ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ.
ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೇ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ ಶಿವಮೊಗ್ಗ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ? ಎಂಬ ವಿವರ ಇಲ್ಲಿದೆ.
ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಂದ್ರಿ, ದೊಡ್ಡ ಬಿಳಗೊಡು, ಅಲವಳ್ಳಿ, ಹುಲುಸಾಲೆ ಮಳವಳ್ಳಿ, ಹೊಲಗೊಡು, ಅಮಾಚಿ, ತೋಟದ ಕೊಪ್ಪ, ಹರಿದ್ರಾವತಿ, ಹೆಚ್.ಹುನಸವಳ್ಳಿ, ಮೆನಸೆ, ಮಸರೂರ್, ನೆಲಗಲಾಲೆ, ಕನಗೋಡು, ಗುಬ್ಬಿಗಾ, ಮೇಲಿನ ಸಂಪಲ್ಲಿ, ಚುರ್ಡಾ, ಬಸವಪುರ, ಮಜವನ, ನೇರಳ ಮನೆ, ಬಸವನಪುರ, ಬೆನವಳ್ಳಿ, ಅರಸಲು, ಸಿದಿಯಾಪುರ, ವೀರಭದ್ರಾಪುರ, ಕಾಚಿಗೇಬೈಲು, ಕಲಸೆಟ್ಟಿ ಕೊಪ್ಪ, ಕುಕಕಳಲೆ, ಹೊಸಕೊಪ್ಪ, ಜೆನಿ, ಬಿಲ್ಕಿ, ಅಂದಗೊಳಿ, ಹೀರೆಮೈತಿ, ಹಳೇತೋಟ, ಹಾರೋಹಿತ್ಲು, ಕಾಲ್ಕೊಪ್ಪ, ಕೋಟೆಶಿರೂರ್, ಮಳವಳ್ಳಿ, ಹೆಬ್ಬಿಗೆ, ಪುಣಾಜೆ, ನೀಲಕಂಠನ ತೋಟ, ತಮ್ಮಾದಿಕೊಪ್ಪ, ಅರಗೋಡಿ, ಮಳಲಿ, ಕೆಸರೆ, ಹೆಚ್ ಹೊನ್ನೆಕೊಪ್ಪ, ಕರಕೋಡು, ತರಿಗಾ, ಮಸಗಳ್ಳಿ, ಹರಂಬಳ್ಳಿ, ದುಮ್ಮ, ಕೊಳವಳ್ಳಿ, ಕಲಿಕಾಪುರ, ಮುಗಡ್ತಿ ಮುಳಗಡ್ಡೆ, ಕುಸಗುಂಡಿ, ಕಲಸೆ, ತಲಸೆ, ಮುತ್ತೂರ್, ಗುಬ್ಬಿಗಾ, ಕಾಲ್ಕೊಪ್ಪ, ಯಲಗಲ್ಲು, ಅದಗೋಡಿ, ಕಲ್ಲೂರು, ಕಾಗಜಿ, ಕರಿಗೆರಸು, ಬೇಲೂರು, ನಗೋಡಿ, ಹುಲಿಗಡ್ಡೆ, ಮಂಜಗಳಲೆ, ಕೆ ಕಣ್ಣೂರು, ಹೆಬ್ಬೂರ್ಲಿ, ಹೊಸೂರು, ಬಿದ್ದಹಳ್ಳಿ, ಬೆಹಳ್ಳಿ, ಕೆ ಕಣ್ಣೂರು, ಮಸಕಣಿ, ಶಾಕವಳ್ಳಿ, ಎಲ್. ಗುಡ್ಡೆಕೊಪ್ಪ, ವದಹೊಸಳ್ಳಿ, ಅಮೃತ, ಮಳಲಿ ಕೊಪ್ಪ, ಸವನತ್ತೂರ್, ಅರಮನೆ ಕೊಪ್ಪ, ಕಮ್ಮಾಚಿ, ಬಾಳೇಕೊಪ್ಪ, ಹೆಚ್. ಹೊನ್ನೆಕೊಪ್ಪ, ಕಟ್ಟಿನ ಹೊಳೆ, ದೊಬ್ಯಾಳು, ಮತಿಕೈ, ಬ್ರಹ್ಮನತರುವೆ, ಕೊಡುರು, ನೆಲ್ಲೂಂಡೆ, ತ್ರಿನಿವೆ, ಕೊಡಸೆ, ಆನೆಗಡ್ಡೆ, ಬ್ರಹ್ಮನವದ, ಬಸವನಬ್ಯಾನ, ಕಿನಂದೂರು, ತೊಗರೆ, ಬ್ಯಾಸೇ, ಮುಡುಗೊಪ್ಪ(ನಗರ), ಬಿಲ್ಲೋಡಿ, ಹಿಲುಕುಂಜಿ, ಕಲ್ಲುವಿಡಿ ಅಬ್ಬಿಗಳ್ಳ, ಮಳಲಿ, ಬೆಲ್ಲೂರು, ಕಿಲಂದೂರು, ಕಡಿಗ್ಗೇರೆ, ಕರಿಮನೆ, ಕಬಾಳೆ, ರ್ಯಾವೆ, ಅದಗೋಡಿ, ಕ್ಯಾರುಗುಂದ್ಧ, ಗಿಣಿಕಲ್ಲು, ಕೊಲವಾಡಿ, ನಿಡಗೋಡು, ಕಾವೇರಿ, ಸುಲಗೋಡು, ಯಡೂರು, ಕಟ್ಟೆಕೊಪ್ಪ, ಹುಮ್ಮದಗಲ್ಲು, ಗುಬ್ಬಿಗ, ಬೆಗದಳ್ಳಿ, ಹಲ್ತಿಗ, ಕೋರನಕೋಟೆ ಎಂಬ ಹಳ್ಳಿಗಳು ಬರುತ್ತದೆ.
ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಈ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಲಿದೆ.
ಕೇಂದ್ರ ಸರ್ಕಾರಕ್ಕೆ ಗಾಡ್ಗಿಲ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಲ್ ವರದಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು.
ಅದರಂತೆ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.