ರಾಜ್ಯ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ನಿಗಮ- ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರ ಪಟ್ಟಿಯೂ ಅಂತಿಮಗೊಂಡಿದೆ.
ಸಂಪುಟಕ್ಕೆ ನಾಲ್ವರ ಸೇರ್ಪಡೆಗೆ ವರಿಷ್ಠರು ಬಹುತೇಕ ಒಪ್ಪಿದ್ದಾರೆ.ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ದೊರೆತಿದೆ.
ಜಾತಿ ಹಾಗೂ ಪ್ರದೇಶವಾರು ಸಮೀಕರಣಕ್ಕಾಗಿ ಈ ಆಯ್ಕೆಗೆ ವರಿಷ್ಠರು ಬಹುತೇಕ ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಜೊತೆಗೆ ನಿಗಮ ಮಂಡಳಿ ನೇಮಕಕ್ಕೂ ಒಪ್ಪಿಗೆ ದೊರೆತಿದೆ. ಸದ್ಯದಲ್ಲೇ ಪಟ್ಟಿ ಬಿಡುಗಡೆಯಾಗಲಿದೆ.