Monday, December 15, 2025
Monday, December 15, 2025

ಶಿವಮೊಗ್ಗದಿಂದ ಬೆಂಗಳೂರು ರೈಲ್ವೆ ಸಂಚಾರ ಮಾಹಿತಿ

Date:

ಕಾಮಗಾರಿ ಕಾರಣದಿಂದಾಗಿ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ರೈಲುಗಳ ಸಂಚಾರ ಕಡಿತಗೊಂಡಿತ್ತು. ಇದೀಗ ಇದೇ ಜುಲೈ 9 ಹಾಗೂ 10 ರಂದು ರೈಲುಗಳು ಈ ಎಲ್ಲಾ ಪ್ರದೇಶಗಳಲ್ಲಿ ಮತ್ತೆ ಓಡಾಟ ಆರಂಭಿಸಲಿದೆ. ಮತ್ತೆ ಓಡಾಡಲಿರುವ ರೈಲುಗಳ ವಿವರ ಇಲ್ಲಿದೆ.

ಮೈಸೂರು ವಿಭಾಗದ ಬಾಣಾವರ ರೈಲು ಮಾರ್ಗದಲ್ಲಿ ನಡೆಯುತ್ತಿದ್ದ ಇಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆ ಭಾಗಶಃ ಹಾಗೂ ಪೂರ್ಣವಾಗಿ ಸ್ಥಗಿತಗೊಂಡಿದ್ದ ರೈಲುಗಳ ಪುನರ್ ಸಂಚಾರವನ್ನು ಆರಂಭಿಸುವುದಾಗಿ ನೈಋತ್ಯ ರೈಲ್ವೇ ವಲಯವು ತಿಳಿಸಿದೆ.

ಈ ಮಾರ್ಗದಲ್ಲಿ ರೈಲುಗಳ ಓಡಾಟ ಆರಂಭವಾಗುವುದರ ಜೊತೆಗೆ ಶಿವಮೊಗ್ಗ ನಗರದಿಂದ ಓಡಾಡುತ್ತಿದ್ದ ರೈಲುಗಳು ಮತ್ತೆ ಸಂಚಾರ ಆರಂಭಿಸಲಿದೆ.

ಹೀಗಾಗಿ ಪ್ರಯಾಣಿಕರು ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು ನಡುವೆ ಓಡಾಡುತ್ತಿದ್ದ ರೈಲುಗಳಲ್ಲಿ ಸಂಚಾರ ಮಾಡಬಹುದಾಗಿದೆ.

ತುಮಕೂರು- ಶಿವಮೊಗ್ಗ ದಿನಂಪ್ರತಿ ಓಡಾಡುತ್ತಿದ್ದ ಎಕ್ಸ್ ಪ್ರೆಸ್ ರೈಲು , ಬೆಂಗಳೂರು- ಶಿವಮೊಗ್ಗ ನಡುವೆ ಓಡಾಡುತ್ತಿದ್ದ ಜನ್ಮ ಶತಾಬ್ದಿ ರೈಲು ಓಡಾಟ ನಡೆಸಲಿದೆ.

ಇದೇ ಜುಲೈ 10 ರಂದು ಈ ಪ್ರದೇಶಗಳಲ್ಲಿ ರೈಲು ಸಂಚಾರ ಮರು ಓಡಾಟ ಆರಂಭಿಸಲಿದೆ. ಶಿವಮೊಗ್ಗ ನಗರದಿಂದ ತುಮಕೂರು ನಡುವೆ ಸಂಚರಿಸುತ್ತಿದ್ದ ರೈಲು, ಅರಸೀಕೆರೆ – SSS ಹುಬ್ಬಳ್ಳಿ ಎಕ್ಸ್ ಪ್ರೆಸ್, ಶಿವಮೊಗ್ಗ ನಗರದಿಂದ ಬೆಂಗಳೂರು ಜನ್ಮ ಶತಾಬ್ದಿ ಎಕ್ಸ್ ಪ್ರೆಸ್ ಓಡಾಟ ನಡೆಸಲಿದೆ.

ಇದೇ ಜುಲೈ 9 ರಂದು ಹರಿಹರದಿಂದ ದಾವಣಗೆರೆ, ಶಿವಮೊಗ್ಗ ನಗರದಿಂದ ಬೆಂಗಳೂರು ನಡುವೆ ಸಂಚರಿಸುವ ಜನ್ಮ ಶತಾಬ್ದಿ ಎಕ್ಸ್ ಪ್ರೆಸ್ ರೈಲು , ಹುಬ್ಬಳ್ಳಿ- ಅರಸೀಕೆರೆ ಎಕ್ಸ್ ಪ್ರೆಸ್ ಈ ಎಲ್ಲಾ ರೈಲುಗಳು ಹಿಂದೆ ಯಾವ ಸಮಯಕ್ಕೆ ಓಡಾಟ ನಡೆಸುತ್ತಿದ್ದವೋ ಅದೇ ಸಮಯಕ್ಕೆ ಓಡಾಟ ನಡೆಸಲಿರುವುದಾಗಿ ರೈಲ್ವೇ ಇಲಾಖೆಯು ತಿಳಿಸಿದೆ.

ರೈಲ್ವೇ ಸಂಬಂಧಿತ ಯಾವುದೇ ದೂರು, ಸಲಹೆ, ಮಾಹಿತಿ ಹಾಗೂ ಇನ್ನಿತರ ವಿಚಾರಣೆಗಳಿಗಾಗಿ ಸಹಾಯವಾಣಿ ಸಂಖ್ಯೆ 139 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...