ಕೊರೋನಾ ಹಿನ್ನೆಲೆ ಸಾಂಕ್ರಾಮಿಕ ನಿಯಂತ್ರಿಸುವುದಕ್ಕಾಗಿ ಮುಚ್ಚಲ್ಪಟ್ಟಿದ್ದ ಅಸ್ಸಾಂ ಗಡಿಯಲ್ಲಿರುವ ಭಾರತ,ಭೂತಾನ್ ಗಡಿ ಬಾಗಿಲು ಸೆ. 23ರಂದು ತೆರೆಯಲಾಗುತ್ತಿದೆ.
ತಾಶಿ ಪೆಂಜೋರ್ ನೇತೃತ್ವದ ಭೂತಾನ್ ನಿಯೋಗವು ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮತ್ತೆ ಭಾರತ-ಭೂತಾನ್ ಗಡಿ ಬಾಗಿಲುಗಳನ್ನು ಸೆ.23ರಂದು ತೆರವುಗೊಳಿಸಲು ನಿರ್ಧರಿಸಲಾಗಿದೆ.
ಎರಡೂವರೆ ವರ್ಷಗಳ ಬಳಿಕ ಈ ಗಡಿ ಬಾಗಿಲುಗಳನ್ನು ತೆರೆಯಲಾಗುತ್ತಿದೆ. ಸೆ.23ರಿಂದ ವ್ಯಾಪಾರ, ವಾಣಿಜ್ಯ ಮತ್ತು ಅಧಿಕೃತ ಸಾರಿಗೆಗಾಗಿ ತನ್ನ ಗಡಿಗಳನ್ನು ಪುನಃ ತೆರೆಯುವುದಾಗಿ ಭೂತಾನ್ ಸರ್ಕಾರ ಘೋಷಿಸಿದೆ.