ಶಿವಮೊಗ್ಗ ನಗರದಲ್ಲಿ ಅಕ್ಟೋಬರ್ 09ರಂದು ಈದ್ ಮಿಲಾದ್ ಹಬ್ಬದ ಮೆರವಣಿಗೆ ಇರುವುದರಿಂದ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಜಾಮಿಯಾ ಮಸೀದಿಯ ಆವರಣದಿಂದ ಮೆರವಣಿಗೆ ಆರಂಭವಾಗಲಿದೆ. ಗಾಂಧಿ ಬಜಾರ್, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ, ಓಲ್ಡ್ ಬಾರ್ ಲೈನ್ ರಸ್ತೆ, ಪೆನ್ಷನ್ ಮೊಹಲ್ಲಾ, ಬಾಲ್ ರಾಜ್ ರಸ್ತೆ, ಮಹಾವೀರ್ ಸರ್ಕಲ್ , ಗೋಪಿ ಸರ್ಕಲ್, ನೆಹರು ರಸ್ತೆ, ಬಿ.ಹೆಚ್. ರಸ್ತೆ, ಎನ್.ಟಿ.ರಸ್ತೆ, ಕ್ಲಾರ್ಕ್ ರಸ್ತೆ, ನೂರಾನಿ ಮಸೀದಿ, ಕೆ. ಆರ್ ಪುರಂ ಎ.ಎ.ಸರ್ಕಲ್ ಬಳಿ ಮೆರವಣಿಗೆ ಅಂತ್ಯಗೊಳ್ಳಲಿದೆ.
ಭದ್ರಾವತಿ ಬೆಂಗಳೂರಿನಿಂದ ಆಗಮಿಸುವ ವಾಹನಗಳು ಬೈಪಾಸ್ ರಸ್ತೆಯ ಮೂಲಕ ಹೋಗಲು ಅವಕಾಶವಿದೆ.