Monday, December 15, 2025
Monday, December 15, 2025

ಮಾನವನ ದುರಾಸೆಯಿಂದ ಪ್ರಕೃತಿಯ ನಾಶ-ಜಿ.ಯು. ಶಂಕರ್

Date:

ವಿಶ್ವ ಹಾವುಗಳ ದಿನಾಚರಣೆ ಪ್ರಯುಕ್ತ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗ ಹಾಗೂ ಅರಣ್ಯ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ವಿಶ್ವ ಹಾವುಗಳ ದಿನಾಚರಣೆ ಪ್ರಯುಕ್ತ ಹಾವುಗಳು ಮತ್ತು ಪರಿಸರ ಕುರಿತ ವಿಚಾರ ಸಂಕಿರಣವನ್ನು ಶ್ರೀ ಜಿ ಯು ಶಂಕರ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಉದ್ಘಾಟಿಸಿ ಮಾನವನ ದುರಾಸೆಯಿಂದ ಪ್ರಕೃತಿಯ ನಾಶ ದಿನೇ ದಿನೇ ಹೆಚ್ಚಾಗುತ್ತಿದೆ ಹಾಗೂ ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕೆಂದು ತಿಳಿಸಿದರು.

ಸಾರ್ವಜನಿಕರ ಸಹಕಾರ ಇಲ್ಲದೆ ಹೋದರೆ ಅರಣ್ಯ ಉಳಿಸುವುದು ಅರಣ್ಯ ಇಲಾಖೆಗೆ ಬಹಳ ಕಷ್ಟವಾಗುವುದು. ಸರ್ಕಾರ ಸುಸ್ಥಿರ ಅಭಿವೃದ್ಧಿ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಡಾ. ನಾಗರಾಜ ಪರಿಸರ ಕಳೆದ 30 ವರ್ಷಗಳಲ್ಲಿ ಶೇಕಡ 60 ಜೀವ ವೈವಿಧ್ಯತೆ ನಾಶವಾಗಿರುವುದು ದಾಖಲಾಗಿದೆ, ಇದು ಬಹಳ ಆತಂಕಕಾರಿ ವಿಷಯ.

ಹಾವುಗಳು ಪರಿಸರ ಸಮತೋಲನದಲ್ಲಿ ಬಹಳ ಪ್ರಮುಖ ಪಾತ್ರವನ್ನು ನಿರ್ವಹಿಸುವುದರೊಂದಿಗೆ ರೈತನ ಮಿತ್ರನಾಗಿ ಬೆಳೆಗಳನ್ನು ನಾಶ ಮಾಡುವ ಕೀಟಗಳನ್ನು ಮತ್ತು ಇಲಿಗಳನ್ನು ನಿಯಂತ್ರಿಸಿ ಸಹಕರಿಸುತ್ತಿವೆ. ಭಾರತದಲ್ಲಿ ನಿರ್ಲಕ್ಷದಿಂದ ಅತಿ ಹೆಚ್ಚು ಹಾವಿನ ಕಡಿತಕ್ಕೆ ಒಳಗಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಅನೇಕ ಕಾರಣಗಳಿಂದ ಹಾವುಗಳನ್ನು ಕೊಲ್ಲುತ್ತಿದ್ದಾರೆ.

ಪರಿಸರದಲ್ಲಿ ಪ್ರತಿಯೊಂದು ಜೀವಿಯು ತುಂಬಾ ಅತ್ಯಮೂಲ್ಯ ಈ ನಿಟ್ಟಿನಲ್ಲಿ ಜೀವವೈವಿಧ್ಯತೆಯ ಪ್ರಾಮುಖ್ಯತೆ ಕುರಿತು ಹೆಚ್ಚು ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕಿದೆ ಜೀವವೈವಿಧ್ಯದ ನಾಶ ಮಾನವನ ಸರ್ವನಾಶಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಎಚ್ಚರಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ಜಯಂತ್ ಬಾಬು ಉರಗಗಳ ಕುರಿತು ಡಾ.ನಾಗರಾಜ ಪರಿಸರ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿದ್ದು ಈಗಾಗಲೇ 1700 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸಂರಕ್ಷಿಸಿರುವ ಇವರು ಶಿವಮೊಗ್ಗದ ಸುತ್ತಮುತ್ತ ಸಿಗುವ ವಿವಿಧ ಬಗೆಯ ಹಾವುಗಳ ಪರಿಚಯವನ್ನು ಚಿತ್ರಸಹಿತ ವಿವರಿಸಿ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿದರು.

ಹಾವುಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿ ವಿಷಕಾರಿ ಹಾವು ಮತ್ತು ವಿಷಕಾರಿ ಅಲ್ಲದ ಹಾವುಗಳನ್ನು ಗುರುತಿಸುವುದು ಮತ್ತು ಹಾವು ಕಚ್ಚಿದ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನೆಲ್ಲ ಸಂಪೂರ್ಣವಾಗಿ ವಿವರಿಸಿ ಯಾವುದೇ ಕಾರಣಕ್ಕೂ ಹಾವುಗಳನ್ನು ಕೊಲ್ಲಬೇಡಿ ತಕ್ಷಣ ಹತ್ತಿರದ ಉರಗ ತಜ್ಞರಿಗೆ ತಿಳಿಸಿ ಅವುಗಳನ್ನು ಉಳಿಸಿ ಎಂದು ತಿಳಿ ಹೇಳಿದರು.

ಎರಡು ವರ್ಷದಲ್ಲಿ 33 ಬಗೆಯ ಹಾವುಗಳನ್ನು ಗುರುತಿಸಲಾಗಿದ್ದು ಇನ್ನೂ ಸಂಶೋಧನಾ ಅವಧಿ ಮುಗಿಯುವವರೆಗೆ ಎಷ್ಟು ಸಿಗುವವೋ ಕಾದು ನೋಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ರಾಜೇಶ್ವರಿ. ಎನ್. ಮಾತನಾಡಿ ಪರಿಸರ ವಿಜ್ಞಾನ ವಿಭಾಗದಿಂದ ಇಂತಹ ಉತ್ತಮ ಕಾರ್ಯಕ್ರಮಗಳು ಆಗುತ್ತಿರುವುದು ಬಹಳ ಸಂತೋಷ ವಿದ್ಯಾರ್ಥಿಗಳು ಇಲ್ಲಿ ಕಲಿತ ಎಲ್ಲ ವಿಷಯಗಳನ್ನು ತಿಳಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಆಗ ಕಾರ್ಯಕ್ರಮ ಮಾಡಿದ್ದಕ್ಕೂ ಸಾರ್ಥಕತೆ ಬರುವುದು, ನಮ್ಮ ಪೂರ್ವಿಕರು ಪರಿಸರದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು, ಹಾಗಾಗಿ ನಾಗಬನ, ಅಶ್ವತ ಕಟ್ಟೆ ಹೀಗೆ ಜೀವ ವೈವಿಧ್ಯತೆ ಉಳಿವಿಗಾಗಿ ಅನೇಕ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಪುರುಷೋತ್ತಮ್, ಡಾ. ಮಂಜುನಾಥ್, ಪ್ರೇಮ ಇನ್ನಿತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕೀರ್ತನ ಪ್ರಾರ್ಥಿಸಿ ತೇಜಸ್ವಿನಿ ಸ್ವಾಗತಿಸಿ, ಅಜಿತ್ ವಂದಿಸಿ, ಅಂಜಲಿ ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...