Monday, December 15, 2025
Monday, December 15, 2025

ಕಾಂತಾರ ಸಿನಿಮಾದ ಒಂದು ಕೋಟಿ ಟಿಕೆಟ್ ಮಾರಾಟ ದಾಖಲೆ

Date:

ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಹಲವು ದಾಖಲೆ ಬರೆಯುತ್ತ ಗಳಿಕೆಯಲ್ಲೂ ಕೋಟಿ‌ಕೋಟಿ ಬಾಚುತ್ತ ಹೋಗ್ತಿರೋ ಸಿನಿಮಾ ಕಾಂತಾರ ಈಗ ಹೊಸ ದಾಖಲೆ‌ಬರೆದಿದೆ. ಕರ್ನಾಟಕದಲ್ಲಿ ಒಂದು ಕೋಟಿ ಕಾಂತಾರಾ ಟಿಕೆಟ್ ಸೇಲ್ ಆಗಿದ್ದು ಈ ದಾಖಲೆ ವಿಚಾರವನ್ನು ಸ್ವತಃ ಹೊಂಬಾಳೆ ಮೂವಿಸ್ ಘೋಷಿಸಿದೆ.

ಸೆಪ್ಟೆಂಬರ್ 30 ರಂದು ತೆರೆಕಂಡ ಕಾಂತಾರ ಸಿನಿಮಾ ವಿಶ್ವದ ಸಿನಿಪ್ರೇಮಿಗಳನ್ನು ಸೆಳೆದಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಎಲ್ಲ ಭಾಷೆಯಲ್ಲೂ ಹಲವು ಹೊಸ ದಾಖಲೆ ಬರೆಯುತ್ತ ಸಾಗಿದೆ.

ಬಾಲಿವುಡ್ ನಲ್ಲಿ ರಾಮಸೇತು ಸಿನಿಮಾವನ್ನು ಮೀರಿಸುವ ಗಳಿಕೆ ಕಾಣ್ತಿರೋ ಕಾಂತಾರ ಈಗ ಕನ್ನಡದಲ್ಲಿ ಹೊಸ ದಾಖಲೆ ಬರೆದಿದೆ. ಈ ವಿಚಾರವನ್ನು ಸ್ವತಃ ಕಾಂತಾರ ಸಿನಿಮಾದ ಮೇಕರ್ಸ್ ಹೊಂಬಾಳೆ ಮೂವಿಸ್ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದೆ. ಕರ್ನಾಟಕದಲ್ಲಿ ಒಂದು ಕೋಟಿ ಟಿಕೇಟ್ಸ್ ಮಾರಾಟವಾಗಿದೆ ಎಂದು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೊಂಬಾಳೆ ಫಿಲ್ಸ್ಮ್ ಪೋಸ್ಟರ್ ರಿಲೀಸ್ ಮಾಡಿದೆ.

ಸದ್ಯ ಸಿನಿಮಾ ರಿಲೀಸ್ ಆದ ಒಂದು ತಿಂಗಳ ಬಳಿಕವೂ ಕಾಂತಾರ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಇದುವರೆಗೂ ಕಾಂತಾರ ಯಾವ ಯಾವ ದಾಖಲೆ ಮುರಿದಿದೆ ಅನ್ನೋದನ್ನು ಗಮನಿಸೋದಾದರೇ ಐದನೇ ವಾರದ ಪ್ರದರ್ಶನದಲ್ಲೇ ಕಾಂತಾರ ಬಾಹುಬಲಿ 2 ಆಫೀಸ್ ಗಳಿಕೆಯ ದಾಖಲೆಯನ್ನು ಮುರಿದಿದೆ. ಈಗ ಕರ್ನಾಟಕದಲ್ಲಿ ಇದುವರೆಗೂ ತೆರೆಕಂಡ ಸಿನಿಮಾಗಳ ಪೈಕಿ ಅತಿ‌ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಎಂಬ ಖ್ಯಾತಿಗೂ ಕಾಂತಾರ ಪಾತ್ರವಾಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಪ್ರದರ್ಶನದ ಐದನೇ ವಾರದಲ್ಲಿ 40 ಕೋಟಿ ಗಳಿಸಿತ್ತು. ಅದೇ ಕಾಂತಾರ ಸಿನಿಮಾ ಐದನೇ ವಾರದಲ್ಲಿ 65 ಕೋಟಿ ಗಳಿಸಿದೆ.

ಸದ್ಯ ಸಿನಿಮಾದ ನಾಯಕ ರಿಶಬ್ ಶೆಟ್ಟಿ ವಿಶ್ವದಾದ್ಯಂತ ಓಡಾಡಿಕೊಂಡು ಸಿನಿಮಾ ಪ್ರಮೋಶನ್ ನಲ್ಲಿ ತೊಡಗಿದ್ದು, ರಿಶಬ್ ಗೆ ಈಗಾಗಲೇ ಟಾಲಿವುಡ್ ಸೇರಿದಂತೆ ಬಾಲಿವುಡ್ ನಿಂದಲೂ ಸಿನಿಮಾ ಆಫರ್ ಬಂದಿದೆಯಂತೆ. ಆದರೆ ಸದ್ಯ ರಿಶಬ್ ಬೇರೆ ಭಾಷೆಯ ಸಿನಿಮಾಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು ಕನ್ನಡದಲ್ಲೇ ಇನ್ನಷ್ಟು ಸಿನಿಮಾಗಳನ್ನು ನಿರ್ಮಿಸಲು ಚಿಂತನೆ ನಡೆಸಿರೋದಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ನಟ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ಕಾಂತಾರ ಕಂತೆ ಕಂತೆ ದಾಖಲೆಗಳ ಜೊತೆ ಮುಂದೇ ಸಾಗುತ್ತಿದ್ದು, ಚಿತ್ರತಂಡಸ ಸಂಭ್ರಮ ದುಪ್ಪಟ್ಟಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...