Sunday, December 7, 2025
Sunday, December 7, 2025

ಕಾಂತಾರ ಸಿನಿಮಾದ ಒಂದು ಕೋಟಿ ಟಿಕೆಟ್ ಮಾರಾಟ ದಾಖಲೆ

Date:

ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಹಲವು ದಾಖಲೆ ಬರೆಯುತ್ತ ಗಳಿಕೆಯಲ್ಲೂ ಕೋಟಿ‌ಕೋಟಿ ಬಾಚುತ್ತ ಹೋಗ್ತಿರೋ ಸಿನಿಮಾ ಕಾಂತಾರ ಈಗ ಹೊಸ ದಾಖಲೆ‌ಬರೆದಿದೆ. ಕರ್ನಾಟಕದಲ್ಲಿ ಒಂದು ಕೋಟಿ ಕಾಂತಾರಾ ಟಿಕೆಟ್ ಸೇಲ್ ಆಗಿದ್ದು ಈ ದಾಖಲೆ ವಿಚಾರವನ್ನು ಸ್ವತಃ ಹೊಂಬಾಳೆ ಮೂವಿಸ್ ಘೋಷಿಸಿದೆ.

ಸೆಪ್ಟೆಂಬರ್ 30 ರಂದು ತೆರೆಕಂಡ ಕಾಂತಾರ ಸಿನಿಮಾ ವಿಶ್ವದ ಸಿನಿಪ್ರೇಮಿಗಳನ್ನು ಸೆಳೆದಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಎಲ್ಲ ಭಾಷೆಯಲ್ಲೂ ಹಲವು ಹೊಸ ದಾಖಲೆ ಬರೆಯುತ್ತ ಸಾಗಿದೆ.

ಬಾಲಿವುಡ್ ನಲ್ಲಿ ರಾಮಸೇತು ಸಿನಿಮಾವನ್ನು ಮೀರಿಸುವ ಗಳಿಕೆ ಕಾಣ್ತಿರೋ ಕಾಂತಾರ ಈಗ ಕನ್ನಡದಲ್ಲಿ ಹೊಸ ದಾಖಲೆ ಬರೆದಿದೆ. ಈ ವಿಚಾರವನ್ನು ಸ್ವತಃ ಕಾಂತಾರ ಸಿನಿಮಾದ ಮೇಕರ್ಸ್ ಹೊಂಬಾಳೆ ಮೂವಿಸ್ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದೆ. ಕರ್ನಾಟಕದಲ್ಲಿ ಒಂದು ಕೋಟಿ ಟಿಕೇಟ್ಸ್ ಮಾರಾಟವಾಗಿದೆ ಎಂದು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೊಂಬಾಳೆ ಫಿಲ್ಸ್ಮ್ ಪೋಸ್ಟರ್ ರಿಲೀಸ್ ಮಾಡಿದೆ.

ಸದ್ಯ ಸಿನಿಮಾ ರಿಲೀಸ್ ಆದ ಒಂದು ತಿಂಗಳ ಬಳಿಕವೂ ಕಾಂತಾರ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಇದುವರೆಗೂ ಕಾಂತಾರ ಯಾವ ಯಾವ ದಾಖಲೆ ಮುರಿದಿದೆ ಅನ್ನೋದನ್ನು ಗಮನಿಸೋದಾದರೇ ಐದನೇ ವಾರದ ಪ್ರದರ್ಶನದಲ್ಲೇ ಕಾಂತಾರ ಬಾಹುಬಲಿ 2 ಆಫೀಸ್ ಗಳಿಕೆಯ ದಾಖಲೆಯನ್ನು ಮುರಿದಿದೆ. ಈಗ ಕರ್ನಾಟಕದಲ್ಲಿ ಇದುವರೆಗೂ ತೆರೆಕಂಡ ಸಿನಿಮಾಗಳ ಪೈಕಿ ಅತಿ‌ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಎಂಬ ಖ್ಯಾತಿಗೂ ಕಾಂತಾರ ಪಾತ್ರವಾಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಪ್ರದರ್ಶನದ ಐದನೇ ವಾರದಲ್ಲಿ 40 ಕೋಟಿ ಗಳಿಸಿತ್ತು. ಅದೇ ಕಾಂತಾರ ಸಿನಿಮಾ ಐದನೇ ವಾರದಲ್ಲಿ 65 ಕೋಟಿ ಗಳಿಸಿದೆ.

ಸದ್ಯ ಸಿನಿಮಾದ ನಾಯಕ ರಿಶಬ್ ಶೆಟ್ಟಿ ವಿಶ್ವದಾದ್ಯಂತ ಓಡಾಡಿಕೊಂಡು ಸಿನಿಮಾ ಪ್ರಮೋಶನ್ ನಲ್ಲಿ ತೊಡಗಿದ್ದು, ರಿಶಬ್ ಗೆ ಈಗಾಗಲೇ ಟಾಲಿವುಡ್ ಸೇರಿದಂತೆ ಬಾಲಿವುಡ್ ನಿಂದಲೂ ಸಿನಿಮಾ ಆಫರ್ ಬಂದಿದೆಯಂತೆ. ಆದರೆ ಸದ್ಯ ರಿಶಬ್ ಬೇರೆ ಭಾಷೆಯ ಸಿನಿಮಾಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು ಕನ್ನಡದಲ್ಲೇ ಇನ್ನಷ್ಟು ಸಿನಿಮಾಗಳನ್ನು ನಿರ್ಮಿಸಲು ಚಿಂತನೆ ನಡೆಸಿರೋದಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ನಟ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ಕಾಂತಾರ ಕಂತೆ ಕಂತೆ ದಾಖಲೆಗಳ ಜೊತೆ ಮುಂದೇ ಸಾಗುತ್ತಿದ್ದು, ಚಿತ್ರತಂಡಸ ಸಂಭ್ರಮ ದುಪ್ಪಟ್ಟಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...