Monday, February 2, 2026
Monday, February 2, 2026

ಮೈಸೂರು ಮಾಹಿತಿ

Date:

ಶ್ರೀ ಲಕ್ಷ್ಮಿ ರಮಣ ಸ್ವಾಮಿ ದೇವಸ್ಥಾನ , ಅಂಬಾವಿಲಾಸ ಅರಮನೆ ,ಮೈಸೂರು :
ಇದೊಂದು ಪುರಾತನದೇವಾಲಯ. ಇದರ ಅಭಿವೃದ್ದಿಗೆ ಆಗಿನ ವಿಜಯನಗರ ಸಾಮ್ರಾಜ್ಯದ ಅರಸರು , ಮೈಸೂರು ಅರಸರು ಕಾರಣ ಕರ್ತರು . ಕೋಟೆಯ ಪಶ್ಚಿಮ ಭಾಗದಲ್ಲಿ ಅರಮನೆಯ ವಸ್ತು ಸಂಗ್ರಹಾಲಯದ ಸಮೀಪ ಈ ದೇವಸ್ಥಾನವಿದೆ . ರಾಜ ಒಡೆಯರ್ ಮತ್ತು ಮೂರನೇ ರಾಜ ಒಡೆಯರ್ ರವರು ಮುಖ್ಯ ದ್ವಾರದ ನಿರ್ಮಾಣ ನಂತರ ನವೀಕರಣಕ್ಕೆ ಮೂಲ ಕಾರಣಕರ್ತರು .
ವಿಷ್ಣುವಿನ ಮತ್ತೊಂದು ರೂಪದಲ್ಲಿ ಶ್ರೀ ನಂಬಿ ನಾರಾಯಣ ಮತ್ತು ಶ್ರೀ ಲಕ್ಷ್ಮೀದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ದೇವಳದ ಹಿಂಭಾಗದಲ್ಲಿ ಭವ್ಯವಾದ ಸುಂದರ ಮಂಟಪವನ್ನು ಶ್ರೀ ಕಂಠೀರವ ನರಸರಾಜ ಒಡೆಯರ್ರವರ ಆಡಳಿತಕಾಲ 1638 – 1659 ರಲ್ಲಿ ನಿರ್ಮಾಣಗೊಂಡಿದೆ .
4 ಅಡಿ ಎತ್ತರದ ಆಕರ್ಷಕ ವೇಣುಗೋಪಾಲ ಮೂರ್ತಿಯ ವಿಗ್ರಹ 2 ಅಡಿ ಎತ್ತರದ ರಾಜ ಒಡೆಯರವರ ಮೂರ್ತಿ ಗಮನ ಸೆಳೆಯುತ್ತವೆ.


ಒಂದೆರಡು ಘಟನೆಗಳು ಈ ದೇವಾಲಯದ ಐತಿಹ್ಯದಲ್ಲಿ ಐಕ್ಯವಾಗಿವೆ .
ಪ್ರತಿನಿತ್ಯದಂತೆ ರಾಜಒಡೆಯರ್ರವರು ದೇವರ ನ್ನು ದರ್ಶಿಸಿ ಪ್ರಾರ್ಥಿಸಿ ತೀರ್ಥ ಸ್ವೀಕರಿಸುವಾಗ ತೀರ್ಥ ನೀಡುತ್ತಿದ್ದ ಪುರೋಹಿತನ ಕೈ ನಡುಗುತ್ತಿದ್ದುದ್ದನ್ನು ಕಂಡು ಪ್ರಶ್ನಿಸಲಾಗಿ ಹಣದಾಸೆಗಾಗಿ ತೀರ್ಥದಲ್ಲಿ ವಿಷ ಬೆರಿಸಿರುವುದಾಗಿ ಪುರೋಹಿತ ತಪ್ಪೊಪ್ಪಿ ಕೊಂಡನು.
ಆದರೆ ಆ ವಿಷ ಬೆರೆಸಿದ ತೀರ್ಥವನ್ನೇ ರಾಜ ಒಡೆಯರ್ ಭಯ ಭಕ್ತಿಯಿಂದ ಕುಡಿದುಬಿಟ್ಟರು . ಆದರೂ ದೇವರ ದಯದಿಂದ ರಾಜರಿಗೇನೂ ತೊಂದರೆಯಾಗಲಿಲ್ಲ . ಪುರೋಹಿತನನ್ನು ಚಿತಾವಣೆಗೊಳಿಸಿದ ಕರುಗರಳ್ಳಿ ದಂಡ ನಾಯಕನ ಮೇಲೆ ದಂಡೆತ್ತಿ ಹೋಗಿ ಸೋಲಿಸಿ ಅವನಲ್ಲಿದ್ದ ಅಪಾರ ಐಶ್ವರ್ಯವನ್ನು ಪಡೆದುಕೊಂಡು ಚಾಮುಂಡೇಶ್ವರಿ ದೇವಿಗೆ ಅರ್ಪಿಸಿದರು . ಮತ್ತೊಂದು ಘಟನೆ : ರಾಜ ಒಡೆಯರ ರವರಿಗೆ 1599 ರಲ್ಲಿ ಅಂಧತ್ವ ಕಾಡುತ್ತಿತ್ತು .ಆದರೆ ಒಬ್ಬ ಒಕ್ಕಣ್ಣ ಬ್ರಾಹ್ಮಣ ಅವರ ಅಂಧತ್ವವನ್ನು ನಿವಾರಿಸಿದನು . ಈ ವಿಸ್ಮಯದ ನೆನಪಿಗೆ ಆ ಬ್ರಾಹ್ಮಣನ ಗೌರವಾರ್ಥ ” ಅರೆ ಅಂಧ ಬ್ರಾಹ್ಮಣ ಕೈ ಮುಗಿದು ನಿಂತಿರುವ ಪ್ರತಿಮೆ”ಯನ್ನು ಈ ದೇವಸ್ಥಾನದ ಲ್ಲಿ ಪ್ರತಿಷ್ಟಾಪಿಸಿ ಚಿರಸ್ಥಾಯಿ ಗೊಳಿಸಲಾಗಿದೆ .

ಅಲ್ಲದೆ ಮತ್ತೊಂದು ವಿಶೇಷತೆ ಎಂದರೆ ಟಿಪ್ಪು ಮರಣಾನಂತರ , ಬ್ರಿಟಿಷರು ಐದು ವರ್ಷದ ರಾಜಕುಮಾರ ಮೂರನೇ ಕೃಷ್ಣ ರಾಜ ಒಡೆಯರ ಪಟ್ಟಾಭಿಷೇಕ ವನ್ನು ದಿನಾಂಕ 30 .06 .1799 ರಂದು ನೆರವೇರಿಸಿ ಸಿಂಹಾಸನದ ಮೇಲೆ ಆಸೀನರಾಗಿಸಿದ್ದು ಈ ದೇವಾಲಯದಲ್ಲೇ . ಹಾಗಾಗಿ ಈ ದೇಗುಲ ಚಾರಿತ್ರಿಕ ಮಹತ್ತ್ವ ಪಡೆದಿದೆ.

ಬರಹ: ಎಂ.ತುಳಸಿರಾಂ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...