Monday, December 8, 2025
Monday, December 8, 2025

ಮಹಾರಾಜ ಟ್ರೋಫಿ ತಂಡಗಳು ಪ್ರಕಟ

Date:

ಮಹಾರಾಜಾ ಟ್ರೋಫಿ ತಂಡಗಳ ಮಾಹಿತಿ ಇಲ್ಲಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನೂತನವಾಗಿ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ಸಂಘಟಿಸುತ್ತಿದ್ದು, ಮಹಾರಾಜಾ ಟ್ರೋಫಿಗಾಗಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಸೆಣಸಾಟ ನಡೆಸಲಿವೆ.

ಕ್ರಿಕೆಟ್ ಪಂದ್ಯಾವಳಿ ಆಗಷ್ಟ್ 7 ರಿಂದ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ರಾಜ್ಯದ ಪ್ರಮುಖ ಕ್ರಿಕೆಟಿಗರು ವಿವಿಧ ತಂಡಗಳ ಪರವಾಗಿ ಆಡಲಿದ್ದಾರೆ. ಈ ಹಿಂದೆ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹೆಸರಿನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಟಿ-20 ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಎಂಟು ಆವೃತ್ತಿಗಳನ್ನು ಯಶಸ್ಸಿಯಾಗಿ ಸಂಘಟಿಸಿತ್ತು.

ಆದರೆ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 2019 ರಿಂದ ಟೂರ್ನಿಯನ್ನು ಸ್ಥಗಿತಗೊಳಿಸಲಾಯಿತು. ಮಹಾರಾಜಾ ಟ್ರೋಫಿಗಾಗಿ ನಡೆಯಲಿರುವ ಟಿ-20 ಮಾದರಿಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರಮುಖ ಆಟಗಾರರಾದ ಮಯಾಂಕ್ ಅಗರವಾಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಅಭಿಮನ್ಯು ಮಿಥುನ್, ಆರ್ ಸಮರ್ಥ್, ವೈಶಾಕ್ ವಿಜಯ್ ಕುಮಾರ್, ಮನೀಷ್ ಪಾಂಡೆ, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗಡೆ, ಪವನ್ ದೇಶಪಾಂಡೆ, ಆರ್.ಸಮರ್ಥ್ ಮುಂತಾದ ಖ್ಯಾತ ಆಟಗಾರರು ವಿವಿಧ ತಂಡಗಳ ಪರ ಕಣಕ್ಕೆ ಇಳಿಯಲಿದ್ದಾರೆ.


ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್, ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಟ್ರೋಫಿಗಾಗಿ ಹೋರಾಟ ನಡೆಸಲಿವೆ.

ಶಿವಮೊಗ್ಗ ಸ್ಟ್ರೈಕರ್ಸ್:
ಕೃಷ್ಣಪ್ಪ ಗೌತಮ್, ಕೆಸಿ ಕಾರಿಯಪ್ಪ, ರೋಹನ್ ಕದಮ್, ಕೆವಿ ಸಿದ್ಧಾರ್ಥ, ದರ್ಶನ್ ಎಂಬಿ, ಸ್ಟಾಲಿನ್ ಹೂವರ್, ಅವಿನಾಶ್ ಡಿ, ಸ್ಮರಣ್ ಆರ್, ಶರತ್ ಬಿಆರ್, ರಣವೀರ್ ವಾಧ್ವಾ, ರಾಜೇಂದ್ರ ಡಂಗನವರ್, ಉತ್ತಮ್ ಅಯಪ್ಪ, ಚೈತನ್ಯ ಎಸ್, ಶ್ರೇಯಸ್ ಬಿಎಂ, ಕೆಎಸ್ ದೇವಯ್ಯ, ವಿನಯ್ ಸಾಗರ್, ಶ್ರೇಯಸ್ ಎಸ್ಪಿ ಮತ್ತು ಪುನಿತ್ ಎಸ್

ಮಂಗಳೂರು ಯುನೈಟೆಡ್:
ಅಭಿನವ್ ಮನೋಹರ್, ಆರ್ ಸಮರ್ಥ್, ವೈಶಾಕ್ ವಿಜಯ್ ಕುಮಾರ್, ಅಮಿತ್ ವರ್ಮಾ, ಎಂ ವೆಂಕಟೇಶ್, ಅನೀಶ್ವರ್ ಗೌತಮ್, ಸುಜಯ್ ಸತ್ಯಹರಿ, ರೋಹಿತ್ ಕುಮಾರ್ ಎಸಿ, ಮ್ಯಾಕ್ನೀಲ್ ನೊರೊನ್ಹಾ, ಎಚ್.ಎಸ್ ಶರತ್, ಶಿವಕುಮಾರ್ ಕೆ, ನಿಕಿನ್ ಜೋಸ್, ರಘುವೀರ್ ಪಾವಲೂರ್, ಅಮೋಘ್ ಎಸ್, ಚಿನ್ಮಯ್ ಎನ್.ಎ, ಆದಿತ್ಯ ಸೋಮಣ್ಣ, ಯಶವರ್ಧನ್, ಧೀರಜ್ ಗೌಡ

