ಜಿಲ್ಲಾ ಆಸ್ಪತ್ರೆಗಳಲ್ಲಿ 24/7 ಸಹಾಯವಾಣಿ (ಹೆಲ್ಪ್ ಡೆಸ್ಕ್) ತೆರೆಯಲಾಗುವುದು. ಈ ಡೆಸ್ಕ್ನಲ್ಲಿ ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವ ಯಾರಿಗೂ ಸಮಸ್ಯೆ ಎದುರಾಗದಂತೆ ಈ ಡೆಸ್ಕ್ ಸ್ಪಂದಿಸಲಿದೆ ಎಂದರು.
ತಾಯಿ ಕಸ್ತೂರಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಕರಣದ ತನಿಖಾ ವರದಿ ಶೀಘ್ರವೇ ಬರಲಿದೆ. ಕೆಲ ಸಿಬ್ಬಂದಿಗಳ ವರ್ತನೆಯಿಂದ ಈ ರೀತಿಯಾಗಿದೆ ಎಂಬುದು ಗೊತ್ತಾಗಿದೆ. ಕಸ್ತೂರಿ ಅವರ ಮೊದಲ ಮಗಳು ಶಂಕರಿ ಹೆಸರಿನಲ್ಲಿ 10 ಲಕ್ಷ ರೂಪಾಯಿ ಅನ್ನು ನಮ್ಮ ಇಲಾಖೆಯಿಂದ ಎಫ್ಡಿ ಮಾಡ್ತಿದ್ದೇವೆ ಎಂದರು.
ವರದಿ ಬಂದ ಬಳಿಕ ಯಾರ ಕರ್ತವ್ಯ ಲೋಪ ಎಂಬುದು ಸ್ಪಷ್ಟವಾಗಲಿದೆ. ಡಾ.ಉಷಾ ಅವರು ವೈದ್ಯಾಧಿಕಾರಿಗಳ ಸಂಘಕ್ಕೆ ಪತ್ರ ಬರೆದಿದ್ದು, ಸಮಗ್ರ ವರದಿ ಬಳಿಕ ಯಾರ ತಪ್ಪು ಎಂಬುದು ತಿಳಿಯಲಿದೆ. ನಾನು ಸಿಸಿ ಕ್ಯಾಮರಾ ನೋಡಿದ್ದೇನೆ. ಏಕಮುಖವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಅವರು ಓಟಿಯಿಂದ ಬಂದಿದ್ದಾರೆ. ಆ ವಿಡಿಯೋ ಫ್ರೇಮ್ನಲ್ಲಿ ರೋಗಿ ಹಾಗೂ ವೈದ್ಯೆ ಉಷಾ ಇಬ್ಬರೂ ಇದ್ದಾರೆ. ಕಮಿಷನರ್ ಹಂತದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಬಳಿಕ ತೀರ್ಮಾನ ಆಗುತ್ತೆ. ಅಲ್ಲಿಯವರೆಗೂ ಅವರು ಅಮಾನತಿನಲ್ಲಿರುತ್ತಾರೆ. ಅದೇ ಪರ್ನಮೆಂಟ್ ಸಸ್ಪೆಷನ್ ಅಲ್ಲ. ಅವರು ತಪ್ಪಿತಸ್ಥ ಅಲ್ಲ ಅಂತ ಗೊತ್ತಾದರೆ, ಅವರ ಅಮಾನತು ವಾಪಸ್ ಆಗುತ್ತೆ ಎಂದರು.