Saturday, March 28, 2026
Saturday, March 28, 2026

ಸಾಲ ಸ್ವೀಕಾರ ನಿರ್ವಹಣೆ ಮತ್ತು ಮರುಪಾವತಿ ಮುಖ್ಯಅಂಶಗಳು

Date:

ಸಾಲ ಪಡೆಯುವುದು, ನಿರ್ವಹಣೆ ಸಾಲ ಮರುಪಾವತಿ ಜವಾಬ್ದಾರಿ ಜೀವನ ವ್ಯವಸ್ಥೆಯ ಮುಖ್ಯ ಅಂಗ ಕಟ್ಟೇ ಸುದೀಂದ್ರ ಆಚಾರ್,
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ Loan Management in Business and Ratings ಎಂಬ ವಿಷಯವಾಗಿ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಉದ್ಘಾಟನೆಯನ್ನು ಪ್ರಖ್ಯಾತ ಅನುಭವಿ ಎಂ.ಎಸ್.ಎ.ಇ ಮತ್ತು ವೈಯಕ್ತಿಕ ಹುಡಿಕೆದಾರರ ಸಲಹೆಗಾರಾದ ಶ್ರೀಯುತ ಕಟ್ಟೆ ಸುಧೀಂದ್ರಆಚಾರ್ರವರು ನೆರವೇರಿಸಿ ಮಾತನಾಡುತ್ತಾ ಉದ್ದಿಮೆದಾರರು ಸಾಲ ಪಡೆಯುವ ಬಗ್ಗೆ ಸಾಲ ಮರುಪಾವತಿ ಮತ್ತು ಸಿಬಿಲ್ ಸ್ಕೋರ್ ನಿರ್ವಹಣೆ ಬಗ್ಗೆ ಸುಮಾರು ಎರಡು ಗಂಟೆಗಳ ಸುಧೀರ್ಘ ವಿಶೇಷ ಉಪನ್ಯಾಸ ನೀಡಿ, ವ್ಯಾಪಾರೋದ್ಯಮದಲ್ಲಿ ಆರೋಗ್ಯಕರ ಸಾಲ ನಿರ್ವಹಣೆ, ಸಿಬಿಲ್ ಮೌಲ್ಯಾಂಖಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಗುಣಾತ್ಮಕ ಸಾಲ ಪಡೆದು ಸೌಲಭ್ಯವನ್ನು ಸಕಾಲದಲ್ಲಿ ಪಾವತಿಸಿ ಪ್ರಮಾಣಿಕತೆ ಹೊಂದಿದ್ದಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು.

ಉದ್ದಿಮೆಗಳು ಹಾಗೂ ಸಾಲಗಳ ಸಂಯೋಜನೆ ದೇಶದ ಅಭಿವೃದ್ದಿಗೆ ಪೂರಕವಾಗುತ್ತದೆ. ಸಣ್ಣ ಉದ್ದಿಮೆಗಳು ಸಾಲ ಪಡೆದು ಆರ್ಥಿಕ ಅಭಿವೃದ್ದಿಯ ಜೊತೆಗೆ ಬಂಡವಾಳ ಹೊಂದಿ ಉತ್ಪಾದನೆ ಗುರಿ ಮುಟ್ಟಿದಲ್ಲಿ ದೇಶದ ರಕ್ಷಣೆಯ ಸಿಪಾಯಿಗಳಿದ್ದಂತೆ ಎಂದು ತಿಳಿಸುತ್ತಾ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎನ್.ಗೋಪಿನಾಥ್ರವರು ವಹಿಸಿ ಮಾತನಾಡುತ್ತಾ ಉದ್ಯಮಗಳು ಮತ್ತು ಸಾಲ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಬ್ಯಾಂಕ್ ರಾಷ್ಟಿಕರಣದ ಮೊದಲು ಸಾಲ ಪಡೆಯುವುದು ಕೆಲವೇ ವರ್ಗದವರ ಸೊತ್ತಾಗಿತ್ತು. ಅನಂತರದಲ್ಲಿ ಎಲ್ಲಾ ವರ್ಗದವರಿಗೂ ಸಾಲ ಪಡೆಯುವ ಯೋಜನೆ, ರಿಯಾಯಿತಿ ಸೌಲಭ್ಯಗಳು ಪ್ರಾರಂಭವಾದವು. ಉದ್ದಿಮೆದಾರರಿಗೆ ಈ ಬಗ್ಗೆ ಮಾಹಿತಿಯ ಅವಶ್ಯಕತೆಯನ್ನು ಮನಗಂಡು ಇಂತಹ ಕಾರ್ಯಕ್ರಮಗಳು ವಾಣಿಜ್ಯೋದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ತಮ್ಮ ತಮ್ಮ ಉದ್ದಿಮೆಯ ಅವಶ್ಯಕತೆಗಳಿಗೆ ಸಾಲವನ್ನು ಪಡೆಯುವುದು, ಪಡೆದ ನಂತರದಲ್ಲಿ ಬರುವ ತೊಡಕುಗಳನ್ನು ಹೇಗೆ ನಿಭಾಯಿಸಿಕೊಂಡು ನಿರ್ವಹಣೆ ಮಾಡಬಹುದು ಎಂಬ ಉಪಯುಕ್ತ್ತ ಮಾಹಿತಿಯಾಗಿದೆ ಪತ್ರಿಯೊಬ್ಬರೂ ಎಚ್ಚರಿಕೆಯಿಂದ ನಿರ್ವಹಿಸಿದಲ್ಲಿ ಬ್ಯಾಂಕ್ಗಳು, ಖಾಸಗೀ ಹಣಕಾಸು ಸಂಸ್ಥೆಗಳು ಸದೃಡವಾಗುತ್ತವೆ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಹೇಳುತ್ತಾ ಮಾನ್ಯ ಸದಸ್ಯರು ಕಾರ್ಯಕ್ರಮದ ಉಪಯುಕ್ತತೆ ಪಡೆದುಕೊಳ್ಳಬೇಕೆಂದು ತಿಳಿಸಿದೆ.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರು, ಮಾಜಿ ಅಧ್ಯಕ್ಷರೂ ಆದ ಶ್ರೀಯುತ ಎಂ. ಭರದ್ವಾಜ್ರವರ ನಿಧನದ ಪ್ರಯುಕ್ತ ಸಭೆ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿತು. ಉಪಾಧ್ಯಕ್ಷರಾದ ಬಿ. ಗೋಪಿನಾಥ್ರವರು ಸ್ವಾಗತ ಕೋರಿದರು, ಕಾರ್ಯದರ್ಶಿ ವಸಂತ್ ಹೋಬಳಿದಾರ್ ನಿರೂಪಣೆ ನಡೆಸಿಕೊಟ್ಟರು. ತೆರಿಗೆ ಸಲಹಾ ಸಮಿತಿ ಛರ್ಮನ್ರಾದ ಇ. ಪರಮೇಶ್ವರರವರು ಪ್ರಸ್ತಾವಿಕ ನುಡಿ ನುಡಿದರು.

ಟ್ಯಾಕ್ಸ್-ಬಾರ್ ಅಸೋಷಿಯೇಸನ್ ನ ಅಧ್ಯಕ್ಷರಾದ ಮಂಜುನಾಥ್ ಅವರು ಮುಖ್ಯ ಅತಿಥಿಗಳ ಪರಿಚಯ ಕಾರ್ಯಕ್ರಮ ನಡೆಸಿಕೊಟ್ಟರು. ನಿರ್ದೇಶಕರುಗಳಾದ ಎಂ. ರಾಜು, ಕೆ.ಎಸ್. ಸುಕುಮಾರ್, ಪ್ರದೀಪ್ ವಿ. ಯಲಿ, ಗಣೇಶ್ ಎಂ. ಅಂಗಡಿ, ಮಾಜಿ ಅಧ್ಯಕ್ಷರುಗಳಾಜದ ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ, ಡಿ. ಎಂ. ಶಂಕರಪ್ಪ ಸಂಘದ ಸದಸ್ಯ ಬಂಧುಗಳು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಲೆಕ್ಕಪರಿಶೋಧಕರು, ತೆರಿಗೆ ಸಲಹೆಗಾರರು, ವೃತ್ತಿಪರರು, ಉಪಸ್ಥಿತರಿದ್ದು, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಸಹ-ಕಾರ್ಯದರ್ಶಿ ಜಿ. ವಿಜಯಕುಮಾರ್ರವರು ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kote SeethaRamanjaneya Temple ವೈಭವದಿಂದ ನಡೆದ ಶ್ರೀಆಂಜನೇಯಸ್ವಾಮಿ ರಥೋತ್ಸವ

Kote SeethaRamanjaneya Temple ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ...

Department of Kannada and Culture ಶ್ರೀಅಗ್ನಿಬನ್ನಿರಾಯಸ್ವಾಮಿಯವರ ಇತಿಹಾಸವನ್ನ ನಾವೆಲ್ಲಾ ತಿಳಿದುಕೊಳ್ಳಬೇಕು- ಆನಂದ್.

Department of Kannada and Culture ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು...

Rotary Club Shimoga ಚಿನ್ನ,ಬೆಳ್ಳಿ ಧಾರಣೆ ವ್ಯತ್ಯಾಸಕ್ಕೆ ಜಾಗತಿಕ ಸಮಸ್ಯೆಗಳೇ ಕಾರಣ- ಸೆಂಥಿಲ್ ವೆಲನ್.

Rotary Club Shimoga ಚಿನ್ನ ಮತ್ತು ಬೆಳ್ಳಿ ಕಷ್ಟಕಾಲದಲ್ಲಿ ಅಪತ್ಬಾಂದವ ರೀತಿಯಲ್ಲಿ ವರ್ತಿಸುತ್ತದೆ....

S. N. Channabasappa ಮಾದಕ ದ್ಯವ್ಯ ವ್ಯಸನ ವಿರೋಧಿ ಕ್ರಮಗಳಿಗೆ ವಿಶೇಷ ಕಾರ್ಯಪಡೆ ರಚನೆ ಮಾಡಿ- ಎಸ್.ಎನ್.ಚನ್ನಬಸಪ್ಪ.

S. N. Channabasappa ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು ಮತ್ತು ಮಾದಕ...