Thursday, December 11, 2025
Thursday, December 11, 2025

ಕಣ್ಮನ ಸೂರೆಗೊಂಡ ಶಿವಮೊಗ್ಗದಲ್ಲಿನ ಜಂಬೂಸವಾರಿ

Date:

ಕೊರೋನಾ ದ ಬಳಿಕ ಶಿವಮೊಗ್ಗದಲ್ಲಿ ಮೈಸೂರಿನ ರಾಜ್ಯಸವಾರಿಗೆ ಪ್ರತಿಬಿಂಬದಂತೆ ತೋರುವ ಜಂಬೂ ಸವಾರಿ ಹಾಗೂ ವಿಜಯದಶಮಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಶಿವಮೊಗ್ಗದ ಜಂಬೂ ಸವಾರಿಗೆ ಸಾವಿರಾರು ಭಕ್ತರು ನೆರೆದಿದ್ದರು. ಸುಮಾರು 750ಕೆಜಿ ಬೆಳ್ಳಿಯ ಅಂಬಾರಿಯನ್ನ ಹೊತ್ತು ಗಾಂಭೀರ್ಯದಿಂದ ಸಾಗರ ಎಂಬ ಆನೆ ಹೆಜ್ಜೆ ಹಾಕಿತು. ಇದರ ಜೊತೆಗೆ ಭಾನು ಹಾಗೂ ನೇತ್ರ ಎಂಬ ಆನೆಗಳು ಜಂಬುಸವಾರಿಯಲ್ಲಿ ಹೆಜ್ಜೆ ಹಾಕಿದವು.

ಅಂಬಾರಿಯ ಮೇಲೆ ವಿರಾಜಮಾನ ವಾಗಿದ್ದ ಚಾಮುಂಡೇಶ್ವರಿ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು. ಮೆರವಣಿಗೆಯಲ್ಲಿ ದೇವಿಯ ವಿಗ್ರಹಕ್ಕೆ ಭಕ್ತರು ಹೂಗಳನ್ನು ದೇವಿಗೆ ಅರ್ಪಿಸುತ್ತಿದ್ದರು.

ಶಿವಪ್ಪ ನಾಯಕ ಅರಮನೆ ಮತ್ತು ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ನಂದಿ ಕೋಲಿಗೆ ತಹಶೀಲ್ದಾರ್ ನಾಗರಾಜ್ ಅವರು ಪೂಜೆ ಸಲ್ಲಿಸಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಶಿವಮೊಗ್ಗದ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಅನೇಕ ದೇವರುಗಳ ಪಲ್ಲಕ್ಕಿಯನ್ನು ಹೊತ್ತ ಟ್ರ್ಯಾಕ್ಟರ್ ಗಳು ಸಾಗಿ ಬಂದವು. ಮೆರವಣಿಗೆಯಲ್ಲಿ ನಂದಿ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಹುಲಿ ವೇಷಧಾರಿಗಳು ಹೀಗೆ ನಾನಾ ಕಲಾತಂಡಗಳು ಮೆರವಣಿಗೆಗೆ ಮೆರೆಗನ್ನು ತಂದವು.

ಕೋಟಿ ಸೀತಾ ರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಜಂಬೂ ಸವಾರಿ ಮೆರವಣಿಗೆಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ ಮಾರ್ಗವಾಗಿ ಹಳೆ ಜೈಲ್ ರಸ್ತೆಯ ಮೂಲಕ ಹಾಯ್ದು ಬಂದು ಫ್ರೀಡಂ ಪಾರ್ಕ್ ತಲುಪಿತು. ಅಲ್ಲಿಂದ ಚಾಮುಂಡೇಶ್ವರಿಯ ಮೂರ್ತಿಯನ್ನು ಬೆಳ್ಳಿ ಅಂಬಾರಿಯೊಂದಿಗೆ ಹೂವಿನಿಂದ ಸಿಂಗರಿಸಿದ ವಿಶೇಷ ವಾಹನದಲ್ಲಿ ಕೊಂಡೊಯ್ಯಲಾಯಿತು.

ಇದೇ ಸಂದರ್ಭದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಅಂತಾರಾಷ್ಟ್ರೀಯ ಜಾನಪದ ಕಲಾವಿದರಾದ ಡಾ. ಸುಬ್ಬನಹಳ್ಳಿ ರಾಜು ಹಾಗೂ ರಾಜಪ್ಪ ನಡೆಸಿಕೊಟ್ಟ ಜಾನಪದ ಸಂಭ್ರಮದಲ್ಲಿ ನೆರೆದಿದ್ದ ಜನರು ಹೆಜ್ಜೆ ಹಾಕಿದರು. ಈ ದೃಶ್ಯವನ್ನು ನೋಡಲು ಮನಮೋಹಕವಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಡಿಸೆಂಬರ್ 12 & 13, ಶಿವಮೊಗ್ಗದಲ್ಲಿ ಕಂದಾಯ ಇಲಾಖಾ ನೌಕರರಿಂದ ” ಕಂದಾಯೋತ್ಸವ”- ವಿ.ಅಭಿಷೇಕ್

DC Shivamogga ಒತ್ತಡದಲ್ಲಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ತಮ್ಮ...

MESCOM ಡಿಸೆಂಬರ್ 11 & 12 ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಲ್ಲ, ಒಳ ಮಂಡಳಿ ಪ್ರಕಟಣೆ

MESCOM ಶಿವಮೊಗ್ಗ ನಗರದ ಮಂಡ್ಲಿ ಭಾಗದಲ್ಲಿ ಮೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ...

Department of School Education ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಗೆ ಸಮಗ್ರ ಚಾಂಪಿಯನ್ ಪಟ್ಟ

Department of School Education ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ...