Tuesday, December 16, 2025
Tuesday, December 16, 2025

ಅಮೃತ ಮಹೋತ್ಸವ ನಿಮಿತ್ತ ಎಲ್ಲರ ಮನೆಯ ಮೇಲೂ ರಾಷ್ಟ್ರಧ್ವಜ ಹೆಮ್ಮೆಯ ಸಂಗತಿ-ಶ್ರೀರಂಜಿನಿ ದತ್ತಾತ್ರಿ

Date:

ಅಮೃತ ಭಾರತ ಸಂಭ್ರಮಾಚರಣೆಯ ಪ್ರಯುಕ್ತ ಬಸವನಗಂಗೂರು ಸ.ಹಿ.ಪ್ರಾ.ಶಾಲೆ, ಬಸವನಗಂಗೂರು ಗ್ರಾಮ, ಅಬ್ಬಲಗೆರೆ ಗ್ರಾಮ ಪಂಚಾಯತಿ ಹಾಗೂ ಮನ್ವಂತರ ಮಹಿಳಾಮಂಡಳದ ಸಹಯೋಗದಲ್ಲಿ ಹರ್ ಘರ್ ಮೆ ತಿರಂಗಾ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು..

ಸ್ವಾತಂತ್ರ್ಯ ಭಾರತಕ್ಕಾಗಿ ನಮ್ಮ ದೇಶಭಕ್ತರು, ಯೋಧರು, ರಾಷ್ಟ್ರ ಭಕ್ತರು ನೀಡಿದ ಅಮೂಲ್ಯ ಬಲಿದಾನ ಕೊಡುಗೆಯ ಬಗ್ಗೆ ಶ್ರೀರಂಜಿನಿ ದತ್ತಾತ್ರಿಯವರು ಮಾಹಿತಿ ನೀಡಿದರು.
ತಿರಂಗಾಧ್ವಜ ಅಮೃತಾ ಭಾರತದ ನಿಮಿತ್ತ ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಈ ದೇಶದ ಸಮಸ್ತ ಪ್ರಜೆಗಳಿಗೂ ಅವರವರ ಮನೆಯ ಮೇಲೆ ತಿರಂಗಾಧ್ವಜವನ್ನು ಹಾರಿಸಲು ಅನುಮತಿ ನೀಡಿದ ಒಂದು ಸುವರ್ಣ ಅವಕಾಶ. ಸ್ವತಂತ್ರ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಇತ್ಯಾದಿ ವಿಶೇಷ ದಿನಗಳಲ್ಲಿ ನಿರ್ದಿಷ್ಟ ಸ್ಥಳಗಳನ್ನು ಹೊರತುಪಡಿಸಿ ಎಲ್ಲಿಯೂ ತ್ರಿವರ್ಣ ಧ್ವಜದ ಹಾರಾಟಕ್ಕೆ ಅನುಮತಿ ಇರುವುದಿಲ್ಲ. ಆದರೆ ಅಮೃತ ಭಾರತದ ನಿಮಿತ್ತ ಭಾರತದ ಪ್ರತಿಯೊಬ್ಬ ಭಾರತೀಯನೂ ತನ್ನ ಮನೆಯ ಮೇಲೆ ತ್ರಿವರ್ಣದ ಧ್ವಜ ಹಾರಿಸುವ ಸದವಕಾಶ ಭಾರತ ಸರ್ಕಾರ ನೀಡಿದೆ ಇದನ್ನು ನಾವು ಸಮ್ಮಾನದಿಂದ ಸ್ವೀಕರಿಸಿ ಧ್ವಜಕ್ಜೆ ವಂದನೆ ಸಲ್ಲಿಸಿ ನಮ್ಮ ರಾಷ್ಟ್ರ ಧ್ವಜವನ್ನ ಮುಗಿಲೆತ್ತರಕ್ಕೆ ಹಾರಿಸೋಣ ಎಂದು ನುಡಿದರು.

ಬಸವನ ಗಂಗೂರು ಗ್ರಾಮ ಅಬ್ಬಲಗೆರೆ ಗ್ರಾ.ಪಂ. ಅಧ್ಯಕ್ಷರಾದ ಬಸಮ್ಮನವರು,ಆಶಾ ಕಾರ್ಯಕರ್ತೆ, ಗ್ರಾ.ಪಂ ಸದಸ್ಯರಿಗೆ , ಶಾಲಾ ಮುಖ್ಯೋಪಾಧ್ಯಾಯರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸಮ್ಮ, ಸದಸ್ಯರಾದ ದೇವಮ್ಮ , ವಿಜಯ್ ಕುಮಾರ್, ರಾಜಶೇಖರ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ನಟರಾಜ್, ಸದಸ್ಯರಾದ ರೋಜಾ, ವಿಜಯ್ ಕುಮಾರ್ ಸಂತೋಷ್ , ಉಷಾ.
ಶಾಲೆಯ ಮುಖೋಪಾಧ್ಯಾಯರಾದ ವಿದ್ಯಾಆಣ್ಣಪ್ಪ , ಶಿಕ್ಷಕರಾದ ಸವಿತಾ, ರುದ್ರಮೂರ್ತಿ, ಮಾರುತಿ ನಾಯಕ್ ರವರು ಉಪಸ್ಥಿತರಿದ್ದರು.
ಮನ್ವಂತರದ ಮಹಿಳಾ ಮಂಡಳದ ಅಧ್ಯಕ್ಷ ಶ್ರೀರಂಜಿನಿ ದತ್ತಾತ್ರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...