ಸೋನ್ ಪ್ರಯಾಗದಿಂದ ಮುಂದೆ ಭಾರಿ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ನಿಲ್ಲಿಸಲಾಗಿದೆ. ಅಹಿತಕರ ಘಟನೆಗಳ ಭೀತಿಯ ನಡುವೆ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಏತನ್ಮಧ್ಯೆ, ಅಮರನಾಥದ ಬಳಿಯ ನೂರಾರು ಡೇರೆಗಳನ್ನು ಹಠಾತ್ ಪ್ರವಾಹವು ಕೊಚ್ಚಿಕೊಂಡು ಹೋದ ನಂತರ ಹದಿನಾರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹಿಮಾಲಯದ ಪರ್ವತದ ಗುಹೆಯಲ್ಲಿ ನೆಲೆಗೊಂಡಿರುವ ದೂರದ ಅಮರನಾಥ ದೇವಾಲಯದ ಹತ್ತಿರ ಸುಮಾರು 10,000 ಜನರು ಬೀಡುಬಿಟ್ಟಿದ್ದರು. ಆಗ ಇದ್ದಕ್ಕಿದ್ದಂತೆ ಮೇಘಸ್ಫೋಟವು ಪ್ರಳಯಕ್ಕೆ ಕಾರಣವಾಯಿತು.
ಹೆಲಿಕಾಫ್ಟರ್ ವಿಮಾನಗಳು ಸಾವನ್ನಪ್ಪಿದವರನ್ನು ಸ್ಥಳಾಂತರಿಸೋ ಕಾರ್ಯದಲ್ಲಿ, ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಅಜ್ಞಾತ ಸಂಖ್ಯೆಯ ಭಯಭೀತರಾದ ಮತ್ತು ಗಾಯಗೊಂಡ ಯಾತ್ರಾರ್ಥಿಗಳು ದೇವಾಲಯದ ಉತ್ತರಕ್ಕಿರುವ ಬಾಲ್ಟಾಲ್ ಬೇಸ್ ಕ್ಯಾಂಪ್ನಿಂದ ಹೊರಟಿದ್ದರು.ನಾವು ಇಲ್ಲಿಯವರೆಗೆ 16 ಶವಗಳನ್ನು ಕಂಡುಕೊಂಡಿದ್ದೇವೆ. ಕನಿಷ್ಠ 40 ಮಂದಿ ಕಾಣೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ಸ್ಪಂದನಾ ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.