Thursday, February 5, 2026
Thursday, February 5, 2026

ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಹೆಸರನ್ನ ಅಧಿಕೃತ ನಾಮಕರಣಮಾಡಲು ಮನವಿ

Date:

ಶಿವಮೊಗ್ಗ, ಹೊಸಮನೆ 1 ನೇ ಮುಖ್ಯ ರಸ್ತೆಗೆ ಕರ್ನಾಟಕ ರತ್ನ ದಿವಂಗತ ಡಾ|| ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಕೋರಿ ಮಹಾಪೌರರಿಗೆ ಮನವಿ ನೀಡಲಾಯಿತು.

ನಾಡುಕಂಡ ಹೆಸರಾಂತ ನಟ, ಮಾನವೀಯ ಮೌಲ್ಯಗಳನ್ನು ನಾಡಿಗೆ ಸಾರಿದ ಮಹಾನ್ ನಟ, ಮೇರು ವ್ಯಕ್ತಿತ್ವದ ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ರವರ ಹೆಸರನ್ನು ನಗರದ 20 ನೇ ವಾರ್ಡ್ ಹೊಸಮನೆ ಬಡಾವಣೆ, 1 ನೇ ಮುಖ್ಯ ರಸ್ತೆಗೆ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಅವರ ಅಭಿಮಾನಿಗಳು ಹಾಗೂ ಬಡಾವಣೆ ನಾಗರೀಕರು ಒಕ್ಕೊರಲಿನಿಂದ ಪಾಲಿಕೆ ಸದಸ್ಯರಾದ ಶ್ರೀಮತಿ ರೇಖಾ ರಂಗನಾಥ್ ರವರೊಂದಿಗೆ ಸಭೆ ಸೇರಿ ತೀರ್ಮಾನಿಸಿದ್ದು.

ತಾವುಗಳು ಸಹ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದಿಸಿ ಡಾ.ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಬೇಕೆಂದು ತಮ್ಮಲ್ಲಿ ವಿನಯ ಪೂರ್ವಕವಾಗಿ ಕೋರಿಕೊಂಡಿದ್ದು.

ಈ ಸಂದರ್ಭದಲ್ಲಿ  ಹೊಸಮನೆ ಬಡಾವಣೆ ಪಾಲಿಕೆ ಸದಸ್ಯೆ ಹಾಗೂ ವಿರೋಧ ಪಕ್ಷದ ನಾಯಕಿ ಶ್ರೀಮತಿ ರೇಖಾ ರಂಗನಾಥ್, ಹೊಸಮನೆ ನಾಗರೀಕ ಸಮಿತಿ ಅಧ್ಯಕ್ಷರಾದ ಆರ್. ನಾಗರಾಜ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಪದಾದಿಕಾರಿಗಳಾದ ಸುರೇಶ್, ಮಾರುತಿಭಗತ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...