Sunday, December 14, 2025
Sunday, December 14, 2025

ಹೇಳಿದಂತೆ ಚಿನ್ನ ಗೆದ್ದ ಸಿಂಧು

Date:

ಬರ್ಮಿಂಗ್‌ಹ್ಯಾಮ್‌ನ ಎನ್‌ಇಸಿ ಅರೆನಾದಲ್ಲಿ ಸೋಮವಾರ ಭಾರತದ ಬ್ಯಾಡ್ಮಿಂಟನ್‌ ಕ್ರೀಡೆಯ ಶಕ್ತಿ ಅನಾವರಣಗೊಂಡಿತು. ಮೂರು ಚಿನ್ನದ ಪದಕ ಬಗಲಿಗೆ ಹಾಕಿಕೊಂಡ ಭಾರತದ ಸ್ಪರ್ಧಿಗಳು ಇತಿಹಾಸ ರಚಿಸಿದರು.

ಪಿ.ವಿ.ಸಿಂಧು ಮತ್ತು ಲಕ್ಷ್ಯಸೇನ್‌ ಅವರು ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರೆ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹಾಗೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಸಿಂಧು ಅವರಿಗೆ ಕಾಮನ್‌ವೆಲ್ತ್‌ ಕೂಟದ ಚಿನ್ನ ಮರೀಚಿಕೆಯಾಗಿಯೇ ಉಳಿದಿತ್ತು. ಅವರ ಕಾಯುವಿಕೆಗೆ ಈ ಬಾರಿ ತೆರೆಬಿದ್ದಿದೆ. ಸಿಂಧು 2018 ಮತ್ತು 2014ರ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದ್ದರು.

ಸೋಮವಾರ ನಡೆದ ಫೈನಲ್‌ನಲ್ಲಿ ಹೈದರಾಬಾದ್‌ನ ಆಟಗಾರ್ತಿ 21-15, 21-13 ರಲ್ಲಿ ಕೆನಡಾದ ಮಿಷೆಲ್ ಲಿ ಅವರನ್ನು ಪರಾಭವಗೊಳಿಸಿದರು. ಲಕ್ಷ್ಯ ಸೇನ್‌ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 19-21, 21-9, 21-16 ರಲ್ಲಿ ಮಲೇಷ್ಯಾದ ಎಂಗ್ ತ್ಸೆ ಯೊಂಗ್‌ ಅವರನ್ನು ಮಣಿಸಿದರು.

‍ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ರಿಂದ ಚಿರಾಗ್‌ 21-15, 21-13 ರಲ್ಲಿ ಇಂಗ್ಲೆಂಡ್‌ನ ಬೆನ್‌ ಲೇನ್‌- ಸೀನ್‌ ವೆಂಡಿ ಅವರ ಸವಾಲನ್ನು ಮೆಟ್ಟಿನಿಂತರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿರುವ ಸಿಂಧು ಅವರು 13ನೇ ರ‍್ಯಾಂಕ್‌ನ ಆಟಗಾರ್ತಿ ಎದುರು ಎರಡೂ ಗೇಮ್‌ಗಳಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದರು. ಮಿಷೆಲ್‌ ಅವರು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಕೊನೆಯದಾಗಿ ಸಿಂಧು ಅವರನ್ನು ಮಣಿಸಿದ್ದರು.

ಮೊದಲ ಗೇಮ್‌ನಲ್ಲಿ ಮಿಷೆಲ್‌ ನೆಟ್ ಬಳಿಯೇ ಆಡಿ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರೆ, ಸಿಂಧು ಆಕ್ರಮಣಕಾರಿ ಆಟದ ಮೊರೆಹೋದರು. 7-5 ರಲ್ಲಿ ಮೇಲುಗೈ ಪಡೆದ ಅವರು ಮೊದಲ ವಿರಾಮದ ಅವಧಿಯ ಬಳಿಕ ಸತತ ಮೂರು ಪಾಯಿಂಟ್‌ ಗಿಟ್ಟಿಸಿ ಮುನ್ನಡೆಯನ್ನು 14-8ಕ್ಕೆ ಹೆಚ್ಚಿಸಿಕೊಂಡರು.

ಸತತ ಎರಡು ಬ್ಯಾಕ್‌ಹ್ಯಾಂಡ್‌ ವಿನ್ನರ್‌ಗಳ ಮೂಲಕ ಮಿಷೆಲ್‌ ಹಿನ್ನಡೆಯನ್ನು 14-17ಕ್ಕೆ ತಗ್ಗಿಸಿದರು. ನಂತರ ಎದುರಾಳಿಗೆ ಒಂದು ಪಾಯಿಂಟ್‌ ಬಿಟ್ಟುಕೊಟ್ಟ ಸಿಂಧು ಗೇಮ್‌ ಗೆದ್ದರು.

ಎರಡನೇ ಗೇಮ್‌ನ ಆರಂಭದಲ್ಲಿ 4-2ರ ಮೇಲುಗೈ ಪಡೆದ ಸಿಂಧು, ವಿರಾಮದ ವೇಳೆಗೆ 11-6ರ ಮುನ್ನಡೆಯಲ್ಲಿದ್ದರು. ಆ ಬಳಿಕವೂ ಶಿಸ್ತಿನ ಆಟ ಮುಂದುವರಿಸಿ ಕ್ರಾಸ್‌ ಕೋರ್ಟ್‌ ವಿನ್ನರ್‌ ಮೂಲಕ ಗೇಮ್‌ ಹಾಗೂ ಪಂದ್ಯವನ್ನು ಗೆದ್ದುಕೊಂಡು ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಟ್ಟರು.

20 ವರ್ಷದ ಲಕ್ಷ್ಯ ಅವರು ಮೊದಲ ಗೇಮ್‌ನಲ್ಲಿ ಸೋತರೂ, ಅಮೋಘ ರೀತಿಯಲ್ಲಿ ತಿರುಗೇಟು ನೀಡಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...