ಪೋಕ್ಸೋಕೇಸ್ನಲ್ಲಿ ನ್ಯಾಯಾಂಗಬಂಧನದಲ್ಲಿರುವಂತಮುರುಘಾ ಶ್ರೀಗಳ ಲೈಂಗಿಕ ಹಗರಣಗಳು ಒಂದರ ಹಿಂದೆ ಒಂದು ಬಯಲಾಗುತ್ತಿದೆ.
ಈಗಾಗಲೇ ನಾಲ್ವರು ವಿದ್ಯಾರ್ಥಿನಿಗಳು ಆರೋಪ ಮಾಡಿದ್ದು, ಮಠದಲ್ಲಿ ಇನ್ನೊಂದಷ್ಟು ಲೈಂಗಿಕ ಹಗರಣಗಳು ಬೆಳಕಿಗೆ ಬರುತ್ತಿದೆ.
ಇದೀಗ ಮುರುಘಾ ಶ್ರೀ ಗಳನ್ನು ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಭಾರೀ ಆಗ್ರಹ ಕೇಳಿಬರುತ್ತಿದೆ. ಕೂಡಲೇ ಸ್ವಾಮೀಜಿಯನ್ನು ಮಠದಿಂದ ವಜಾ ಮಾಡಬೇಕು ಎಂದು ಹಲವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಜಿ ಸಿಎಂ ಯಡಿಯೂರಪ್ಪರನ್ನು ಕೂಡ ಭೇಟಿಯಾಗಿ ಮುರುಘಾ ಶ್ರೀಗಳ ವಜಕ್ಕೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರು ಪೋಸ್ಕೋ ಪ್ರಕರಣದಲ್ಲಿ ಜೈಲು ಪಾಲು ಆಗಿರುವಂತ ಬೆನ್ನಲ್ಲೇ, ಮಠದ ಪೀಠಾಧ್ಯಕ್ಷರ ಆಯ್ಕೆ ಕುರಿತಂತೆ ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಮುಖಂಡರ ಸಭೆಯನ್ನು ಕೂಡ ನಡೆಸಲಾಗಿತ್ತು.