ಹುಬ್ಬಳ್ಳಿ ಟೈಗರ್ಸ್:
ಅಭಿಮನ್ಯು ಮಿಥುನ್, ಲವ್ನಿತ್ ಸಿಸೋಡಿಯಾ, ವಿ ಕೌಶಿಕ್, ಲಿಯಾನ್ ಖಾನ್, ನವೀನ್ ಎಂಜಿ, ಆನಂದ್, ಶಿವಕುಮಾರ್ ಬಿಯು, ತುಷಾರ್ ಸಿಂಗ್, ಆಕ್ಷಣ್ ರಾವ್, ಜಹೂರ್ ಫಾರೂಕಿ, ರೋಹನ್ ನವೀನ್, ಸೌರಭ್ ಶ್ರೀವಾಸ್ತವ, ಸಾಗರ್ ಸೋಲಂಕಿ, ಗೌತಮ್ ಸಾಗರ್, ರೋಷನ್ ಎ, ರಾಹುಲ್ ಸಿಂಗ್ ರಾವತ್, ಶಿಶಿರ್ ಭಾವನೆ ಮತ್ತು ಶರಣ್ ಗೌಡ

ಮೈಸೂರು ವಾರಿಯರ್ಸ್
ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗಡೆ, ಪವನ್ ದೇಶಪಾಂಡೆ, ವಿದ್ಯಾಧರ್ ಪಾಟೀಲ್, ಉಳ್ಳಾಲ್, ಪ್ರತೀಕ್ ಜೈನ್, ಲೋಚನ್ ಅಪ್ಪಣ್ಣ, ಚಿರಂಜೀವಿ, ನಾಗ ಭರತ್, ಭರತ್ ದೂರಿ, ಶಿವರಾಜ್ ಎಸ್, ಮೋನಿಶ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಭಿಲ್ಲೆ, ಆದಿತ್ಯ ಗೋಯಲ್, ಅಭಿಷೇಕ್ ಅಹ್ಲಾವತ್

ಬೆಂಗಳೂರು ಬ್ಲಾಸ್ಟರ್ಸ್;
ಮಯಾಂಕ್ ಅಗರ್ವಾಲ್, ಜೆ ಸುಚಿತ್, ರೋನಿತ್ ಮೋರೆ, ಅನಿರುಧ್ ಜೋಶಿ, ಪ್ರದೀಪ್ ಟಿ, ಕ್ರಾಂತಿ ಕುಮಾರ್, ಚೇತನ್ ಎಲ್.ಆರ್, ಅನೀಶ್ ಕೆವಿ, ಕುಮಾರ್ ಎಲ್.ಆರ್, ರಕ್ಷಿತ್ ಎಸ್, ರಿಷಿ ಬೋಪಣ್ಣ, ಸಂತೋಕ್ ಸಿಂಗ್, ಸೂರಜ್ ಅಹುಜಾ, ಪಾರಸ್ ಗುರ್ಬಕ್ಸ್ ಆರ್ಯ, ಲೋಚನ್ ಎಸ್ ಗೌಡ, ಸೀನ್ ಇಶಾನ್ ಜೋಸೆಫ್, ಕುಹುಶ್ ಮರಾಠೆ, ತನಯ್ ವಾಲ್ಮಿಕ್.

ಗುಲ್ಬರ್ಗಾ ಮಿಸ್ಟಿಕ್ಸ್
ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಸಿಎ ಕಾರ್ತಿಕ್, ಮನೋಜ್ ಭಾಂಡ್ಗೆ, ಶ್ರೀಜಿತ್ ಕೆಎಲ್, ವಿ ಕಾವೇರಪ್ಪ, ಕೃತಿಕ್ ಕೃಷ್ಣ, ಅಭಿಲಾಷ್ ಶೆಟ್ಟಿ, ಕುಶಾಲ್ ವಾಧ್ವಾನಿ, ಪ್ರಣವ್ ಭಾಟಿಯಾ, ಮೋಹಿತ್ ಬಿಎ, ರೋಹನ್ ಪಾಟೀಲ್, ಧನಿಶ್ ಗೌಡ, ಮೊಹಮ್ಮದ್ ಅಕಿಬ್ ಜಾವೇದ್, ಶ್ರೀಶ ಆಚಾರ್, ಜೇಶ್ವಂತ್ ಆಚಾರ್ಯ, ಆರೋನ್ ಕ್ರಿಸ್ಟಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...