Monday, February 9, 2026
Monday, February 9, 2026

ಸಲಾಂ ಆರತಿ ಹೆಸರು ಬದಲಾಗುತ್ತಿದೆ ಅಷ್ಟೆ- ಸಚಿವೆ ಶಶಿಕಲಾ ಜೊಲ್ಲೆ

Date:

ರಾಜ್ಯದ ಯಾವುದೇ ದೇವಾಲಯಗಳಲ್ಲಿ ಆರತಿ ಪದ್ಧತಿ ರದ್ದಾಗಿಲ್ಲ. ಸಲಾಂ ಆರತಿ ಹೆಸರಿನಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಧಾರ್ಮಿಕ ಪರಿಷತ್ ಗೂ ಕೆಲ ಅಧಿಕಾರಗಳು ಇವೆ. ಸಲಾಂ ಎಂಬುದು ಸಂಸ್ಕೃತ ಪದವಲ್ಲ ಹಾಗಾಗಿ ಸಲಾಂ ಜಾಗದಲ್ಲಿ ಬೇರೊಂದು ಸಂಸ್ಕೃತ ಹೆಸರಿರಬೇಕು ಎಂದು ಹೇಳಿದೆ. ಧಾರ್ಮಿಕ ಪರಿಷತ್ ಮನವಿಗೆ ಸ್ಪಂದಿಸಿದ್ದೇವೆ. ಆದರೆ ಈ ಬಗ್ಗೆ ಅಂತಿಮವಾಗಿ ತೀರ್ಮಾನ ಮಾಡಿಲ್ಲ ಎಂದರು.
ಅಧಿಕಾರಿಗಳು, ಇತಿಹಾಸಕಾರರ ಜೊತೆ ಸಮಾಲೋಚಿಸಿ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಲಾಂ ಆರತಿ ಬದಲಿಗೆ ಆರತಿ ನಮಸ್ಕಾರ, ದೀವಟಿಗೆ ಸಲಾಂ ಬದಲಿಗೆ ಮಂಗಳಾರತಿ ನಮಸ್ಕಾರ ಎಂದು ಬದಲಿಸಲು ಚಿಂತನೆ ನಡೆದಿದೆ ಎಂದರು.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ನಡೆಯುತ್ತಿದ್ದ ಸಲಾಂ ಮಂಗಳಾರತಿ ಎಂಬ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಧಾರ್ಮಿಕ ಪರಿಷತ್ ಮನವಿ ಮಾಡಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಜೈಲಿನಿಂದ ಬಿಡುಗಡೆಯಾದ ರೌಡಿ ಶೀಟರ್ ಕಾಲಿಗೆ ಗುಂಡು

Breaking News ಶಿವಮೊಗ್ಗಜಿಲ್ಲೆಯ ಭದ್ರಾವತಿ ತಾಲೂಕಿನ ಶಿವಾನಿ ಕ್ರಾಸ್ ಬಳಿ ರೌಡಿ...

Shimoga News ಯಶಸ್ವಿ ಅಂಡಮಾನ್ ಪ್ರವಾಸ ಪೂರೈಸಿದ ಪ್ರವಾಸಿಗರ ” ಸ್ನೇಹ ಮಿಲನ” ಕಾರ್ಯಕ್ರಮ

Shimoga News ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ,ಯೂತ್...

Siddaramaiah ಎಂಎಸ್ಐಎಲ್ ವತಿಯಿಂದ ಚಿಟ್ಸ್ ಮತ್ತು ಸಾಫ್ಟ್ ವೇರ್ ,ಮೊಬೈಲ್ ಆ್ಯಪ್ ಬಿಡುಗಡೆ.

Siddaramaiah ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ವಿಧಾನಸೌಧದ ಬ್ಯಾಕ್ವಿಂಟ್...

Shimoga Bharat Scouts and Guides ಶಿಬಿರಗಳು ಮಕ್ಕಳ ನಡುವೆ ಉತ್ತಮ ಬಾಂಧವ್ಯ ರೂಪಿಸುತ್ತವೆ- ಶಕುಂತಲಾ ಚಂದ್ರಶೇಖರ್

Shimoga Bharat Scouts and Guides ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರ...