Friday, March 20, 2026
Friday, March 20, 2026

ದೇಶಾಭಿಮಾನ ಉದ್ದೀಪಿಸಿದ ಈಸೂರು ಚಳವಳಿ ಕುರಿತ ನಾಟಕ

Date:

ಭಾವುಟಗಳನ್ನು ಹಿಡಿದು ಏರುದನಿಯಲ್ಲಿ ‘ವಂದೇ ಮಾತರಂ’, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’, ‘ಭಾರತ್ ಮಾತಾಕೀ ಜೈ’ ಎಂಬ ಘೋಷಣೆಗಳನ್ನು ಕೂಗುತ್ತ ಇದ್ದಕ್ಕಿದ್ದಂತೆ ಸಭಾಭವನದ ಏಳೂ ದ್ವಾರಗಳಿಂದ ಒಳಪ್ರವೇಶಿಸಿದ ಸ್ವಾತಂತ್ರ ಹೋರಾಟಗಾರ ನಾಟಕಧಾರಿಗಳು ಒಂದು ಕ್ಷಣ ಪ್ರೇಕ್ಷಕವಲಯವನ್ನು ಸ್ವಾತಂತ್ರ ಸಂಗ್ರಾಮದಲ್ಲಿ ಮುಳುಗೇಳಿಸಿತು ಹಾಗೂ ಮುಂದಿನ 45 ನಿಮಿಷಗಳ ಸ್ವಾತಂತ್ರ ಹೋರಾಟದ ಕಿಚ್ಚನ್ನು ಮೈಮನಗಳಿಗೇರಿಸಿದ ಅಪೂರ್ವ ಕ್ಷಣಗಳು ಕುವೆಂಪು ವಿವಿಯಲ್ಲಿ ನಡೆಯಿತು.

ಭಾರತದ ಸ್ವಾತಂತ್ರೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ ಒದಗಿಬಂದಿರುವುದರ ಸವಿನೆನಪಿಗಾಗಿ ಕರ್ನಾಟಕ ಸರ್ಕಾರವು ಸ್ವಾತಂತ್ರ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ನಡೆಸುತ್ತಿದೆ. ಅದರ ಭಾಗವಾಗಿ ದೇಶದಲ್ಲಿಯೇ ಮೊದಲ ಸ್ವಾತಂತ್ರ ಗ್ರಾಮ ಎಂದು ಘೋಷಿಸಿಕೊಂಡು ಹೆಸರುವಾಸಿಯಾಗಿದ್ದ ಶಿಕಾರಿಪುರದ ಈಸೂರು ಗ್ರಾಮದ ಸ್ವಾತಂತ್ರ ಹೋರಾಟ ನೆನೆಯುವ ಸಾಸ್ವೆಹಳ್ಳಿ ಸತೀಶ್ ರಚಿಸಿರುವ ಶ್ರೀಪಾದ್ ತೀರ್ಥಹಳ್ಳಿ ನಿರ್ದೇಶನದ ‘ಈಸೂರ ಕೊಡೆವು’ ನಾಟಕವನ್ನು ಶಿವಮೊಗ್ಗ ರಂಗಾಯಣ ವತಿಯಿಂದ ವಿವಿಯ ಬಸವ ಸಭಾ ಭವನದಲ್ಲಿ ಪ್ರದರ್ಶಿಸಲಾಯಿತು.

ಪ್ರತಿದಿನ ಪಾಠ-ಪ್ರವಚನ, ಪ್ರಯೋಗಾಲಯದ ಶೈಕ್ಷಣಿಕ ಚಟುವಟಿಕೆಗೆಳಲ್ಲಿ ತಲ್ಲೀನರಾಗಿರುತ್ತಿದ್ದ ವಿವಿಯ ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟದ ನಾಟಕ ವೀಕ್ಷಿಸಿ ಸ್ವಾತಂತ್ರ ಘೋಷಣೆಗಳನ್ನು ಮೊಳಗಿಸುತ್ತಿದ್ದಿದುದು ಕಂಡುಬಂದಿತು. ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಸ್ವಾತಂತ್ರ ಹೋರಾಟದ ಚರಿತ್ರಾರ್ಹ ಘಟನೆಗಳಲ್ಲಿ ಈಸೂರಿನ ಹೋರಾಟವು ಒಂದು. ಇಂದಿನ ಯುವ ಪೀಳಿಗೆಗೆ ಗಾಂಧಿ, ನೆಹರು, ಅಂಬೇಡ್ಕರ್‌ರ ಹೋರಾಟಗಳು, ಕೊಡುಗೆಗಳೇನು ಎಂದು ಅರ್ಥಮಾಡಿಸುವ ಜೊತೆಗೆ ಸ್ವಾತಂತ್ರ ಸಂಗ್ರಾಮದಲ್ಲಿ ಮಡಿದ ಅನೇಕ ಅನಾಮಧೇಯ ಹುತಾತ್ಮರನ್ನು ಪರಿಚಯಿಸಬೇಕಿದೆ. ವಿದ್ಯಾರ್ಥಿಗಳು ಸ್ವಾತಂತ್ರದ ಮೌಲ್ಯವನ್ನು ಅರಿಯಲು ಹಾಗೂ ದೇಶಾಭಿಮಾನ ಮೂಡಿಸಿಕೊಳ್ಳಲು ಈಸೂರ ಕೊಡೆವು ನಂತಹ ಈ ನೆಲದ ಸತ್ಯ ಘಟನೆಗಳ ಕುರಿತ ನಾಟಕಗಳು ಬಹುಸಹಕಾರಿ ಎಂದು ತಿಳಿಸಿದರು.

ಶಿವಮೊಗ್ಗ ರಂಗಾಯಣದ ಮುಖ್ಯಸ್ಥ ಸಂದೇಶ್ ಜವಳಿ ಮಾತನಾಡಿ, ಶಿವಮೊಗ್ಗ ರಂಗಾಯಣ ವತಿಯಿಂದ ಎರಡು ತಂಡಗಳನ್ನು ರಚಿಸಿ ಈಸೂರ ಕೊಡೆವು ನಾಟಕವನ್ನು ಕರ್ನಾಟಕದಾದ್ಯಂತ 100ಕ್ಕೂ ಹೆಚ್ಚು ಕಡೆ ಪ್ರದರ್ಶನ ಮಾಡಲಾಗುತ್ತಿದೆ. ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕದ ಕೊಡುಗೆಯು ಕಡಿಮೆಯೇನೆಲ್ಲ ಎಂಬುದನ್ನು ನಮ್ಮ ಜನರು ಅರಿಯಬೇಕು. ಚಳುವಳಿಯಲ್ಲಿ ಕರ್ನಾಟಕದ ಕೊಡುಗೆಗಳನ್ನು, ಸ್ವಾತಂತ್ರ ಸೇನಾನಿಗಳ ತ್ಯಾಗ, ವೀರಗಾಥೆಗಳನ್ನು ಅರಿತು ತಾಯ್ನಾಡಿನ ಮೇಲಿನ ಪ್ರೀತಿಯನ್ನು, ಅಭಿಮಾನವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದು ಕರೆಕೊಟ್ಟರು.

ಶಿಕಾರಿಪುರ ತಾಲೂಕಿನ ಈಸೂರು ಗ್ರಾಮಸ್ಥರು ಗಾಂಧೀಜಿಯವರ ಘೋಷಣೆಯಂತೆ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅದರ ಭಾಗವಾಗಿ ಬ್ರಿಟಿಷ್ ಸರ್ಕಾರಕ್ಕೆ ಕಂದಾಯ ಭರಿಸಲು ನಿರಾಕರಿಸಿ, ಶಾನುಭೋಗ ಮತ್ತು ಪಟೇಲರಿಂದ ಕೈಯಿಂದ ಕಂದಾಯ ಪುಸ್ತಕವನ್ನು ಕಿತ್ತುಕೊಂಡು ಕಳಿಸುವ ಮೂಲಕ ಆರಂಭವಾಗುವ ಸಂಘರ್ಷವು ಬ್ರಿಟಿಷ್ ಸರ್ಕಾರದ ಸೇನೆಯೊಡಗಿನ ಹೋರಾಟ, ಅದರ ದಬ್ಬಾಳಿಕೆ, ಅನ್ಯಾಯಗಳನ್ನು ಅನುಭವಿಸಿ ಕಡೆಗೆ ಸ್ವಾತಂತ್ರವೇ ಮುಖ್ಯ ಎಂದು ಗಲ್ಲಿಗೇರುವವರೆಗಿನ ಕಥಾನಕವನ್ನು ತೀರ್ಥಹಳ್ಳಿಯ ಪ್ರಥಮ ದರ್ಜೆ ಕಾಲೇಜು ಹಾಗೂ ತುಂಗಾ ಕಾಲೇಜಿನ ವಿದ್ಯಾರ್ಥಿಗಳು ಮೈನವಿರೇಳಿಸುವಂತೆ ಅಭಿನಯಿಸಿದರು.

ಈಸೂರಿನ ಐವರು ವೀರರು ಗಲ್ಲಿಗೇರಿದ ನಂತರ ಮೊಳಗಿದ ವಂದೇಮಾತರಂ ಗೀತೆಗೆ ಸಭಿಕರು ಎದ್ದುನಿಂತು ಗೌರವಿಸುವಾಗ ಕಣ್ಣಾಲಿಗಳು ತೇವಗೊಂಡದ್ದು ಕಂಡುಬಂದಿತು. ಇನ್‌ಸ್ಪೆಕ್ಟರ್ ಕೆಂಚೇಗೌಡ, ಲಂಗೋಜಿರಾವ್ ಹಾಗೂ ಗ್ರಾಮಸ್ಥರ ಪ್ರಾತ್ರಗಳಲ್ಲಿ ವಿದ್ಯಾರ್ಥಿಗಳು ಪರಕಾಯ ಪ್ರವೇಶ ಮಾಡಿದಂತೆ, ಸ್ವಾತಂತ್ರ ಹೋರಾಟದ ಸ್ಫೂರ್ತಿ ಮನತುಂಬಿ ಬಂದಿತೆಂದು ಸಭಿಕರು ಕಡೆಗೆ ಅಭಿಪ್ರಾಯ ವ್ಯಕ್ತಪಡಿಸಿದರು. ನಾಟಕ ವೀಕ್ಷಿಸಲು ವಿವಿಯ ಕುಲಸಚಿವೆ ಅನುರಾಧ ಜಿ, ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ನಾಟಕ ವೀಕ್ಷಿಸಿ ದೇಶಾಭಿಮಾನದ ಕಿಚ್ಚಿನಲ್ಲಿ ಮಿಂದೆದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...