Sunday, October 6, 2024
Sunday, October 6, 2024

ಅಸಮಾನತೆಯ ಕಾಲದಲ್ಲಿ ಎಲ್ಲರಂತೆಹಡಪದಪ್ಪಣ್ಣ ಬದುಕಿ ತೋರಿಸಿದರು

Date:

ಹನ್ನೆರಡನೇ ಶತಮಾನದಲ್ಲಿ ಮೇಲು-ಕೀಳೆಂದು ಭುಗಿಲೆದ್ದಿದ್ದ ಅಸಮಾನತೆಯ ಸಮಾಜದಲ್ಲಿ ಹಿಂದುಳಿದ ಜಾತಿಯಲ್ಲಿ ಹುಟ್ಟಿದ್ದ ಹಡಪದ ಅಪ್ಪಣ್ಣ ತಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಬದುಕಿ ತೋರಿದ ಹಾಗೂ ವಿಶೇಷ ಕತೃತ್ವ ಶಕ್ತಿ ಹೊಂದಿದ್ದ ಮಹಾನ್ ಪುರುಷ ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರ ಬಲಗೈ ಬಂಟನೆಂದೇ ಪ್ರಖ್ಯಾತರಾಗಿ, ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯಲ್ಲಿ ಪಾಲ್ಗೊಂಡವರು. ಹಡಪದರ ಮುಖವನ್ನು ಬೆಳಿಗ್ಗೆ ನೋಡಿದರೆ ಅಪಶಕುನ ಎಂಬ ಅಂದಿನ ಮನೋಭಾವನೆಯನ್ನು ಸಮಾಜದಿಂದ ಕಿತ್ತೊಗೆಯಲು ಬಸವಣ್ಣನವರು ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿಸಿಕೊಂಡಿದ್ದರು. ಅಪ್ಪಣ್ಣ ವಿಶ್ವದ ಪ್ರಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಯ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು.

ತಮ್ಮ ನಡೆ, ನುಡಿ ವಚನ ಸಾಹಿತ್ಯದ ಮೂಲಕ ಇಡೀ ಸಮಾಜ ಒಂದು ಎಂದು ಪ್ರತಿಪಾದಿಸಿದ ಇಂತಹ ಮಹಾನ್ ವ್ಯಕ್ತಿಯನ್ನು ನಾವೆಂದೂ ಮರೆಯುವ ಹಾಗಿಲ್ಲ ಎಂದರು.

ಜಾತಿವಾದವನ್ನು ದೂರ ಮಾಡಿ ನಾವೆಲ್ಲರೂ ಒಂದೇ ಎಂದು ಅಂದು ಬಸವಾದಿ ಶರಣರು ಒಟ್ಟಾಗಿ ಕೆಲಸ ಮಾಡಿದ್ದರು. ಆ ಕೆಲಸ ಅಷ್ಟು ಸುಲಭದ್ದಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಂತಹ ಸ್ಥಿತಿಯಲ್ಲಿ ನಾವೆಲ್ಲ ಇಂತಹ ಮಹಾನ್ ಪುರುಷರ ಆಚಾರ, ವಿಚಾರ, ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಾಗಬೇಕು ಎಂದು ಕಿವಿಮಾತು ಹೇಳಿದ ಅವರು ಹಡಪದ ಸಮಾಜದೊಂದಿಗೆ ತಾವು ಎಂದಿಗೂ ಇದ್ದು ಶಿಕ್ಷಣ ಮತ್ತಿತರೆ ಸೌಲಭ್ಯಗಳಿಗೆ ಸಹಕರಿಸುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಶಾಸಕಾದ ಆಯನೂರು ಮಂಜುನಾಥ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸಮಾನತೆಗಾಗಿ ಸಣ್ಣಪುಟ್ಟ ಸಮಾಜಗಳು ಒಟ್ಟಿಗೆ ಸೇರಿ ಬಸಣ್ಣನವರ ನೇತೃತ್ವದಲ್ಲಿ ಬಹಳ ದೊಡ್ಡ ಆಂದೋಲನವನ್ನು ಸೃಷ್ಟಿಸಿದ್ದ ಪ್ರಯತ್ನ ಇಂದಿಗೂ ಸಂಪೂರ್ಣ ಫಲ ಕೊಟ್ಟಿಲ್ಲ. ಇಂದಿಗೂ ತಾರತಮ್ಯ, ಮೇಲು-ಕೀಳು, ಕಂದಕಗಳು ಇದ್ದೇ ಇವೆ. ಅಂದು ಬಸವಣ್ಣ ಮಾಡಿದ್ದನ್ನು ಇಂದು ಸಾಧು ಸಂತರೂ ಮಾಡುವ ಧೈರ್ಯ ಮಾಡುತ್ತಿಲ್ಲ. ಬದಲಾಗಿ ಜಾತಿ ಒಳಗೆ ಜಾತಿ ಮಾಡುತ್ತಾ ಜಾತಿ ಉಪ ಜಾತಿಗಳಾಗಿ ಮಾರ್ಪಡುತ್ತಿರುವುದು ದುರಂತ.

