Tuesday, October 1, 2024
Tuesday, October 1, 2024

ಮುರುಘಾ ಮಠದ ಬಗ್ಗೆ ಕೋಡಿಶ್ರೀಗಳವಾಣಿ

Date:

ಮುರುಘಾ ಮಠದ ಆಂತರಿಕ ಸಮಸ್ಯೆಗಳು ಆ ಸಂಸ್ಥೆಯನ್ನು ಬಲಿತೆಗೆದುಕೊಂಡಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕುಟುಂಬದ ಅಪೂರ್ವ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ಕೋಡಿಮಠದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು.

ಆಚಾರ, ವಿಚಾರ ಮತ್ತು ಪ್ರಚಾರ ಸಮಾಜದಲ್ಲಿ ಬಹುಮುಖ್ಯ. ಯಾರಾದರೂ ಪರಸ್ಪರ ಭೇಟಿಯಾದರೆ ಮೊದಲು ಕೇಳುವುದೇ ಏನ್ ಸಮಾಚಾರ ಎಂದು. ಇಂದು ನಮ್ಮ ಪರಂಪರಾಗತ ಆಚಾರ. ಉಭಯ ಕುಶಲೋಪರಿಯ ಅನಂತರ ವಿಚಾರ ವಿನಿಮಯ. ತನ್ನೊಳಗಿನ ವಿಚಾರವನ್ನು ಸಾರ್ವತ್ರೀಕರಣಗೊಳಿಸಲು ಒಂದಷ್ಟು ಪ್ರಚಾರ. ಆದರೆ ಇಂದು ಇವೆಲ್ಲವನ್ನೂ ಹಿಂದೆ ತಳ್ಳಿ ಅಪಪ್ರಚಾರ ಮುಂಚೂಣಿಗೆ ಬಂದಿದೆ ಎಂದರು.

ಅಪಪ್ರಚಾರದ ಅಲೆ ಧರ್ಮ, ರಾಜಕಾರಣ ಸೇರಿದಂತೆ ಎಲ್ಲಕಡೆ ಆವರಿಸಿದೆ. ಇದರಿಂದ ಮೌಲ್ಯಗಳು ಹಾಳಾಗುತ್ತಿವೆ. ಉತ್ತಮ ಕೆಲಸ ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಪಪ್ರಚಾರ ಒಂದು ಸಾಮಾಜಿಕ ಪೀಡೆಯಾಗಿ ಬೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸ್ವಾಮೀಜಿ ಸತ್ಯಕ್ಕೆ ಅಂತಿಮ ಗೆಲುವು ಎನ್ನುವುದಾದರೂ ಇಂದು ಸತ್ಯ ಹೊರಬರುವಷ್ಟರಲ್ಲಿ ವ್ಯಕ್ತಿ ಸಾವಿನ ಮನೆ ಸೇರಿರುತ್ತಾನೆಂದು ಶ್ರೀಗಳು ಆತಂಕ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...

Gandhi Jayanti ಸಾಗರ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ನಡೆದ ಸ್ವಚ್ಛತಾ ಹಿ ಸೇವಾ ಚಟುವಟಿಕೆ

Gandhi Jayanti ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ...

Karnataka State Farmers Association ಆನೆದಾಳಿಗೆ ಮೃತಪಟ್ಟ ಪುರದಾಳ್ ನಿವಾಸಿಗೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

Karnataka State Farmers Association ಶಿವಮೊಗ್ಗ ನಗರದ ಅಂಚಿನಲ್ಲಿರುವ ಪುರದಾಳ್...