Monday, December 15, 2025
Monday, December 15, 2025

ಕಡಿಮೆ ಹಣದುಬ್ಬರಕ್ಕೆ ಮರಳಲು ನಾವು ಸಿದ್ಧರಾಗಿರ ಬೇಕು- ರಘುರಾಂ ರಾಜನ್

Date:

ಜಾಗತಿಕ ಆರ್ಥಿಕತೆಯು ಕಡಿಮೆ ಹಣದುಬ್ಬರದ ಯುಗಕ್ಕೆ ಮರಳಬಹುದು, ಆದ್ದರಿಂದ ಕಠಿಣ ಹಣಕಾಸು ನೀತಿಯನ್ನ ಅಳವಡಿಸಿಕೊಳ್ಳುವ ಕೇಂದ್ರೀಯ ಬ್ಯಾಂಕುಗಳು ಇದನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದರು.

ಬ್ಯಾಂಕ್ ಆಫ್ ಥೈಲ್ಯಾಂಡ್ ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಡಿಮೆ ಹಣದುಬ್ಬರದ ಯುಗಕ್ಕೆ ಮರಳಲು ನಾವು ಸಿದ್ಧರಾಗಿರಬೇಕು’ ಎಂದರು.

ಕೇಂದ್ರೀಯ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿ (MPC) ಸೋಮವಾರ ಸಭೆ ಸೇರಿ ಹಣಕಾಸು ನೀತಿಯನ್ನ ಪ್ರಕಟಿಸಲಿರುವ ಸಮಯದಲ್ಲಿಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವ್ರಿಂದ ಈ ಹೇಳಿಕೆ ಬಂದಿದೆ.

ಕೇಂದ್ರೀಯ ಬ್ಯಾಂಕುಗಳು ಆಲೋಚಿಸುವ ಅಗತ್ಯವಿದೆ: ರಘುರಾಮ್ ರಾಜನ್
ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಸಿನೆಸ್’ನ ಹಣಕಾಸು ಪ್ರಾಧ್ಯಾಪಕರಾಗಿರುವ ರಾಜನ್, ಹಣದುಬ್ಬರವು ಕೆಳಮಟ್ಟದಿಂದ ಗರಿಷ್ಠ ಮಟ್ಟಕ್ಕೆ ಸಾಗಿದಾಗ ಕೇಂದ್ರೀಯ ಬ್ಯಾಂಕುಗಳು ತಮ್ಮ ನೀತಿಗಳು ತುಂಬಾ ವೇಗವಾಗಿವೆಯೇ ಎಂದು ತಮ್ಮನ್ನ ತಾವು ಕೇಳಿಕೊಳ್ಳಬೇಕು ಎಂದು ಹೇಳಿದರು. ‘ನಮ್ಮನ್ನು ಏಕೆ ಒತ್ತಾಯಿಸಲಾಯಿತು ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ’ ಎಂದು ರಾಜನ್ ಹೇಳಿದರು.

ಹಣದುಬ್ಬರ ಹೆಚ್ಚಳವನ್ನು ಗುರುತಿಸಲು ನಮಗೆ ಸಾಧ್ಯವಾಗದಿದ್ದರೆ ಮುಂದಿನ ಬಾರಿ ಅಂತಹ ಪರಿಸ್ಥಿತಿಗೆ ಸಿದ್ಧರಾಗಬೇಕೇ ಎಂದು ನಾವು ಮೌಲ್ಯಮಾಪನ ಮಾಡಬೇಕಾಗಿದೆ’ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...