ವಿಜಯ ಕರ್ನಾಟಕ ಪತ್ರಿಕೆಯ ಸಹಯೋಗದಲ್ಲಿ ಆಗಸ್ಟ್ 6 ಮತ್ತು 7ರಂದು ಒಕ್ಕಲಿಗರ ಸಮುದಾಯ ಭವನ ಬಾಲರಾಜ್ ಅರಸ್ ರಸ್ತೆ ಶಿವಮೊಗ್ಗದಲ್ಲಿ ಎಜುಕೇಶನ್ ಫೇರ್ ನಡೆಯಲಿದೆ.
ಫೇರ್ ನಲ್ಲಿ ಕೆಇಎ ಅಧಿಕಾರಿಗಳಿಂದ ಕೆಸಿಇಟಿ ಮತ್ತು ಕಾಮೆಡ್ -ಕೆ ಕುರಿತು ಸಮಾಲೋಚನೆ, ಉನ್ನತ ವಿಶ್ವ ವಿದ್ಯಾಲಯಗಳ ಮತ್ತು ಪ್ರತಿಷ್ಠಿತ ಕಾಲೇಜುಗಳಲ್ಲಿರುವ ವಿದ್ಯಾರ್ಥಿ ವೇತನ ಕುರಿತು ಪ್ರತಿ ವಿದ್ಯಾರ್ಥಿ ,ಪಾಲಕ ಪೋಷಕರಿಗೆ ತಜ್ಞರಿಂದ ಮಾಹಿತಿ ದೊರೆಯಲಿದೆ.
ವೃತ್ತಿಪರ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಯಲಿದೆ. ಅತಿ ಹೆಚ್ಚು ವಿಶ್ವವಿದ್ಯಾಲಯಗಳು ಕಾಲೇಜುಗಳು ಒಂದೇ ಸೂರಿನಡಿ ಭಾಗವಹಿಸುತ್ತಿರುವುದು ಗಮನಾರ್ಹ
