ರಾಜ್ಯಸಭೆಗೆ ನಾಮನಿರ್ದೇಶನ ಆಗುತ್ತೇನೆ ಎಂಬ ಕಲ್ಪನೆ ಕೂಡ ಇಲ್ಲ.
ನಾನು ಅದರ ಹಿಂದೆ ಹೋಗುವವನು ಅಲ್ಲ. ನನಗಾಗಿ ನಾನು ಇದನ್ನ ಬೇಡುವವನು ಅಲ್ಲ, ಕೇಳುವವನು ಅಲ್ಲ. ಅವರು ಕೊಟ್ಟಾಗ ನನಗೆ ಏನು ಅನಿಸಿತ್ತು ಅಂದರೆ, ದೇಶವ್ಯಾಪಿ ತಮ್ಮ ಸೇವೆಯನ್ನ ವಿಸ್ತರಿಸಲು ಒಳ್ಳೆಯ ರಂಗಸ್ಥಳವಾಗಿದೆ ಎಂದು ರಾಜ್ಯಸಭೆಗೆ ನಾಮನಿರ್ದೇಶನದ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ.
ನೆನ್ನೆ ರಾತ್ರಿವರೆಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಆದಾದ ಮೇಲೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ನಮ್ಮ ಜನತೆ ಬಹಳ ಸಂತೋಷ ಪಟ್ಟಿದ್ದಾರೆ ಎಂದು ಹೇಳಿದರು.
ನನಗೆ ಯಾವುದೇ ರಾಜಕೀಯ ಆಸಕ್ತಿ ಇಲ್ಲ. ನನಗೆ ಮಂಜುನಾಥ ಸ್ವಾಮಿಯ, ಹೆಗ್ಗೆಡೆಯ ಪೀಠಕ್ಕಿಂತ ದೊಡ್ಡದ್ದು ಯಾವುದು ಇಲ್ಲ.
ನಮ್ಮ ಸೇವಾ ಕ್ಷೇತ್ರಕ್ಕೆ ಅನುಕೂಲವಾಗುವ ಕಾರ್ಯಕ್ಷೇತ್ರ ಮೋದಿ ಅವರಿಗೆ ಗಮನ ಸೆಳೆದಿದೆ ಎಂಬುದು ತುಂಬ ಸಂತೋಷ. ನಮ್ಮ ಒಳ್ಳೆಯ ಕೆಲಸ ದೇಶದಾದ್ಯಂತ ವಿಸ್ತರಿಸಬೇಕು ಎಂದರು