Saturday, April 11, 2026
Saturday, April 11, 2026

13ರಾಜ್ಯಗಳಲ್ಲಿ ಉದ್ಯೋಗ ಖಾತ್ರಿಯೋಜನೆ ಫಲಾನುಭವಿಗಳ ಸಂಖ್ಯೆ ಕುಸಿತ

Date:

ಗ್ರಾಮೀಣ ಪ್ರದೇಶಗಳಲ್ಲೂ ಉತ್ಪಾದನೆ ಮತ್ತು ಸೇವಾ ವಲಯಗಳ ಉತ್ತಮ ಕಾರ್ಯಕ್ಷಮತೆ ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶದ ಜನರ ಆದಾಯವು ಹೆಚ್ಚುತ್ತಿದೆ. ಹಾಗಾಗಿ ಸರ್ಕಾರದ ಸಹಾಯದ ಮೇಲಿನ ಅವರ ಅವಲಂಬನೆಯೂ ಕೊನೆಗೊಳ್ಳುತ್ತಿದೆ ಎನ್ನಲಾಗಿದೆ.

ಅದರಂತೆ, ಹಣಕಾಸು ಸಚಿವಾಲಯದ ವರದಿಯ ಪ್ರಕಾರ, ಉಚಿತ ಪಡಿತರವನ್ನ ತೆಗೆದುಕೊಳ್ಳುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನು ಇದಷ್ಟೇ ಅಲ್ಲದೇ MGNREGA ಅಡಿಯಲ್ಲಿ ಕೆಲಸ ಹುಡುಕುವ ಜನರ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ಕೊರೊನಾ ಅವಧಿಯಲ್ಲಿ, MGNREGA ಅಡಿಯಲ್ಲಿ ಕೆಲಸ ಹುಡುಕುವ ಜನರ ಸಂಖ್ಯೆ ಅದರ ಉತ್ತುಂಗವನ್ನ ತಲುಪಿತ್ತು. ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ 2022-23ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಆಹಾರ ಭದ್ರತಾ ಕಾಯ್ದೆಯಡಿ ನೀಡಲಾಗುವ ಉಚಿತ ಆಹಾರ ಧಾನ್ಯಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಶೇಕಡಾ 89ರಷ್ಟು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಈ ವರ್ಷ ಶೇಕಡಾ 81ಕ್ಕೆ ಇಳಿದಿದೆ.

ಕೇವಲ 84 ದಶಲಕ್ಷ ಟನ್ ಮಾತ್ರ ವಿತರಣೆ
ಸಚಿವಾಲಯದ ಪ್ರಕಾರ, ಈ ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗೆ ಉಚಿತ ಪಡಿತರ ಕಾರ್ಯಕ್ರಮದಡಿ 128 ಲಕ್ಷ ಟನ್ ಅಕ್ಕಿ ಮತ್ತು ಗೋಧಿಯನ್ನ ಹಂಚಿಕೆ ಮಾಡಲಾಗಿದೆ. ಉಚಿತ ಪಡಿತರ ಪಡೆಯುವಲ್ಲಿ ಜನರ ಕಡಿಮೆ ಆಸಕ್ತಿಯಿಂದಾಗಿ, ಕೇವಲ 84 ಲಕ್ಷ ಟನ್ʼಗಳನ್ನು ಮಾತ್ರ ವಿತರಿಸಲಾಗಿದೆ.

ಕಳೆದ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ 123 ಲಕ್ಷ ಟನ್ ಗೋಧಿ ಮತ್ತು ಅಕ್ಕಿಯನ್ನ ಹಂಚಿಕೆ ಮಾಡಲಾಗಿದ್ದು, ಈ ಪೈಕಿ 110 ಲಕ್ಷ ಟನ್ ಗೋಧಿಯನ್ನು ಯಶಸ್ವಿಯಾಗಿ ವಿತರಿಸಲಾಗಿದೆ.
ಎಫ್.ಸಿ.ಐಯಲ್ಲಿ ಒಂದೂವರೆ ಪಟ್ಟು ಹೆಚ್ಚು ಸ್ಟಾಕ್
ಎಫ್‌ಸಿಐನ ಗೋದಾಮಿನಲ್ಲಿ ಆಹಾರ ಧಾನ್ಯಗಳ ಅಗತ್ಯಕ್ಕಿಂತ 1.5 ಪಟ್ಟು ಹೆಚ್ಚು ದಾಸ್ತಾನಿದೆ ಮತ್ತು ರಾಜ್ಯಗಳು ತಮ್ಮ ಕೋಟಾದ ಆಹಾರ ಧಾನ್ಯಗಳ ಶೇಕಡಾ 20ರಷ್ಟನ್ನು ಮಾತ್ರ ತೆಗೆದುಕೊಳ್ಳುತ್ತಿವೆ.

ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ, ರಾಜ್ಯಗಳು ತಮ್ಮ ಹಂಚಿಕೆಯ ಶೇಕಡಾ 20.3 ರಷ್ಟು ಮಾತ್ರ ತೆಗೆದುಕೊಂಡವು. ಏಪ್ರಿಲ್ 2020ರಿಂದ ಸರ್ಕಾರವು 80 ಕೋಟಿ ಜನರಿಗೆ ಉಚಿತ ಪಡಿತರವನ್ನ ನೀಡುತ್ತಿದೆ. ಈ ಯೋಜನೆ ಮುಂದಿನ ಸೆಪ್ಟೆಂಬರ್ʼವರೆಗೆ ಮುಂದುವರಿಯಲಿದೆ.

ಜನರ ಸಂಖ್ಯೆ ಇಳಿಕೆ
ವರದಿಯ ಪ್ರಕಾರ, ಮೇ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಜೂನ್‌ನಲ್ಲಿ MGNREGA ಅಡಿಯಲ್ಲಿ ಕೆಲಸ ಬಯಸುವ ಜನರ ಸಂಖ್ಯೆಯೂ ಕಡಿಮೆಯಾಗಿದೆ. ಈ ಕುಸಿತವು ಕೃಷಿ ವಲಯದಲ್ಲಿ ಕಾರ್ಯನಿರ್ವಹಣೆಯ ಹೆಚ್ಚಳವನ್ನ ಪ್ರತಿಬಿಂಬಿಸುತ್ತದೆ. MGNREGA ಅಡಿಯಲ್ಲಿ, ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸ ಮಾಡುತ್ತಾರೆ. ಈ ವರ್ಷದ ಜೂನ್‌ನಲ್ಲಿ, MGNREGA ಅಡಿಯಲ್ಲಿ ಕಾರ್ಮಿಕರಿಗೆ ಪಾವತಿಸುವ ವೇತನವು ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಶೇಕಡಾ 9.2ರಷ್ಟು ಕುಸಿತವನ್ನು ದಾಖಲಿಸಿದೆ. 13 ರಾಜ್ಯಗಳಲ್ಲಿ MGNREGA ಅಡಿಯಲ್ಲಿ ಕೆಲಸ ಮಾಡುವ ಜನರ ಸಂಖ್ಯೆ ಕಡಿಮೆಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Krishnashastry ಶ್ವೇತವಸ್ತ್ರದ ಸಂತ, ಬೆಳಗೆರೆ ಕೃಷ್ಣಶಾಸ್ತ್ರಿಗಳು.

ಲೇ: ಪ್ರಸಾದ್ ಶ್ರೀವತ್ಸ.ದಾವಣಗೆರೆ. Krishnashastry ಅದು ನಾನು ಹತ್ತನೇ ತರಗತಿಯನ್ನು ಮುಗಿಸಿ, ಪಿಯುಸಿಯ...

JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ “ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ” ಟ್ರೋಫಿ ಅನಾವರಣ.

JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಶಿವಮೊಗ್ಗ ವತಿಯಿಂದ ದಿನಾಂಕ...

Hulikal Ghat ಹುಲಿಕಲ್ ಘಾಟಿಯಲ್ಲಿ ಧರೆ ಕುಸಿತ. ಕಾಮಗಾರಿಯಲ್ಲಿದ್ದ ಮೂವರು ಕಾಣೆ. ಶೋಧಕಾರ್ಯ ಪ್ರಗತಿ.

Hulikal Ghat ಹುಲಿಕಲ್ ಘಾಟಿಯಲ್ಲಿ ರಸ್ತೆ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ.ಕಾಮಗಾರಿ...