ಭಾರತಾಂಬೆಗೆ ಎಲ್ಲರೂ ಗೌರವ ಸಲ್ಲಿಸಬೇಕು, ಒಂದುವೇಳೆ ಗೌರವ ಸಲ್ಲಿಸಲು ಆಗುವುದಿಲ್ಲ ಎನ್ನುವರು ಈ ದೇಶಬಿಟ್ಟು ಹೋಗಬೇಕು ಎಂದು ವಿಧಾನ ಸಭಾ ಸದಸ್ಯರು ಮತ್ತು ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪನವರು ತಿಳಿಸಿದರು.
ಅವರು ಭಯೋತ್ಪಾದಕ ಸಂಘಟನೆಗಳನ್ನು ಈ ದೇಶದಲ್ಲಿ ನೀಷೇದಿಸಿ ಹಿಂದುತ್ವದ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿ ಬರೆದ ಮೋದಿ ಸರ್ಕಾರಕ್ಕೆ ಅಭಿನಂದಿಸಿ ಇದೊಂದು ಹಿಂದುತ್ವದ ವಿಜಯವೆಂದು ಬಾವಿಸಿ ಈ ದಿನ ಆರ್ಯ ವೈಶ್ಯ ಮಹಾಜನ ಸಮಿತಿ ಶಿವಮೊಗ್ಗ ಇವರು ಗಾಂದಿ ಬಜಾರ್ ನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಡುತ್ತ
ಈ ಹಿಂದಿನಿಂದಲು ಮೊಗಲರು ನಮ್ಮ ದೇಶದ ದೇವಾಲಯ ಮತ್ತು ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಸಿಕೊಂಡು ಈ ದೇಶವನ್ನು ತುಂಡು ತುಂಡಾಗಿ ಕತ್ತರಿಸಿದ್ದರು, ಅನೇಕ ಮಹನೀಯರ ತ್ಯಾಗ, ಬಲಿದಾನ, ತಪಸ್ಸು
ಇದರಿಂದಾಗಿ ನಮಗೆ ಸ್ವಾತಂತ್ರ್ಯ ಲಬಿಸಿದೆ. ಇಂತಹ ಸಂದರ್ಭದಲ್ಲಿ ಕೆಲ ಮುಸ್ಲಿಮ್ ಸಂಘಟನೆಗಳು ಈ ದೇಶದ ಭದ್ರತೆಗೆ ದಕ್ಕೆ ತರುತ್ತಿರುವುದನ್ನು ಗಮನಿಸಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿಗಳಾದ ಅಮಿತ್ ಶಾ ರವರು ಇಂದು ಪಿ.ಎಫ್.ಐ. ಸಂಘಟನೆಯನ್ನು ಬ್ಯಾನ್ ಮಾಡುವುದರ ಮೂಲಕ ಈ ದೇಶದಲ್ಲಿರುವ ದೇಶವಿರೋದಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಇಂತಹ
ನಾಯಕರಿಗೆ ನಾವೆಲ್ಲ ಅಭಿನಂದಿಸಲೇ ಬೇಕು ಎಂದು ಹೇಳಿದರು. ಬಂದಿತ ಎಲ್ಲ ಪ್ರಮುಖರು ಮುಸ್ಲೀಮ್ ರವರೇ ಆಗಿದ್ದಾರೆ, ಆದರೆ ಎಲ್ಲ ಮುಸಲ್ಮಾನರು ಕೆಟ್ಟವರಲ್ಲರಲ್ಲ ಅವರಲ್ಲೂ ದೇಶ ಪ್ರೇಮಿಗಳಿದ್ದಾರೆ ಎಂದು ತಿಳಿಸಿದರು. ಈ ದೇಶ ಹಿಂದೂ ರಾಷ್ಟ್ರ ವಾಗಬೇಕು ಎಂದು ನಮ್ಮ ಎಲ್ಲಾ ಹಿರಿಯ ಚೇತನಗಳ ಕನಸು ನನಸಾಗುವ ಸಮಯ ಬಂದಿದೆ. ಹಾಗಾಗಿ ಈ ದಿನವನ್ನು ಆರ್ಯ ವೈಶ್ಯ ಸಮಾಜದವರು ವಿಜಯೋತ್ಸವದಿನವೆಂದು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಆರ್ಯ ವೈಶ್ಯ ಮಹಾಜನ ಸಮಿತಿ ಉಪಾಧ್ಯಕ್ಷ ಎಸ್.ಕೆ.ಶೇಷಾಚಲ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಆರ್ಯ ವೈಶ್ಯ ಮಹಾಜನ ಸಮಿತಿ ಕಾರ್ಯದರ್ಶಿ ನಟರಾಜ್, ಮಾಜಿ ಜಿ.ಪಂ. ಸದಸ್ಯ ಕೆ.ಇ.ಕಾಂತೇಶ್, ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆರ್ಯ ವೈಶ್ಯ ಭಜನಾ ಮಂಡಳಿ ಸದಸ್ಯೆಯರು ಪ್ರಾರ್ಥನೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ವಂದನಾರ್ಪಣೆ ಮಾಡಿದರು.