Saturday, October 5, 2024
Saturday, October 5, 2024

ರೈಲ್ವೆ ಪ್ರಯಾಣದಲ್ಲಿ ಆಹಾರ ಪದಾರ್ಥಗಳ ಹಣಕ್ಕೆ ಡಿಜಿಟಲ್ ವರ್ಗಾವಣೆ ಸೌಲಭ್ಯ

Date:

ರೈಲಿನಲ್ಲಿ ಪ್ರಯಾಣಿಸುವಾಗ ಆಹಾರ ಪದಾರ್ಥಗಳ ಮೇಲೆ ಇರುವ ಬೆಲೆಗಿಂತ ಹೆಚ್ಚುವರಿ ಬೆಲೆಯನ್ನು ಮಾರಾಟಗಾರರು ಕೇಳುತ್ತಾರೆ. ಇದನ್ನು ಎಲ್ಲಾ ಪ್ರಯಾಣಿಕರ ಅನುಭವಕ್ಕೆ ಬಂದಿರುತ್ತದೆ.

ಇಂತಹ ಘಟನೆಗಳ ಬಗ್ಗೆ ಹಲವು ರೈಲು ಪ್ರಯಾಣಿಕರು ಕೂಡ ಇಲಾಖೆಗೆ ದೂರು ನೀಡಿದ್ದರು. ಕೊನೆಗೂ ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೆಚ್ಚುವರಿ ಹಣ ಪಡೆಯುವುದಕ್ಕೆ ತಡೆ ಹಾಕಲಾಗಿದೆ.ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ಈ ಮಾರಾಟಗಾರರನ್ನು ನಿಯಂತ್ರಿಸಲು ಸಿದ್ಧತೆಗಳನ್ನು ಮಾಡಿದೆ.

IRCTC ಮೆನು ಕಾರ್ಡ್‌ನಲ್ಲಿಯೇ QR ಕೋಡ್ ಅನ್ನು ಮುದ್ರಿಸಿದೆ. ಈ ಕ್ರಮದಿಂದಾಗಿ ಆಹಾರ ಪದಾರ್ಥ ಮಾರಾಟಗಾರರು ಹೆಚ್ಚಿನ ಶುಲ್ಕ ವಿಧಿಸಲು ಆಗುವುದಿಲ್ಲ.

ಕ್ರಮೇಣ, ಈ ವ್ಯವಸ್ಥೆಯನ್ನು IRCTC ಅಡುಗೆ ಸೌಲಭ್ಯವನ್ನು ಹೊಂದಿರುವ ಎಲ್ಲಾ ರೈಲುಗಳಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ. ರಾಜಧಾನಿ, ಶತಾಬ್ದಿ, ತೇಜಸ್‌ನಂತಹ ರೈಲುಗಳಲ್ಲಿ ಟಿಕೆಟ್ ಬುಕ್ಕಿಂಕ್ ಜೊತೆಗೆಯೇ ಆಹಾರದ ಆಯ್ಕೆ ಇದೆ. ಆದರೆ ಅನೇಕ ರೈಲುಗಳಲ್ಲಿ ಟಿಕೆಟ್ ಜೊತೆಗೆ ಆಹಾರವನ್ನು ಕಾಯ್ದಿರಿಸಲು ಅವಕಾಶವಿಲ್ಲ. ಆದರೆ, ಅಂತಹ ರೈಲುಗಳಲ್ಲಿ ಊಟದ ಸೇವೆ ನೀಡುವ ಅಡುಗೆ ಬೋಗಿಗಳನ್ನು( ಪ್ಯಾಂಟ್ರಿ ಕಾರ್) ಹೊಂದಿರುತ್ತವೆ.

ಅಡುಗೆ ಬೋಗಿ ಹೊಂದಿರದ ಮೂರನೇ ವಿಧದ ರೈಲುಗಳಿವೆ. ಇವುಗಳಲ್ಲಿ IRCTC ಮಾರಾಟಗಾರರು ಮೂಲ ಅಡುಗೆಮನೆಯಿಂದ ಆಹಾರವನ್ನು ಮಾರಾಟ ಮಾಡುತ್ತಾರೆ. ಈ ಮಾರಾಟಗಾರರು ಕೆಲವೊಮ್ಮೆ ಪ್ರಯಾಣಿಕರಿಂದ ಹೆಚ್ಚು ಶುಲ್ಕ ಪಡೆಯುತ್ತಾರೆ. ಪ್ರಯಾಣಿಕರು ಹೆಚ್ಚಾಗಿ ನಗದು ಮೂಲಕ ಪಾವತಿಸುತ್ತಾರೆ. ಇದು ಅಧಿಕ ಶುಲ್ಕ ವಿಧಿಸುವ ಸಾಧ್ಯತೆಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...