ಪ್ರಸ್ತುತ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಹೊರತಾಗಿ ಸಾಕಷ್ಟು ವೃತ್ತಿಪರ ಕೋರ್ಸ್ ಗಳಿದ್ದು, ಸಂಬಳದ ಜೊತೆ ಸಮಾಜದಲ್ಲಿ ಗುರುತಿಸಿಕೊಳ್ಳುವ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಶ್ರೀಮತಿ ಎಂ.ಆರ್. ಸೀತಾ ಲಕ್ಷೀ ಉದಾಹರಣೆ ಸಹಿತ ವಿವರಿಸಿದರು .
ಅವರು ಭದ್ರಾವತಿ ಸಂಸ್ಕೃತಿ ಸೌರಭ ಜುಲೈ 31 ರಂದು ನಯನ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಸಾಕಷ್ಟು ಅಂಕಗಳಿಸಿ ಪ್ರತಿಭಾನ್ವಿತರಾಗಿದ್ದರೂ, ಸಂದರ್ಶನದಲ್ಲಿ ಹಿನ್ನಡೆಯಾಗುತ್ತಿದೆ. ಆದ್ದರಿಂದ ಇಂಗ್ಲಿಷ್ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡು ಸುಲಲಿತವಾಗಿ ಮಾತನಾಡಲು ಅಭ್ಯಾಸ ಮಾಡಬೇಕೆಂದು ಕರೆ ನೀಡಿದರು. ಸಂಸ್ಕೃತಿ ಸೌರಭದ ಅಧ್ಯಕ್ಷರಾದ ಶ್ರೀ ಹೆಚ್.ಎನ್. ಸುಬ್ರಹ್ಮಣ್ಯ ನವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಎಚ್. ಎನ್. ಕೃಷ್ಣ ಸ್ವಾಮಿ ಸ್ವಾಗತಿಸಿದರು. ಶ್ರೀ ರಮೇಶ್ ಬಾಬು ಅವರು ವಂದಿಸಿದರು. ಶ್ರೀಮತಿ ಶಾರದಾ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.