ಚಿರತೆಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಭಾರತದಲ್ಲಿ ವನ್ಯಜೀವಿ ಸಂಪತ್ತಿನ ಅಭಿವೃದ್ಧಿಯಾಗುತ್ತಿದೆ.
ಅಳಿವಿನಂಚಿನ ಪ್ರಾಣಿಗಳು ಎಂದು ಘೋಷಣೆಯಾದ 70 ವರ್ಷಗಳ ನಂತರ ಪ್ರಥಮ ಬಾರಿಗೆ ದೇಶದ ಕಾಡುಗಳು ಚಿರತೆಗಳಿಗೆ ನೆಲೆಯಾಗುತ್ತಿವೆ.
ಅಳಿವಿನಂಚಿಗೆ ತಳ್ಳಲ್ಪಟ್ಟು ಸುಮಾರು 70 ವರ್ಷಗಳ ನಂತರ ಕೇಂದ್ರ ಸರ್ಕಾರವು ಚಿರತೆಯನ್ನು ಮತ್ತೆ ದೇಶದಲ್ಲಿ ಪರಿಚಯಿಸುವ ತನ್ನ ಯೋಜನೆಯನ್ನು ಇತ್ತೀಚೆಗಷ್ಟೇ ಘೋಷಿಸಿತ್ತು.
ಈ ವರ್ಷದ ಆಗಸ್ಟ್ ವೇಳೆಗೆ ಮಧ್ಯಪ್ರದೇಶದ ಕುನೋ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದಿಂದ ಚಿರತೆಗಳನ್ನು ತರಲು ಭಾರತ ಸಜ್ಜಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಂಗಳ ಹಿಂದೆ ತಿಳಿಸಿತ್ತು.
ವಿಶ್ವದಲ್ಲಿ ಚಿರತೆಗಳ ಅತಿದೊಡ್ಡ ನೆಲೆ
ಪ್ರಸ್ತುತ ಕೇಂದ್ರ ಸರ್ಕಾರದ ಯೋಜನೆ ಸದ್ಯದಲ್ಲಿಯೇ ಸಾಕಾರಗೊಳ್ಳಲಿದೆ. ಅವುಗಳಲ್ಲಿ ಎಂಟು ಚಿರತೆ ಆಗಸ್ಟ್ ನಲ್ಲಿ ಆಫ್ರಿಕಾದ ನಮೀಬಿಯಾದಿಂದ ಬರಲಿವೆ, ನಮೀಬಿಯಾ ವಿಶ್ವದಲ್ಲಿ ಚಿರತೆಗಳ ಅತಿದೊಡ್ಡ ನೆಲೆಯಾಗಿದೆ.