ನಿಮಿಷಗಳಲ್ಲಿ ಫೋಟೊ ಲಭ್ಯವಾಗುತ್ತವೆ.

ಬೆಂಗಳೂರಿನಲ್ಲಿ ಮಾತ್ರ ಸಿಗುತ್ತಿದ್ದ ಸೇವೆಗಳನ್ನು ಶಿವಮೊಗ್ಗದಲ್ಲಿಯೂ ಎನ್‌ಆರ್‌ಬಿ ಸ್ಟುಡಿಯೋ ಆರಂಭಿಸಿರುವುದು ಅಭಿನಂದನೀಯ ಎಂದರು.

ರೋಟರಿಯ ಮಾಜಿ ಸಹಾಯಕಗವರ್ನರ್ ಜಿ.ವಿಜಯ್‌ಕುಮಾರ್, ಹೊಸ ತಂತ್ರಜ್ಞಾನದ ಅಳವಡಿಕೆ ಜತೆಯಲ್ಲಿ ಹೆಚ್ಚಿನ ಸೇವೆಗಳನ್ನು ಎನ್‌ಆರ್‌ಬಿ ಸ್ಟುಡಿಯೋಒದಗಿಸುತ್ತದೆ. ತಂತ್ರಜ್ಞಾನದಿಂದ ಪರಿಣಾಮಕಾರಿ ಹಾಗೂ ಉತ್ತಮಗುಣಮಟ್ಟದ ಫೋಟೋತೆಗೆಯಲು ಸಾಧ್ಯವಿದೆಎಂದು ಹೇಳಿದರು.

ಭಾರತದಎಲ್ಲೆಡೆಯು ಮನೆ ಮನೆಯಿಂದಎನ್‌ಆರ್‌ಬಿ ಆನ್‌ಲೈನ್ ಸ್ಟುಡಿಯೋ ಹೊಸ ತಾಂತ್ರಿಕತೆ ಲಭ್ಯಇರುವುದುಖುಷಿಯ ಸಂಗತಿಯಾಗಿದೆ. ಹೊಸ ಟೆಕ್ನಾಲಜಿಯ ಫೊಟೋಸ್, ಫ್ರೇಮ್, ಎಲ್‌ಇಡಿ ಲೈಟ್ ಫ್ರೇಮ್, ಅಲೂಮಿನಿಯಂ ಫ್ರೇಮ್, ಮಗ್ ಪ್ರಿಂಟಿAಗ್ ಸೇವೆಗಳು ಲಭ್ಯವಿದೆಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಓಂ ಗಣೇಶ್ ಶೇಟ್, ಮಾಲೀಕ ಸತೀಶ್‌ಚಂದ್ರ, ನೇತ್ರಾವತಿ, ಅಮೋಘ, ಅಪೂರ್ವ, ಚೇತನ್, ಸುರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...