ಹಡಪದ ಸಮಾಜ ನಮ್ಮ ಸಮಾಜದ ಅವಿಭಾಜ್ಯ ಅಂಗ. ನಾವೆಲ್ಲ ಬಸವಣ್ಣನವರ ಸಂತತಿ. ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಸಂಗಾತಿ, ಅವರ ನೆರಳಿನಂತೆ ಓಡಾಡಿದವರು ಎಂದ ಅವರು ಇಂದು ಹಡಪದ ವೃತ್ತಿ ಕಡಿಮೆಯಾಗಿದೆ. ಮಕ್ಕಳು ವಿದ್ಯಾಭ್ಯಾಸ ಹೊಂದಿ ಮುಂದೆ ಬರುವುತ್ತಿರುವು ಸ್ವಾಗತಾರ್ಹ ವಿಷಯ. ಆರ್ಥಿಕವಾಗಿ ಹಿಂದುಳಿದ ಈ ಸಮಾಜಕ್ಕೆ ಸರ್ಕಾರ ಹೆಚ್ಚಿನ ಸವಲತ್ತು ನೀಡಲೆಂದು ಆಶಿಸಿದರು.

ಬಸವ ಕೇಂದ್ರದ ಶ್ರೀ ಮರುಳಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಹಡಪದ ಅಪಶಕುನ ಅಲ್ಲ. ಸಮಾಜವನ್ನು ಸ್ಪುರದ್ರೂಪಗೊಳಿಸುವ ಕಾಯಕಯೋಗಿ. ಹಡಪದ ಅಪಶಕುನವಲ್ಲವೆಂದು ಸಮಾಜಕ್ಕೆ ತೋರಿಸಲು ಬಸವಣ್ಣನವರು ಅಪ್ಪಣ್ಣನನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿಸಿಕೊಂಡು ಅಪ್ಪಣನನ್ನೇ ನೋಡುತ್ತಾ ವಿಶ್ವಗುರು ಆದರು. ಅತ್ಯಂತ ವಿವೇಕಶಾಲಿಯಾದ ಅಪ್ಪಣ್ಣ ಬಸವಣ್ಣನವರ ಬದುಕಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು. ಪಾರಮಾರ್ಥಿಕ ಔನ್ನತ್ಯವನ್ನೂ ಸಾಧಿಸಿದರು. 250 ಕ್ಕೂ ಹೆಚ್ಚು ವಚನ ರಚಿಸಿದರು. ಹಾಗೂ ಬಸವಣ್ಣನವರ ಅಂತಿಮ ಕ್ಷಣಗಳನ್ನು ನೋಡಿದ ಪುಣ್ಯವಂತ ಅವರು ಎಂದು ನುಡಿದರು.

ಶಿವಮೊಗ್ಗ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಮಾತನಾಡಿ, ಶೋಷಣೆಗೆ ಒಳಗಾದ ಸಮಾಜದಲ್ಲಿ ನಮ್ಮ ಸಮಾಜ ಕೂಡ ಒಂದಾಗಿದ್ದು, ಜಾತಿ ಪದ್ದತಿ ತೊಡೆದು ಹಾಕುವುದು ಕಷ್ಟ. ಇಂತಹ ಸಂದರ್ಭದಲ್ಲಿ ವಿದ್ಯೆ, ಉತ್ತಮ ದುಡಿಮೆ, ಅಧಿಕಾರ ಮಾತ್ರ ಸಮಾನತೆ ತರಲು ಸಾಧ್ಯ. ಆದ ಕಾರಣ ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.

ಪ್ರಿಯದರ್ಶಿನಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ವೀರೇಶ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹಡಪದ ಅಪ್ಪಣ್ಣ ಅವರ ಬಾಲ್ಯ, ವಿದ್ಯಾಭ್ಯಾಸ, ಬಸವಣ್ಣನವರೊಂದಿಗಿನ ಜೀವನ, ಅವರು ರಚಿಸಿದ ವಚನಗಳ ಕುರಿತು ವಿವರಣೆ ನೀಡಿದರು.

ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ಉಪ ಆಯುಕ್ತ ಶಂಕರ ಗನ್ನಿ, ಸದಸ್ಯರಾದ ವಿಶ್ವಾಸ್, ಜ್ಞಾನೇಶ್ವರ್ ಶಿವಮೊಗ್ಗ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಹೆಚ್.ಎಸ್ ವೀರಭದ್ರಯ್ಯ, ಇತರೆ ಪದಾದಿಕಾರಿಗಳು, ಸಮಾಜದ ಮುಖಂಡರು, ಎಸಿ ಎಸ್.ಬಿ.ದೊಡ್ಡೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D Satya Prakash ಯಾವುದೇ ಸಿನಿಮಾ ಭಾವನೆಗಳ ಮೇಲಿ‌ನ ಆಟವಾಗಬಾರದು- ಡಿ.ಸತ್ಯಪ್ರಕಾಶ್

D. Satya Prakash ಸಿನಿಮಾ ಎನ್ನುವುದು ಭಾವನಾತ್ಮಕ ಜೊತೆಗೆ ವಿಚಿತ್ರವೂ ಹೌದುಖ್ಯಾತ...

Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್

Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ...