Tuesday, October 1, 2024
Tuesday, October 1, 2024

ಫೈಬರ್ ಸ್ಯಾಚುರೇಷನ್ ಯೋಜನೆಯಡಿ ದೇಶದಲ್ಲಿ ನಾಲ್ಕು ಸ್ಥಳಗಳಲ್ಲಿ ಸಾಗರ ತಾಲೂಕು ಆಯ್ಕೆ

Date:

2018 ರಲ್ಲಿ ಸಾಗರಕ್ಕೆ ಆಗಮಿಸಿದ ಅಂದಿನ ದೂರ ಸಂಪರ್ಕ ಮತ್ತು ಸಂವಹನ ಸಚಿವರಾದ ಮನೋಜ್ ಕುಮಾರ್ ಸಿನ್ಹಾ ರವರೊಂದಿಗೆ ಹೆಚ್.ಹಾಲಪ್ಪ ನವರು ನೆಟ್ ವರ್ಕ್ ಸಮಸ್ಯೆ ಬಗ್ಗೆ ಚರ್ಚಿಸಿದ್ದರು. ಸಾಗರ-ಹೊಸನಗರ ತಾ. ನೆಟ್ ವರ್ಕ್ ನೆಟ್ ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು No Network- No Voting ಅಭಿಯಾನದಲ್ಲಿ ಹೋರಾಟ ನೆಡೆಸಿದ್ದರು, ಇದಕ್ಕೆ ಶಾಸಕರು ಬೆಂಬಲ ಸೂಚಿಸಿ, ಸಂಸದರಾದ ಬಿ.ವೈ ರಾಘವೇಂದ್ರ ರವರ ಸಮ್ಮುಖದಲ್ಲಿ ಕೇಂದ್ರ ದೂರ ಸಂಪರ್ಕ ಮತ್ತು ಸಂವಹನ ಸಚಿವರನ್ನು ಬೇಟಿಯಾಗಿ ಮಲೆನಾಡಿನ ನೆಟ್ ವರ್ಕ್ ಸಮಸ್ಯೆಗೆ ವಿಶೇಷ ಯೋಜನೆ ಜಾರಿಗೆ ತರುವಂತೆ ಚರ್ಚಿಸಿದ್ದರು.

ಇದರ ಮುಂದುವರೆದ ಭಾಗವಾಗಿ ಕೇಂದ್ರ ಸರ್ಕಾರವು BSNL ನ ಸಹಭಾಗಿತ್ವದೊಂದಿಗೆ ಹಳ್ಳಿಗಳಲ್ಲಿ ಇಂಟರ್ ನೆಟ್ ಸೇವೆಗಳನ್ನು ವಿಸ್ತರಿಸಲು ದೇಶದ 4 ಆಯ್ದ ತಾಲ್ಲೂಕುಗಳಲ್ಲಿ Fiber saturation ಯೋಜನೆ ಆರಂಭಿಸಿದ್ದು. ಸದರಿ ಯೋಜನೆಯ ಬಗ್ಗೆ ಇಂದು (15-10-2022) ಶಾಸಕರಾದ ಹೆಚ್.ಹಾಲಪ್ಪ ನವರು, ಪತ್ರಿಕಾ ಗೋಷ್ಠಿ ನೆಡೆಸಿ, ಈ ಯೋಜನೆಗೆ ಕರ್ನಾಟದಲ್ಲಿ ಸಾಗರ ತಾಲ್ಲೂಕು ಆಯ್ಕೆಯಾಗಿದ್ದು, 36 ಮೊಬೈಲ್ ಟವರ್ ಅಳವಡಿಸಲು ನಿರ್ಧರಿಸಲಾಗಿದೆ ಮತ್ತು 3 ಸಾವಿರಕ್ಕೂ ಅಧಿಕ ಮನೆಗಳಿಗೆ ಉಚಿತ ಸಂಪರ್ಕ ಕಲ್ಪಿಸಲು ತೀರ್ಮಾಸಿದ್ದು, ಸಾರ್ವಜನಿಕರು ಇದೇ ನವಂಬರ್ 30 ರ ಒಳಗೆ ತಮ್ಮ ತಮ್ಮ ಗ್ರಾ.ಪಂ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಕೋರಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಸರ್ಕಾರದ ದೂರಸಂಪರ್ಕ ಮತ್ತು ಸಂವಹನ ಇಲಾಖೆ ಜಂಟಿ ಕಾರ್ಯದರ್ಶಿ ಸುಶೀಲ್ ಕುಮಾರ್ ವರ್ಮಾ IRS, (DOT Dehli) ಸಂಜೀವ್ DDG DOT banglore, ರಾಜೀವ್ ಕುಮಾರ್ Director DOT banglore, ಧನಂಜಯ್ ಕುಮಾರ್ ತ್ರಿಪಾಠಿ GM BSNL ಶಿವಮೊಗ್ಗ, ಇವರುಗಳನ್ನು ಅಭಿನಂದಿಸಿ, ಯೋಜನೆ ಅನುಷ್ಠಾನ ಗೊಳಿಸಿದ, *ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಯವರಿಗೆ, ಕೇಂದ್ರ ದೂರಸಂಪರ್ಕ ಮತ್ತು ಸಂವಹನ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ, ಹಾಗೂ ವಿಶೇಷ ಸಹಕಾರ ನೀಡಿದ ಸಂಸದರಾದ ಬಿ.ವೈ ರಾಘವೇಂದ್ರ ರವರಿಗೆ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...