Sunday, December 14, 2025
Sunday, December 14, 2025

ಕಾನೂನು ರಚನೆ ನ್ಯಾಯಾಲಯದ ಕೆಲಸವಲ್ಲ-ಸುಪ್ರೀಂ ಕೋರ್ಟ್

Date:

ಅಪರಾಧಿ ಪ್ರಕರಣಗಳ ಮೊಕದ್ದಮೆ ಇರುವ ಜನಪ್ರತಿನಿಧಿಗಳಿಗೆ ಸಿಗುವ ವೇತನವನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಮನವಿಯನ್ನು ತಳ್ಳಿಹಾಕಲಾಯಿತು. ಸಂಸದರು ಮತ್ತು ಶಾಸಕರ ವೇತತನವನ್ನು ತಡೆಹಿಡಿಯಬೇಕೆಂದು ಈ ಮನವಿಯನ್ನು ದಾಖಲಿಸಲಾಗಿತ್ತು.

ಇಂತವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲದಿದ್ದರೆ, ಕಡಿಮೆ ಪಕ್ಷ ವೇತನವನ್ನು ತೆಗೆದುಕೊಳ್ಳಲು ಅನುಮತಿ ನೀಡಬಾರದು. ಎಂದು ಈ ಮನವಿಯಲ್ಲಿ ಹೇಳಲಾಗಿತ್ತು.

ನ್ಯಾಯಾಲಯವು, ಕಾನೂನನ್ನು ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಶಾಸಕರು ಮತ್ತು ಸಂಸದರ ವೇತನ ಅಥವಾ ಇತರ ಸೌಲಭ್ಯಗಳನ್ನು ನೀಡುವ ನಿರ್ಣಯವನ್ನು ಸರಕಾರ ತೆಗೆದುಕೊಳ್ಳುತ್ತದೆ. ಸಭಾಗೃಹದಿಂದ ಹೋದ ಬಳಿಕ ಈ ವಿಷಯವನ್ನು ನಿರ್ಣಯಿಸುವ ಅಧಿಕಾರವೂ ಈ ಸದಸ್ಯರ ಕೈಯಲ್ಲಿಯೆ ಇರುತ್ತದೆ. ವೇತನ ಮತ್ತು ನಿವೃತ್ತಿಗೆ ಸಂಬಂಧಿಸಿದ ವ್ಯವಸ್ಥೆಯನ್ನು ಹೆಚ್ಚು ಕಡಿಮೆ ಮಾಡುವ ಅಧಿಕಾರವೂ ಸಂಸದರು ಮತ್ತು ಶಾಸಕರ ಕೈಯಲ್ಲಿದೆ. ಅವರು ತಮ್ಮ ಹಿತವನ್ನು ಅಪಾಯಕ್ಕೀಡು ಮಾಡಿ ನಿವೃತ್ತಿವೇತನ ಅಥವಾ ವೇತನವನ್ನು ತೆಗೆದುಕೊಳ್ಳಲು ನಿರಾಕರಿಸಿರುವುದು ಎಲ್ಲಿಯೂ ಕಾಣಿಸಿಲ್ಲ. ಅಬ್ಜಾವಧಿಯ ಸಂಪತ್ತು ಇರುವ ಕೆಲವು ಸದಸ್ಯರೂ ವೇತನ ಹಾಗೂ ನಿವೃತ್ತಿವೇತನವನ್ನು ಬಿಡುವುದಿಲ್ಲ. ಇನ್ನೊಂದೆಡೆ ಕೆಲವು ಸದಸ್ಯರು ಮಾತ್ರ ವೇತನವನ್ನು ನಿರಾಕರಿಸಿದ ವಾರ್ತೆ ಬೆಳಕಿಗೆ ಬಂದಿತ್ತು ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...