Friday, December 5, 2025
Friday, December 5, 2025

ರೈತರಿಗೆ ಮೋಸಮಾಡುವವರಿಗೆ ಕೃಷಿಇಲಾಖೆ ಸಿಬ್ಬಂದಿ ಸಿಂಹಸ್ವಪ್ನವಾಗಬೇಕು

Date:

ರೈತರಿಗೆ ಮೋಸಮಾಡುವ ನಕಲುಕೋರರಿಗೆ ಕೃಷಿ ಇಲಾಖಾಧಿಕಾರಿಗಳು ಸಿಂಹಸ್ವಪ್ನವಾಗಬೇಕು ಎಂದು ಕೃಷಿ ಸಚಿವರೂ ಆಗಿರುವ ಚಿತ್ರದುರ್ಗ ಮತ್ತು ಗದಗ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದರು.
ಬೆಳಗಾವಿಯ ಸುವರ್ಣಸೌಧ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಸಚಿವರ ಅಧ್ಯಕ್ಷತೆಯಲ್ಲಿ ನಡೆದ 2022-23 ನೇ ಸಾಲಿನ ಜಿಲ್ಲಾ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಬ್ನ ನೀಡುವ ರೈತನಿಗೆ ಕಳಪೆ ಗೊಬ್ಬರ ರಾಸಾಯನಿಕ ಔಷಧಿ ಬಿತ್ತನೆ ಬೀಜ ಮಾರವಂತಹದಂತಹ ನೀಚ ಕೆಲಸದ ದುರಂತ ಮತ್ತೊಂದಿಲ್ಲ.ಇಂತವರ ಮೇಲೆ ಕೃಷಿ ಇಲಾಖೆ ಸದಾ ಹದ್ದಿನಕಣ್ಣು ಇಟ್ಟಿರಬೇಕು.ರೈತನನ್ನು ಪೋಷಿಸಿ ಬೆಳೆಸಿ ಅನ್ನದಾತನಿಗೆ ಹರಸಬೇಕು.ಹಿಂದೆ ಕೃಷಿ ಇಲಾಖೆ ಅಧಿಕಾರಿಗಳೆಂದರೆ ಹೆಚ್ಚು ಗೌರವ ಬೆಲೆ ಅಷ್ಟಾಗಿ ಸಿಗುತ್ತಿರಲಿಲ್ಲ.ಆದರೆ ಇದೀಗ ತಾವು ಬಂದಮೇಲೆ ಕೃಷಿ ವಿಚಕ್ಷಣಾ ದಳದ ಕಾರ್ಯವೈಖರಿಯಿಂದ ಇಡೀ ಇಲಾಖೆಗೆ ಮಹತ್ವ ಗೌರವ ಬಂದಿದೆ. ನಕಲುಕೋರರು ರೈತನಿಗೆ ಮೋಸ ಮಾಡುವವರು ಕೃಷಿ ಇಲಾಖೆ ಕೃಷಿ ಇಲಾಖಾಧಿಕಾರಿಗಳೆಂದರೆ ಎಚ್ಚೆತ್ತುಕೊಳ್ಳಬೇಕು.ತಪ್ಪು ಮಾಡಬಾರದು ರೈತನಿಗೆ ಮೋಸ ಮಾಡಬಾರದು ಎಂದು ಅಂಜಬೇಕು.ಇಂತಹ ಕೆಲಸವನ್ನು ಕೃಷಿ ಇಲಾಖಾಧಿಕಾರಿಗಳು ಮಾಡಬೇಕು ಎಂದು ಕಿವಿ ಮಾತು ಹೇಳಿದರು.
‌ನಕಲು ರಸಗೊಬ್ಬರ,ಕಳಪೆ ಬೀಜ ಕೃತಕ ಅಭಾವ ಹೆಚ್ಚಿಸುವ ರಾಜ್ಯದಲ್ಲಿ ಕೃಷಿ ವಿಚಕ್ಷಣಾ(ಜಾಗೃತ)ದಳ ಹೆಚ್ಚು ಕ್ರಿತಾತ್ಮಕವಾಗಿದೆ.ಜಾಗೃತದಳದಿಂದ ಇಲ್ಲಿವರೆಗೆ 28 ಕೋ ರೂ ಮೊತ್ತದ ನಕಲಿ ಕಳಪೆ ರಸಗೊಬ್ಬರ ಬಿತ್ತನೆಬೀಜವನ್ನು ಸೀಜ್ ಮಾಡಲಾಗಿದೆ.15 ಲಕ್ಷ ರೂ ದಂಡವಾಗಿ 148 ನಕಲುಕೋರರ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ರೈತನಿಗೆ ಮೋಸ ಮಾಡುವವರನ್ನು ಗುರುತಿಸುವುದು ಅವರ ಮೇಲೆ ಕಣ್ಣಿಡುವುದು ಬರೀ ಜಾಗೃತದಳದ ಕೆಲಸವೆಂಬುದನ್ನು ತಾತ್ಸಾರ ಭಾವನೆ ತೋರದೇ ಇದು ರೈತನ ಕೆಲಸ ಅನ್ನದಾತನ ಕೆಲಸ ಇದಕ್ಕಾಗಿ ಎಲ್ಲರೂ ಮುಂದಾಗಿ ಕೃಷಿಕನನ್ನು ಹರಸಬೇಕೆಂಬ ಸದ್ಭಾವನೆ ಎಲ್ಲರ ಮನದಲ್ಲಿ ತಾಳಬೇಕು ಎಂದು ಬಿ.ಸಿ.ಪಾಟೀಲ್ ಸಭೆಯಲ್ಲಿ ಸಲಹೆ ನೀಡಿದರು.
ರಸಗೊಬ್ಬರದ ಕೊರತೆ ಎಲ್ಲಿಯೂ ಇಲ್ಲ.ಆದರೆ ಕೆಲ ವ್ಯಾಪಾರಸ್ಥರು ದುರಾಸೆಯ ಲಾಭಕ್ಕಾಗಿ ಕೃತಕ ಲಾಭ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರುವ ಹುನ್ನಾರ ಮಾಡುತ್ತಲೇ ಇರುತ್ತಾರೆ.ರಸಗೊಬ್ಬರವನ್ನು ಕೇಂದ್ರ ಸಕಾಲದಲ್ಲಿ ಸಮರ್ಪಕವಾಗಿ ಪೂರೈಸುತ್ತಲೇ ಇದೆ.ರಸಗೊಬ್ಬರದ ದಾಸ್ತಾನು ಇದೆ.ಇದನ್ನು ಅಧಿಕಾರಿಗಳು ರೈತರಿಗೆ ಒತ್ತಿ ಹೇಳುವ ಕೆಲಸ ಮಾಡಬೇಕು.
ನ್ಯಾನೋ ಗೊಬ್ಬರ ಬಳಕೆಗೆ ಹೆಚ್ಚು ಪ್ರೋತ್ಸಾಹಿಸಬೇಕು.ಭೂಮಿಯನ್ನು ಮಣ್ಣನ್ನು ಉಳಿಸುವ ಕೆಲಸ ಮಾಡಬೇಕು.

ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ತಾಕುಗಳಿಗೆ ಕಂದಾಯ ಇಲಾಖಾಧಿಕಾರಿಗಳೊಂದಿಗೆ ಕೃಷಿ ಇಲಾಖಾಧಿಕಾರಿಗಳೂ ಸಹ ಭೇಟಿ ನೀಡಿ ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.ರೈತ ವಿದ್ಯಾನಿಧಿ ಉಓಜನೆಯನ್ನು ರೈತ ಕೂಲಿಕಾರ್ಮಿಕ ಮಕ್ಕಳಿಗೂ ಸರ್ಕಾರ ವಿಸ್ತರಿಸಿದರ ಬಗ್ಗೆ ಹೆಚ್ಚು ಪ್ರಚಾರ ಮೂಡಿಸಬೇಕು.ಸರ್ಕಾರದ ಸೌಲಭ್ಯಗಮಕನ್ನು‌ರೈತರಿಗೆ ದೊರೆಯುವ ಬಗ್ಗೆ ಹಾಗೂ ರೈತ ಸ್ನೇಹಿ ಆಡಳಿತ ನೀಡುವ ಬಗ್ಗೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳು ಒಂದು ವಾರದಲ್ಲಿ ಪರಿಹಾರ ತಂತ್ರಾಂಶದಲ್ಲಿ ಜಂಟಿ ಬೆಳೆ ಸಮೀಕ್ಷೆಯ ರೈತರ ವರದಿಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು.

ಸಭೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಕೃಷಿ ಅಧಿಕಾರಿಗಳು, ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ.ಸಿ.ಮಂಜು,ಜಲಾನಯನ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಮತ್ತಿತ್ತರ ಪ್ರಮುಖರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...